ನಟ ನಾಗಾರ್ಜುನರನ್ನು ಫಾಲೋ ಮಾಡ್ತೀನಿ: ಎಲ್ಲರ ಮುಂದೆ ಸತ್ಯ ಒಪ್ಕೊಂಡ Mega Star Chiranjeevi!

Published : Jun 23, 2025, 10:38 AM ISTUpdated : Jun 23, 2025, 10:42 AM IST
ನಟ ನಾಗಾರ್ಜುನರನ್ನು ಫಾಲೋ ಮಾಡ್ತೀನಿ: ಎಲ್ಲರ ಮುಂದೆ ಸತ್ಯ ಒಪ್ಕೊಂಡ Mega Star Chiranjeevi!

ಸಾರಾಂಶ

ಮೆಗಾಸ್ಟಾರ್‌ ಚಿರಂಜೀವಿ ಸೆನ್ಸೇಷನಲ್‌ ಹೇಳಿಕೆ ಕೊಟ್ಟಿದ್ದಾರೆ. ನಾಗಾರ್ಜುನ್‌ ಹಾದಿಯಲ್ಲೇ ತಾವೂ ಹೋಗ್ತೀವಿ ಅಂತ ಹೇಳಿದ್ದಾರೆ. ಹಾಗೇ ಪಾತ್ರಗಳು ಮಾಡೋಕೆ ರೆಡಿ ಅಂತಿದ್ದಾರೆ. 

ಸೀನಿಯರ್‌ ಹೀರೋಗಳು ಒಂದುಕಡೆ ಹೀರೋ ಆಗಿ ಸಿನಿಮಾ ಮಾಡ್ತಿದ್ರೆ, ಇನ್ನೊಂದು ಕಡೆ ಬೇರೆ ಹೀರೋಗಳ ಸಿನಿಮಾದಲ್ಲಿ ಗಟ್ಟಿ ಪಾತ್ರಗಳು ಸಿಕ್ಕಿದ್ರೆ ಮಾಡೋಕೆ ಹಿಂದೆ ಮುಂದೆ ನೋಡ್ತಿಲ್ಲ. ವೆಂಕಟೇಶ್‌ ಅದೇ ದಾರಿಯಲ್ಲಿ ಹೋಗ್ತಿದ್ದಾರೆ. ಹೀರೋ ಆಗಿ ಮಾಡ್ತಾನೇ ಮಲ್ಟಿಸ್ಟಾರರ್‌ ಮೂವೀಸ್‌ನಲ್ಲೂ ನಟಿಸ್ತಿದ್ದಾರೆ. ಗೆಲುವುಗಳನ್ನೂ ಕಾಣ್ತಿದ್ದಾರೆ. ಕಮಲ್‌ ಹಾಸನ್‌ ಬಹಳ ದಿನಗಳಿಂದ ಹೀಗೆ ಮಾಡ್ತಾನೇ ಬಂದಿದ್ದಾರೆ. `ಕಲ್ಕಿ 2898 AD` ಚಿತ್ರದಲ್ಲೂ ಹಾಗೇ ಪಾತ್ರ ಮಾಡಿದ್ರು. ಈಗ `ಕುಬೇರ`ದಲ್ಲಿ ನಾಗಾರ್ಜುನ್‌ ಟರ್ನ್‌ ತಗೊಂಡಿದ್ದಾರೆ. 

ಈ ಚಿತ್ರದಲ್ಲಿ ನಾಗಾರ್ಜುನ ಅವರು ದೀಪಕ್‌ ಪಾತ್ರದಲ್ಲಿ ನಟಿಸಿ ಮನಗೆದ್ದಿದ್ದಾರೆ. ಹೊಸಬಗೆಯಲ್ಲಿ ತಮ್ಮನ್ನ ತಾವು ತೋರಿಸಿಕೊಂಡಿದ್ದಾರೆ. `ಕೂಲಿ` ಚಿತ್ರದಲ್ಲೂ ನಟಿಸ್ತಿದ್ದಾರೆ. ಈಗ ಚಿರಂಜೀವಿ ಕೂಡ ಈ ದಾರಿ ಹಿಡಿಯೋಕೆ ಹೊರಟಿದ್ದಾರೆ ಅಂತ ಹೇಳಿದ್ದಾರೆ. `ಕುಬೇರ` ಸಕ್ಸಸ್‌ ಈವೆಂಟ್‌ನಲ್ಲಿ ಮಾತಾಡ್ತಾ, ನಾಗಾರ್ಜುನ್‌ ಹಾದಿಯಲ್ಲೇ ನಾನೂ ಹೋಗಬಹುದು ಅಂತ ಹೇಳಿದ್ದಾರೆ. ನಾಳೆ ಒಳ್ಳೆ ಪಾತ್ರಗಳು, ವಿಭಿನ್ನ ಪಾತ್ರಗಳು ಸಿಕ್ಕಿದ್ರೆ OTTಗೋ, ಸಿನಿಮಾಗೋ ನಟಿಸಬಹುದು. ನಾನೂ ನಟಿಸಬಹುದು ಅಂತ ಹೇಳಿದ್ದಾರೆ ಚಿರು.

ನಾಗಾರ್ಜುನ್‌ ತರಾನೇ ನಾನೂ ಬರಬಹುದು: ಚಿರು 

“ನಾನು ನಾಗಾರ್ಜುನ್‌ ಅವರನ್ನು ಎಲ್ಲ ವಿಷಯದಲ್ಲೂ ಸ್ಫೂರ್ತಿಯಾಗಿ ತಗೋತೀನಿ. ಗ್ಲಾಮರ್‌ ವಿಷಯದಲ್ಲಿ, ಫಿಟ್‌ನೆಸ್‌ ವಿಷಯದಲ್ಲಿ, ಕೂಲ್‌ ಆಗಿರೋ ವಿಷಯದಲ್ಲಿ, ಯಾವುದೇ ವಿಷ್ಯವನ್ನು ಕೂಲ್‌ ಆಗಿ ಹ್ಯಾಂಡಲ್‌ ಮಾಡೋ ವಿಷಯದಲ್ಲಿ ಸ್ಫೂರ್ತಿ ಪಡೆಯುತ್ತೇನೆ. ನಮಗೆ ಅವ್ರು ಕ್ಯಾಪ್ಟನ್‌ ತರ, ಈಗ ಈ ತರ ಪಾತ್ರಗಳು ಮಾಡೋ ವಿಷಯದಲ್ಲೂ ನಾಗಾರ್ಜುನ್‌ ಅವ್ರೇ ಸ್ಫೂರ್ತಿ” ಅಂತ ಹೇಳಿದ್ದಾರೆ ಚಿರು"

`ಕುಬೇರ` ಸಕ್ಸಸ್‌ ಇವೆಂಟ್‌ಗೆ ಅತಿಥಿಯಾಗಿ ಬಂದಿದ್ದ ಚಿರು “ನಾನು ನಾಗಾರ್ಜುನ್‌ ಅವ್ರನ್ನ ಈ ಸಿನಿಮಾ ಮುಂಚೆ ಒಂದ್ಸಲ ಭೇಟಿ ಮಾಡಿದ್ದೆ. `ಕುಬೇರ` ಬಗ್ಗೆ ಕೇಳಿದಾಗ, ಇದ್ರಲ್ಲಿ ಒಂದು ವಿಭಿನ್ನ ಪಾತ್ರ ಮಾಡಿದ್ದೀನಿ. ಧನುಷ್‌ ಲೀಡ್‌ ಪಾತ್ರ ಅಂತ ಹೇಳಿದ್ರು. ಹೇಗೆ ಒಪ್ಕೊಂಡಿರಿ ಅಂತ ಕೇಳಿದೆ. ನನಗೆ ಎಲ್ಲೋ ಡಿಫರೆಂಟ್‌ ಆಗಿ ಮಾಡ್ಬೇಕು ಅನ್ಸುತ್ತೆ. ಹೊಸ ದಾರಿ ತೆರೆಯಬೇಕು ಅನ್ಸುತ್ತೆ. ಹಾಗಾಗಿ ಈ ಸಿನಿಮಾ ಉಪಯೋಗ ಆಗುತ್ತೆ ಅಂತ ಹೇಳಿದ್ರು. ನಾನು ಸಿನಿಮಾ ನೋಡಿದೆ. ಅವ್ರು ಹೇಳಿದ್ದು 100% ಸರಿ. ಈ ಸಿನಿಮಾ ನಂತ್ರ ಅವ್ರು ಇನ್ನೂ 40 ವರ್ಷ ಚೆನ್ನಾಗಿ ನಟಿಸ್ತಾರೆ ಅನ್ನೋದು ನಿಜ. ಈ ಪಾತ್ರವನ್ನು ಶೇಖರ್‌ ಬರೆದಿದ್ದು, ಅದನ್ನು ನಾಗಾರ್ಜುನ್‌ ಒಪ್ಕೊಂಡು ಮಾಡಿದ್ದು, ಇದೇ ಫಸ್ಟ್‌ ಸಕ್ಸಸ್‌ ಅಂತ ಅನ್ಕೋತೀನಿ” ಎಂದಿದ್ದಾರೆ ಚಿರಂಜೀವಿ.

ಧನುಷ್‌ಗೆ ರಾಷ್ಟ್ರ ಪ್ರಶಸ್ತಿ ಸಿಗ್ಬೇಕು

“ಇದು ನನ್ನ ಸಕ್ಸಸ್‌ ಮೀಟ್‌ ತರ ಅನ್ಸುತ್ತೆ. ಅಷ್ಟು ಖುಷಿ ಪಡ್ತಿದ್ದೀನಿ. ಇಲ್ಲಿಗೆ ನಾನು ಅತಿಥಿಯಾಗಿ ಬಂದಿಲ್ಲ. ನಿಮ್ಮಲ್ಲಿ ಒಬ್ಬರಾಗಿ, ಆತ್ಮೀಯನಾಗಿ ಬಂದಿದ್ದೀನಿ. ದೇವ ಪಾತ್ರದಲ್ಲಿ ಧನುಷ್‌ ಬಿಟ್ಟರೆ ಬೇರೆ ಯಾರನ್ನೂ ಊಹಿಸಿಕೊಳ್ಳೋಕೆ ಆಗಲ್ಲ. ಆ ಪಾತ್ರ ನೋಡಿದ್ಮೇಲೆ ಹಾಗೆ ಅನ್ಸ್ತು. ಸಿನಿಮಾ ನೋಡ್ತಿದ್ದಾಗ ಧನುಷ್‌ ಅಂತ ಗುರುತಿಸೋಕೇ ಆಗ್ಲಿಲ್ಲ. ಅಷ್ಟು ಪಾತ್ರದಲ್ಲಿ ಮುಳುಗಿದ್ದರು. ಈ ಚಿತ್ರದಲ್ಲಿ ಹೃದಯಕ್ಕೆ ಹತ್ತಿರವಾದ ಪಾತ್ರ ದೇವ. ಈ ಪಾತ್ರಕ್ಕೆ ಧನುಷ್‌ ಬಿಟ್ಟರೆ ಬೇರೆ ಯಾರೂ ಮಾಡೋಕೆ ಆಗಲ್ಲ. ಅಷ್ಟು ದೊಡ್ಡ ಸ್ಟಾರ್‌ ಇಮೇಜ್‌ ಇದ್ರೂ ಈ ತರ ಪಾತ್ರ ಮಾಡೋ ನಟ ಯಾರಾದ್ರೂ ಇದ್ದಾರೆ ಅಂದ್ರೆ ಅದು ಇಂಡಿಯಾದಲ್ಲಿ ಧನುಷ್‌ ಒಬ್ಬರೇ. ಅಷ್ಟು ನೈಸರ್ಗಿಕವಾಗಿ ಪಾತ್ರದಲ್ಲಿ ಇದ್ದರು. ಈ ಸಿನಿಮಾಗೆ ಅವ್ರಿಗೆ ಬೆಸ್ಟ್‌ ಆಕ್ಟರ್‌ ಪ್ರಶಸ್ತಿ ಸಿಗ್ಬೇಕು. ಮುಂಚಿತವಾಗಿಯೇ ಅಭಿನಂದನೆಗಳು ಹೇಳ್ತಿದ್ದೀನಿ. ಅವ್ರಿಗೆ ಸಿಗದಿದ್ರೆ ರಾಷ್ಟ್ರ ಪ್ರಶಸ್ತಿ ಅನ್ನೋದಕ್ಕೆ ಅರ್ಥಾನೇ ಇಲ್ಲ. ಅವ್ರಿಗೆ ಈ ಸಿನಿಮಾಗೆ ಪ್ರಶಸ್ತಿ ಸಿಕ್ಕಿದ್ರೆ ಎಲ್ಲರಿಗೂ ಹೆಮ್ಮೆ” ಎಂದಿದ್ದಾರೆ. 

ರಶ್ಮಿಕಾ ನೋಡಿದ್ರೆ ಸೌಂದರ್ಯ ನೆನಪಾಗ್ತಾರೆ

“ರಶ್ಮಿಕಾ ಮಂದಣ್ಣ ಫೆಂಟಾಸ್ಟಿಕ್‌ ಆಗಿ ನಟಿಸಿದ್ದಾರೆ. ಅವ್ರ ಮೊದಲ ಸಿನಿಮಾ ಬಂದಾಗ ನಾನು ಅತಿಥಿಯಾಗಿ ಹೋಗಿದ್ದೆ. ಅವ್ರು ರಾಷ್ಟ್ರೀಯ ಅಲ್ಲ, ಅಂತಾರಾಷ್ಟ್ರೀಯ ಕ್ರಶ್‌ ಆಗಿಬಿಟ್ಟಿದ್ದಾರೆ. ಅವ್ರ ಪಾತ್ರದ ತೀವ್ರತೆ ಈ ಸಿನಿಮಾದಲ್ಲಿ ಕಾಣಿಸ್ತು. ಸಮೀರ ಪಾತ್ರ ನೋಡಿದಾಗ `ಚೂಡಾಲನಿ ಉಂಡಿ` ಸಿನಿಮಾದ ಸೌಂದರ್ಯ ನೆನಪಾದ್ರು. ಈ ಸಿನಿಮಾದಲ್ಲಿ ಅವ್ರ ಪಾತ್ರದ ಬದಲಾವಣೆ ಅದ್ಭುತವಾಗಿದೆ. ಸುನಿಲ್‌ ಅಪ್ಪ ನಾರಾಯಣ ದಾಸ್‌ ಬಹಳ ಪ್ರಾಮಾಣಿಕ ವ್ಯಕ್ತಿ. ಈ ಸಿನಿಮಾ ಬ್ಯುಸಿನೆಸ್‌ನಲ್ಲಿ ಅಷ್ಟು ಪ್ರಾಮಾಣಿಕ ವ್ಯಕ್ತಿಗಳು ಬೇರೆ ಯಾರೂ ಇಲ್ಲ. ಅವ್ರ ವಾರಸುದಾರರಾಗಿ ಸುನಿಲ್‌, ಮೂರನೇ ತಲೆಮಾರಿನಲ್ಲಿ ಜಾನ್ವಿ ಬರ್ತಿರೋದು ಖುಷಿ. ಜಾನ್ವಿ ಜೊತೆ ಒಂದು ಸಿನಿಮಾ ಮಾಡ್ತೀನಿ(ನಗ್ತಾ)`” ಎಂದಿದ್ದಾರೆ ಚಿರು. 

ಚಿರು ತಂಡದ ಬಗ್ಗೆ ಹೇಳ್ತಾ, “ಕ್ಯಾಮರಾ ಮ್ಯಾನ್ ನಿಖೇತ್‌ ಫೆಂಟಾಸ್ಟಿಕ್‌ ಕೆಲಸ ಮಾಡಿದ್ದಾರೆ. ಸಿನಿಮಾ ಬಹಳ ರಿಚ್‌ ಆಗಿದೆ. ಇಲ್ಲಿ ಯುವಕರನ್ನ ನೋಡ್ತಿರೋದು ಖುಷಿ. ಇಂಡಸ್ಟ್ರಿ ಮುಂದೆ ಹೋಗ್ಬೇಕು ಅಂದ್ರೆ ಈ ತರ ಯುವಕರು ಬರ್ಬೇಕು. ಹೊಸ ಪ್ರತಿಭೆಗಳು ಬರ್ಬೇಕು. ಇದೇ ಶಕ್ತಿಯಿಂದ ಇಂಡಸ್ಟ್ರಿ ಮುಂದುವರಿಯಲಿ ಅಂತ ಹಾರೈಸ್ತೀನಿ. ದೇವಿಶ್ರೀಪ್ರಸಾದ್‌ ನನ್ನ ಮಗ ತರ. ನನ್ನ ಕಮ್‌ಬ್ಯಾಕ್‌ ಮೂವಿ `ಖೈದಿ ನಂಬರ್‌ 150`ನಲ್ಲೂ ಅದ್ಭುತ ಹಾಡುಗಳನ್ನ ಕೊಟ್ಟಿದ್ರು. ಅವರ ಶಕ್ತಿ ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ. ದೇಶವೇ ಅವ್ರನ್ನ ಹೊಗಳ್ತಿದೆ. ಸಿನಿಮಾ ಬಹಳ ಮ್ಯೂಸಿಕಲ್‌ ಆಗಿದೆ” ಎಂದಿದ್ದಾರೆ. 

ಚಿರಂಜೀವಿ ಬಗ್ಗೆ ನಾಗಾರ್ಜುನ್‌ ಮಾತನಾಡುತ್ತ, “ನನ್ನ ಸಹೋದರ ಪದ್ಮವಿಭೂಷಣ ಮೆಗಾಸ್ಟಾರ್‌ ಚಿರಂಜೀವಿ ಅವ್ರಿಗೆ ಧನ್ಯವಾದಗಳು. ಇಡೀ ಇಂಡಸ್ಟ್ರಿ ಚಿರು ಅವರನ್ನು ಪ್ರೀತಿಸ್ತಾರೆ. `ವಿಕ್ರಮ್‌` ಸಿನಿಮಾ ದೊಡ್ಡ ಹಿಟ್‌ ಆದಾಗ ಕಮಲ್‌ ಇಲ್ಲಿಗೆ ಬಂದಿದ್ರು. ಅವ್ರನ್ನ ಮನೆಗೆ ಕರ್ಕೊಂಡು ಹೋಗಿ ಊಟ ಹಾಕಿ ಕಳಿಸಿದ್ರು” ಎಂದಿದ್ದಾರೆ. 

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Baahubali Movie: ಬಾಹುಬಲಿ ನನಗೆ ಸಿನಿಮಾ ಆಗಿರಲಿಲ್ಲ; ಯುದ್ಧ ಆಗಿತ್ತು: ನಟ ಪ್ರಭಾಸ್!
Chiranjeevi Shock: 'ಮೊನ್ನೆಯಷ್ಟೇ ನಗುನಗುತ್ತಿದ್ದ'.. ಕೆ ಭಾಗ್ಯರಾಜ್ ನಿಧನಕ್ಕೆ ಮೆಗಾಸ್ಟಾರ್ ಚಿರಂಜೀವಿ ದಿಗ್ಭ್ರಮೆ; ಭಾವನಾತ್ಮಕ ಪೋಸ್ಟ್