ಶೂಟಿಂಗ್ ಮಧ್ಯೆ ಎದೆನೋವು: ಹಿರಿಯ ನಟ ಕೃಷ್ಣ ನಾಡಿಗ್ ಇನ್ನಿಲ್ಲ

Suvarna News   | Asianet News
Published : Oct 18, 2020, 09:28 AM ISTUpdated : Oct 18, 2020, 09:39 AM IST
ಶೂಟಿಂಗ್ ಮಧ್ಯೆ ಎದೆನೋವು: ಹಿರಿಯ ನಟ ಕೃಷ್ಣ ನಾಡಿಗ್ ಇನ್ನಿಲ್ಲ

ಸಾರಾಂಶ

ಪೈಲ್ವಾನ್ ನಟ ಇನ್ನಿಲ್ಲ | ಬರಹಗಾರ ಕೃಷ್ಣ ನಾಡಿಗ್ ಹೃದಯಾಘಾತದಿಂದ ಸಾವು | ನಿರ್ದೇಶಕನಾಗುವ ಕನಸು ಈಡೇರಲಿಲ್ಲ

ಹಿರಿಯ ನಟ, ಕಲಾವಿದ, ಬರಹಗಾರ ಕೃಷ್ಣ ನಾಡಿಗ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಕೃಷ್ಣ ನಾಡಿಗ್ ಲಗ್ನಪತ್ರಿಕೆ ಧಾರವಾಹಿಯಲ್ಲಿ ನಟಿಸುತ್ತಿದ್ದರು. ಚಿತ್ರೀಕರಣದ ಸಮಯದಲ್ಲಿ ಎದೆ ನೋವು ಕಾಣಿಸಿಕೊಂಡ ಕಾರಣ ಕ್ಲಿನಿಕ್ ನಲ್ಲಿ ಇಸಿಜಿ ಮಾಡಿಸಿದ್ದಾರೆ.

ನಂತರ ಎದೆ ನೋವು ಹೆಚ್ಚಾದ ಕಾರಣ ಜಯದೇವಾ ಆಸ್ಪತ್ರೆಗೆ ಕರೆದೊಯ್ಯು ಸಂದರ್ಭ ಮೃತ ಪಟ್ಟಿದ್ದಾರೆ. ಕಿರುತೆರೆ ಧಾರವಾಹಿಯಲ್ಲಿ ಮಾತ್ರವಲ್ಲದೆ ಸಿನಿಮಾಗಳಲ್ಲಿಯೂ ಅಭಿನಯಿಸಿ ಪ್ರೇಕ್ಷಕರನ್ನು ರಂಜಿಸಿದ್ದರು. ಪೈಲ್ವಾನ್, ಆದಿ ಲಕ್ಷ್ಮಿ ಪುರಾಣ ಹೀಗೆ ಇನ್ನು ಸಾಕಷ್ಟು ಚಿತ್ರಗಳಲ್ಲಿ ಇವರು ನಟಿಸಿದ್ದರು.

ಕಿರುತೆರೆ ಧಾರವಾಹಿಯಲ್ಲಿ ಮಾತ್ರವಲ್ಲದೆ ಸಿನಿಮಾಗಳಲ್ಲಿಯೂ ಅಭಿನಯಿಸಿ ಪ್ರೇಕ್ಷಕರನ್ನು ರಂಜಿಸಿದ್ದರು. ಪೈಲ್ವಾನ್ . ಆದಿ ಲಕ್ಷ್ಮಿ ಪುರಾಣ ಹೀಗೆ ಇನ್ನು ಸಾಕಷ್ಟು ಚಿತ್ರಗಳಲ್ಲಿ ಇವರು ನಟಿಸಿದ್ದರು.

ಭಾರತದ ಖ್ಯಾತ ವಸ್ತ್ರ ವಿನ್ಯಾಸಕಿ - ಆಸ್ಕರ್ ಪುರಸ್ಕೃತೆ ನಿಧನ

ನಾಡಿಗ್ ಚಿಕ್ಕಮಗಳೂರು ಮೂಲದವರು. ನಾಟಗಳ ಬಗ್ಗೆ ವಿಶೇಷ ಆಸಕ್ತಿ ಇಟ್ಟುಕೊಂಡ ಇವರು ಪುಟ್ಟಣ್ಣ ಕಣಗಾಲ್ ಚಿನಿಮಾಗಳನ್ನು ನೋಡಿ ನಿರ್ದೇಶಕನಾಗುವ ಕನಸು ಹೊತ್ತು ಬಂದಿದ್ದರು. ಆದರೆ ಆಗಿದ್ದು ನಟ.

ನಿರ್ದೇಶನದ ಬಗ್ಗೆ ಹೆಚ್ಚು ಆಸಕ್ತಿ ಇಟ್ಟುಕೊಂಡಿದ್ದ ಅವರು ಕರೆಯೇ ಕೋಗಿಲೆ ಮಾಧವನ ಎಂಬ ಸಿನಿಮಾ ಮಾಡಲು ಹೊರಟಿದ್ದರೂ, ಸಿನಿಮಾ ಅರ್ಧದಲ್ಲಿ ನಿಂತಿತ್ತು. ಹಿರಿಯ ಕಲಾವಿದನ ಅಗಲಿಕೆ ಚಿತ್ರರಂಗದ ಗಣ್ಯರು ಸಂತಾಪ ಸೂಚಿಸಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ರಶ್ಮಿಕಾ- ಸ್ಮೃತಿ ಇಬ್ಬರ ಎಂಗೇಜ್​ಮೆಂಟೂ ಮುರಿದುಬಿತ್ತು: ಮಂದಣ್ಣ- ಮಂಧಾನ ಹೆಸರಲ್ಲಿ ಏನಿದೆ ಗ್ರಹಚಾರ?
ಕೊನೆಗೂ ಅದಿತಿ ರಾವ್ ಹೈದರಿ ಗುಟ್ಟು ರಟ್ಟಾಯ್ತು.. ಎಷ್ಟು ದಿನ ಅಂತ ಮುಚ್ಚಿಡೋಕಾಗುತ್ತೆ ಹೇಳಿ..!?