ಹೃದಯ ಸಮಸ್ಯೆಯ ನೋವಿನ ಸಂಗತಿ ತೆರೆದಿಟ್ಟ ಪವನ್​ ಕಲ್ಯಾಣ್​ ಮಾಜಿ ಪತ್ನಿ

By Suvarna NewsFirst Published Feb 16, 2023, 2:54 PM IST
Highlights

ತಮಿಳು, ತೆಲುಗಿನ ಕೆಲವು ಚಿತ್ರಗಳಲ್ಲಿ ನಟಿಸಿ ಅಸಂಖ್ಯ ಅಭಿಮಾನಿಗಳನ್ನು ಗಳಿಸಿರುವ ನಟ ಪವನ್​ ಕಲ್ಯಾಣ್​ ಅವರ ಮಾಜಿ ಪತ್ನಿ ರೇಣು ದೇಸಾಯಿ ಹೃದಯ ಸಮಸ್ಯೆಯಿಂದ ಬಳಲುತ್ತಿದ್ದು, ಇದರ ಬಗ್ಗೆ ಶೇರ್​ ಮಾಡಿದ್ದಾರೆ. ಅವರು ಹೇಳಿದ್ದೇನು? 
 

ಟಾಲಿವುಡ್​ (Tollywood) ಪವರ್ ಸ್ಟಾರ್ ಪವನ್ ಕಲ್ಯಾಣ್ (Pawan Kalyan) ಮಾಜಿ ಪತ್ನಿ ರೇಣು ದೇಸಾಯಿ (Renu desai) ಟಾಲಿವುಡ್​ನಲ್ಲಿ ಚಿರಪರಿಚಿತ. 2000ನೇ ದಶಕದಲ್ಲಿ ಕೆಲವೊಂದು ಚಿತ್ರದಲ್ಲಿ ಅಭಿನಯಿಸಿ ನಂತರ ಏಕಾಏಕಿ ನಾಪತ್ತೆಯಾಗಿದ್ದರಿವರು. 2003 ರಲ್ಲಿ ತೆರೆ ಕಂಡಿದ್ದ ಜಾನಿ ಚಿತ್ರದ ಬಳಿಕ ಕಾಣಿಸಿಕೊಳ್ಳಲೇ ಇಲ್ಲ. 2022ರಲ್ಲಿ ಬರೋಬ್ಬರಿ 19 ವರ್ಷಗಳ ಬಳಿಕ  ರೇಣು ದೇಸಾಯಿ ಅಭಿನಯದ ಟೈಗರ್ ನಾಗೇಶ್ವರ್ ರಾವ್ (Tiger Nageshwara Rao)ಸಿನಿಮಾದಲ್ಲಿ ಒಂದು ಪ್ರಮುಖ ರೋಲ್​  ನಿಭಾಯಿಸಿದ್ದರು. ಇದು ಅವರಿಗೆ ಖ್ಯಾತಿಯನ್ನೂ ತಂದುಕೊಟ್ಟಿದೆ.    ಹಿರಿ ತೆರೆ ಮಾತ್ರವಲ್ಲದೇ ಕಿರುತೆರೆ ಅಭಿನಯದ ಜೊತೆಗೆ ಎಡಿಟಿಂಗ್ ಕೂಡ ಗೊತ್ತಿರೋ ನಟಿ ಇವರು. ಒಂದು ಸಿನಿಮಾಕ್ಕೆ ನಿರ್ದೇಶನ ಕೂಡ ಮಾಡಿದ್ದಾರೆ.  ಕಾಸ್ಟೂಮ್ ಡಿಸೈನ್ (Costume Design) ಕೂಡ ಮಾಡುವಲ್ಲಿ ಇವರು ನಿಸ್ಸೀಮರು.  

2009ರಲ್ಲಿ ಸೂಪರ್​ಸ್ಟಾರ್​ ಪವನ್​ ಕಲ್ಯಾಣ್​ (Pawan Kalyan) ಅವರನ್ನು ವಿವಾಹವಾದರು. ರೇಣು ಮತ್ತು ಪವನ್ ಕಲ್ಯಾಣ್ 'ಬದ್ರಿ', 'ಜೇಮ್ಸ್ ಪಾಂಡು' ಮತ್ತು 'ಜಾನಿ' ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.  ಆದರೆ ಈ ದಾಂಪತ್ಯ ನಾಲ್ಕೇ ವರ್ಷಗಳಲ್ಲಿ ಮುರಿದು ಬಿತ್ತು. 2012ರಲ್ಲಿ ವಿಚ್ಛೇದನ ಪಡೆದುಕೊಂಡರು. ಈ ದಂಪತಿಗೆ ಇಬ್ಬರು ಪುತ್ರಿಯರು ಇದ್ದಾರೆ. ಇದೀಗ ಮತ್ತೆ ರೇಣು ದೇಸಾಯಿ ಮುನ್ನೆಲೆಗೆ ಬಂದಿದ್ದಾರೆ. ಪವನ್ ಕಲ್ಯಾಣ್‌ನಿಂದ ಬೇರ್ಪಟ್ಟ ನಂತರ ರೇಣುದೇಸಾಯಿ ತನ್ನ ಇಬ್ಬರು ಮಕ್ಕಳೊಂದಿಗೆ ವಾಸಿಸುತ್ತಿದ್ದಾರೆ. ಕಾಲಕಾಲಕ್ಕೆ ಸಾಮಾಜಿಕ ಜಾಲತಾಣಗಳ (social media) ಮೂಲಕ ತಮ್ಮ ಕಿಡಿಗೇಡಿತನ, ಮೋಜಿನ ವಿಷಯಗಳನ್ನು ಹಂಚಿಕೊಳ್ಳುತ್ತಾರೆ.  ಇಬ್ಬರು ಮಕ್ಕಳಾದ ಅಕಿರಾ (Akira) ಮತ್ತು ಆದ್ಯಾ (Adhya)ಜೊತೆ ಪುಣೆಯಲ್ಲಿ ವಾಸಿಸುತ್ತಿರುವ ಇವರು, ಸಾಮಾಜಿಕ ಜಾಲತಾಣದಲ್ಲಿ ಆ್ಯಕ್ಟೀವ್​ ಆಗಿದ್ದಾರೆ. 

Latest Videos

Valentines Day: ಬೆಡ್​ರೂಮಲ್ಲಿ ತಬ್ಬಿ ಮುದ್ದಾಡಿದ ವೀಡಿಯೋ ಪೋಸ್ಟ್ ಮಾಡಿದ ರಶ್ಮಿಕಾ ಮಂದಣ್ಣ!

ಆದರೆ ಈ ಬಾರಿ ಅವರು ನೋವಿನ ಸಂಗತಿಯೊಂದನ್ನು ಶೇರ್​ ಮಾಡಿಕೊಂಡಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೋವನ್ನು ಹಂಚಿಕೊಂಡಿರುವ ಅವರು,  'ನಾನು ಕೆಲವು ವರ್ಷಗಳಿಂದ ಹೃದಯ (Heart) ಮತ್ತು ಇತರ ಕೆಲವು ಆರೋಗ್ಯ ಸಮಸ್ಯೆಗಳೊಂದಿಗೆ (health issues) ಹೋರಾಡುತ್ತಿದ್ದೇನೆ. ಎಂದು ನನ್ನ ಹತ್ತಿರದ ಮತ್ತು ಆತ್ಮೀಯ ಎಲ್ಲರಿಗೂ ತಿಳಿದಿದೆ. ಕೆಲವೊಮ್ಮೆ ಅರ್ಥಮಾಡಿಕೊಳ್ಳುವ ಶಕ್ತಿಯನ್ನು ಕಂಡು ಕೊಳ್ಳುವುದು ನಿಜವಾಗಿಯೂ ಕಷ್ಟ' ಎಂದು ಬರೆದುಕೊಂಡಿದ್ದಾರೆ. ತಾವು ಈ ಪೋಸ್ಟ್​ ಬರೆಯುತ್ತಿರುವುದಕ್ಕೆ ಕಾರಣವನ್ನು ಬಿಚ್ಚಿಟ್ಟಿರುವ ರೇಣು,  'ನಾನು ಇದನ್ನು ಇಂದು ಇಲ್ಲಿ ಪೋಸ್ಟ್ ಮಾಡಲು ಕಾರಣವೆಂದರೆ ನಾನು ಮತ್ತು ಅವರ ಸಮಸ್ಯೆಗಳೊಂದಿಗೆ ಹೋರಾಡುತ್ತಿರುವ ಇತರ ಅನೇಕರಿಗೆ ನೆನಪಿಸುತ್ತೇನೆ. ನಾವು ಬಲವಾಗಿರಬೇಕು. ನಿಮ್ಮ ಮತ್ತು ಜೀವನದಲ್ಲಿ ಭರವಸೆ ಕಳೆದುಕೊಳ್ಳಬೇಡಿ' ಎಂದು ಹೇಳಿದ್ದಾರೆ.

'ನಾನು ಚಿಕಿತ್ಸೆ ಪಡೆಯುತ್ತಿದ್ದೇನೆ. ಔಷಧಿ (medicines) ತೆಗೆದುಕೊಳ್ಳುತ್ತಿದ್ದೇನೆ, ಯೋಗ ಮಾಡುತ್ತಿದ್ದೇನೆ. ಶೀಘ್ರದಲ್ಲೇ ಸಹಜ ಜೀವನಕ್ಕೆ ಮರಳುತ್ತೇನೆ ಎನ್ನುವ ವಿಶ್ವಾಸವಿದೆ ಮತ್ತು ಶೂಟಿಂಗ್‌ಗೆ ಮರಳುತ್ತೇನೆ. ಈ ಬ್ರಹ್ಮಾಂಡ ಹಲವು ನಿಗೂಢಗಳನ್ನು ನಮ್ಮಿಂದ ಮರೆಮಾಚುತ್ತದೆ. ಅದು ಯಾವಾಗ ಯಾವ ರೂಪದಲ್ಲಿ ನಿಗೂಢ ಹೊರಗೆ ಬರುತ್ತದೆಯೋ ತಿಳಿಯುವುದಿಲ್ಲ. ಆದರೆ ನಾನು ಖಂಡಿತವಾಗಿಯೂ ಆರೋಗ್ಯವಂತಳಾಗಿ ಬರುತ್ತೇನೆ ಎನ್ನುವ ಭರವಸೆ ಇದೆ' ಎಂದಿದ್ದಾರೆ. ಇವರ ಪೋಸ್ಟ್​ಗೆ ಸಹಸ್ರಾರು ಅಭಿಮಾನಿಗಳು ಪ್ರತಿಕ್ರಿಯೆ ನೀಡುತ್ತಿದ್ದಾರೆ.  ಶೀಘ್ರವೇ ಚೇತರಿಸಿಕೊಳ್ಳುವಂತೆ ಕಮೆಂಟ್‌ (comments) ಮಾಡುತ್ತಿದ್ದಾರೆ. ಅಭಿಮಾನಿಯೊಬ್ಬರು, 'ನಿಮಗೆ ಹೆಚ್ಚಿನ ಬಲ ಸಿಗಲಿ ಮೇಡಂ, ಹಿಂದೆಂದಿಗಿಂತಲೂ ಬಲವಾಗಿ ಹಿಂತಿರುಗಿ' ಎಂದು ಬರೆದಿದ್ದಾರೆ. ಮತ್ತೊಬ್ಬ ಅಭಿಮಾನಿ, 'ದೇವರು ನಿಮಗೆ ಬೇಕಾದ ಎಲ್ಲಾ ಶಕ್ತಿಯನ್ನು ನೀಡಲಿ ಮೇಡಂ, ಶೀಘ್ರದಲ್ಲೇ ಗುಣಮುಖರಾಗಲಿ ಎಂದು ಬರೆದಿದ್ದಾರೆ. 

ಹಣ ಪೀಕಲು ರಾಖಿ ಮೊದಲ ಗಂಡಂಗೂ ಹೀಗೆ ಮಾಡಿದ್ಲು ಎಂದ ಆದಿಲ್ ಲಾಯರ್​!

 

 
 
 
 
 
 
 
 
 
 
 
 
 
 
 

A post shared by renu desai (@renuudesai)

click me!