ಕನ್ನಡಪ್ರಭ ಸಿನಿವಾರ್ತೆ: ಕಮಲ್ ಹಾಸನ್ ನಟನೆ, ನಿರ್ಮಾಣದ 'ಥಗ್ಲೈಫ್' ರಿಲೀಸ್ ಆದ ವಾರದೊಳಗೇ ಅರ್ಧಕ್ಕರ್ಧ ಥೇಟರ್ನಿಂದ ಹೊರದಬ್ಬಲ್ಪಟ್ಟಿದೆ. ಭಾರತದಲ್ಲಿ 4917 ಸ್ಕ್ರೀನ್ಗಳಲ್ಲಿ ಬಿಡುಗಡೆಯಾಗಿದ್ದ ಚಿತ್ರ ಈಗ ಕೇವಲ 2089 ಸ್ಟೀನ್ಗಳಲ್ಲಿ ಪ್ರದರ್ಶನಗೊಳ್ಳುತ್ತಿದೆ. ಎಷ್ಟೋ ಸೀನ್ ಗಳಲ್ಲಿ ಜನರಿಲ್ಲದೆ ಪ್ರದರ್ಶನ ರದ್ದಾಗಿದೆ. 6ನೇ ದಿನಕ್ಕೆ ಒಟ್ಟು 41 ಕೋಟಿ ರು. ಮಾತ್ರ ಕಲೆಕ್ಷನ್ ಆಗಿದೆ. ಇದರ ಜೊತೆಗೇ ಬಿಡುಗಡೆಯಾದ 'ಹೌಸ್ಫುಲ್ 5' ಸಿನಿಮಾ, 'ಥಗ್ಲೈಫ್' ಅನ್ನು ಸಲೀಸಾಗಿ ಹಿಂದಕ್ಕೆ ಹಾಕಿ ನಾಲ್ವೇ ದಿನದಲ್ಲಿ 100 ಕೋಟಿ ಕ್ಲಬ್ ಸೇರಿದೆ. ಮಣಿರತ್ನಂ ಥಗ್ಲೈಫ್ ಸಿನಿಮಾದ ನಿರ್ದೇಶಕರು.

08:02 PM (IST) Jun 12
ಆಮಿರ್ ಖಾನ್ ತಮ್ಮ ವಿಚ್ಛೇದನಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ರೀನಾ ದತ್ತಾ ಮತ್ತು ಕಿರಣ್ ರಾವ್ ಅವರೊಂದಿಗಿನ ವಿಚ್ಛೇದನವು ಕುಟುಂಬಕ್ಕೆ ನೋವಿನ ಸಂಗತಿಯಾಗಿದ್ದರೂ, ಎಲ್ಲರೂ ಒಟ್ಟಾಗಿ 'ಪಾನಿ ಫೌಂಡೇಶನ್'ಗಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
07:50 PM (IST) Jun 12
ಅಪೋಲೋ ಆಸ್ಪತ್ರೆಗಳ ಸಿಎಸ್ಆರ್ನ ಉಪಾಧ್ಯಕ್ಷೆ ಶ್ರೀಮತಿ ಉಪಾಸನಾ ಕಾಮಿನೇನಿ ಕೊನಿಡೇಲಾ ಅವರು, 'ಆರೋಗ್ಯ ರಕ್ಷಣಾ ನಾಯಕರಾಗಿ, ಅನಾರೋಗ್ಯಕ್ಕೆ ಚಿಕಿತ್ಸೆ ನೀಡುವುದು ಮಾತ್ರವಲ್ಲದೆ ಜಾಗೃತಿ, ಶಿಕ್ಷಣ ಮತ್ತು ಪ್ರವೇಶದ ಮೂಲಕ ಅದನ್ನು ನಿರೀಕ್ಷಿಸುವ ಜವಾಬ್ದಾರಿ ನಮಗಿದೆ. ಹಲವಾರು ಮಹಿಳೆಯರಿಗೆ
07:17 PM (IST) Jun 12
ಈ ವಿಮಾನ ದುರಂತದ ಬಗ್ಗೆ ಕನ್ನಡದ ರಾಕಿಂಗ್ ಸ್ಟಾರ್ ಯಶ್ ಅವರು ಸೋಷಿಯಲ್ ಮೀಡಿಯಾ ಎಕ್ಸ್ (X) ನಲ್ಲಿ ಪೋಸ್ಟ್ ಮಾಡಿದ್ದಾರೆ. ಅಹಮದಾಬಾದ್ ದುರಂತ ನಿಜಕ್ಕೂ ಭಯಾನಕ. ಈ ದುರಂತದಲ್ಲಿ ಮಡಿದ ಎಲ್ಲಾ ಪ್ರಯಾಣಿಕರು, ಸಿಬ್ಬಂದಿಗಳು ಹಾಗೂ ಸ್ಥಳದಲ್ಲಿದ್ದು ಇಹಲೋಕ ತ್ಯಜಿಸಿದ ಎಲ್ಲರ ಬಗ್ಗೆಯೂ ನನ್ನ ಹೃದಯ..
06:14 PM (IST) Jun 12
ಬಾಲಿವುಡ್ ನಟಿ ಅನನ್ಯಾ ಪಾಂಡೆ ಸೋಶಿಯಲ್ ಮೀಡಿಯಾದಲ್ಲಿ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಫೋಟೋಗಳಲ್ಲಿ ಅವರ ಉಬ್ಬಿದ ತುಟಿಗಳು ಅಭಿಮಾನಿಗಳಿಗೆ ಶಾಕ್ ನೀಡಿವೆ. 'ಪತಿ ಪತ್ನಿ ಔರ್ ವೋ' ಖ್ಯಾತಿಯ ನಟಿಗೆ ಭಾರೀ ಟ್ರೋಲ್ ಮಾಡಲಾಗುತ್ತಿದೆ. ಅನನ್ಯಾ ಪಾಂಡೆಯ ಹೊಸ ಫೋಟೋಗಳು ಇಲ್ಲಿವೆ…
06:13 PM (IST) Jun 12
ನಟ ಸಲ್ಮಾನ್ ಖಾನ್ ಕಳ್ಳತನ ಮಾಡಿ ಸಿಕ್ಕಿಬಿದ್ದಿರುವ ಘಟನೆಯೊಂದು ನಡೆದಿದ್ದು, ಅದರ ಬಗ್ಗೆ ಮತ್ತೀಗ ವೈರಲ್ ಆಗುತ್ತಿದೆ. ಏನಿದು ವಿಷಯ?
05:25 PM (IST) Jun 12
ಇಂದು, ಅಹಮದಾಬಾದ್ನಲ್ಲಿ ವಿಮಾನ ದುರಂತ ಸಂಭವಿಸಿದೆ. ಲಂಡನ್ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನವು, ಅಹಮದಾಬಾದ್ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆದ ಕೆಲವೇ ನಿಮಿಷಗಳಲ್ಲಿ ಪತನಗೊಂಡಿದೆ. ಈ ವಿಮಾನದಲ್ಲಿ 232 ಪ್ರಯಾಣಿಕರು, 10 ಸಿಬ್ಬಂದಿ..
05:00 PM (IST) Jun 12
58ನೇ ವಯಸ್ಸಿನಲ್ಲಿ ಖ್ಯಾತಿ ನಟಿಯೊಬ್ಬರು ತಮ್ಮ ಮೃತ ಪುತ್ರನಿಂದ ಮಗುವನ್ನು ಪಡೆದುಕೊಂಡಿದ್ದಾರೆ. ಏನಿದು ವಿಷ್ಯ? ಯಾರಿದು ನಟಿ? ಇದು ಹೇಗೆ ಸಾಧ್ಯ ನೋಡಿ..
04:56 PM (IST) Jun 12
ಕನ್ನಡ ಧಾರಾವಾಹಿಗಳು ಸೇರಿದಂತೆ ಮಜಾ ಟಾಕೀಸ್, ಸರಿಗಮಪ ಶೋ, ಭರ್ಜರಿ ಬ್ಯಾಚುಲರ್ಸ್ ಶೋಗಳಿಗೆ ಎಷ್ಟು ಟಿಆರ್ಪಿ ಸಿಕ್ಕಿದೆ?
04:48 PM (IST) Jun 12
ವಿಮಾನ ಪತನದ ಚಲನಚಿತ್ರಗಳು ಅಡ್ರಿನಾಲಿನ್-ಪಂಪಿಂಗ್ ಆಕ್ಷನ್ ಅನ್ನು ಭಾವನಾತ್ಮಕ ಆಳದೊಂದಿಗೆ ಮಿಶ್ರಣ ಮಾಡುತ್ತವೆ, ಆಗಾಗ್ಗೆ ನಿಜವಾದ ಘಟನೆಗಳಿಂದ ಪ್ರೇರಿತವಾಗಿರುತ್ತವೆ. ಬದುಕುಳಿಯುವಿಕೆ, ಅವ್ಯವಸ್ಥೆ ಸೆರೆಹಿಡಿಯುವ 5 ಚಲನಚಿತ್ರಗಳು ಇಲ್ಲಿವೆ
04:43 PM (IST) Jun 12
ಸಿನಿಮಾ ತಾರೆಯರು ಚೆಂದಕಾಗಿ ಕಾಣೋಕೆ ಸರ್ಜರಿ ಮಾಡ್ಸಿಕೊಳ್ಳೋದು ಸಾಮಾನ್ಯ. ಒಬ್ಬ ನಟಿ 29 ಸರ್ಜರಿ ಮಾಡ್ಸಿಕೊಂಡಿದ್ದಾರಂತೆ. ಆ ನಟಿ ಯಾರು ಅಂತ ನೋಡೋಣ.
04:16 PM (IST) Jun 12
ಗುಂಟೂರು ಕಾರಂ ನಂತರ ತ್ರಿವಿಕ್ ಇನ್ನೊಂದು ಸಿನಿಮಾ ಮಾಡಿಲ್ಲ. ಯಾರ ಜೊತೆ ಮಾಡ್ತಾರೆ ಅಂತ ತುಂಬಾ ಗಾಳಿಸುದ್ದಿಗಳು ಹರಿದಾಡಿದವು, ಆದ್ರೆ ಇನ್ನೂ ಸ್ಪಷ್ಟನೆ ಸಿಕ್ಕಿಲ್ಲ. ಈಗ ತ್ರಿವಿಕ್ ಮುಂದಿನ ಸಿನಿಮಾಗಳ ಬಗ್ಗೆ ನಿರ್ಮಾಪಕ ನಾಗವಂಶಿ ಸ್ಪಷ್ಟನೆ ನೀಡಿದ್ದಾರೆ.
03:45 PM (IST) Jun 12
ಎಡವಟ್ಟು ದುರ್ಗಾ ಎಂದೇ ಫೇಮಸ್ ಆಗಿರೋ ನಾನಿನ್ನ ಬಿಡಲಾರೆ ಸೀರಿಯಲ್ ದುರ್ಗಾ ಅರ್ಥಾತ್ ರಿಷಿಕಾ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ನಟಿಯ ಕುರಿತು ಇಂಟರೆಸ್ಟಿಂಗ್ ಸ್ಟೋರಿ ಇಲ್ಲಿದೆ..
03:28 PM (IST) Jun 12
ಜೆಟ್ಏರ್ವೇಸ್ ಫ್ಲೈಟ್ 9W-555 ವಿಮಾನದ ಘಟನೆಯಿಂದ ಪ್ರೇರಿತವಾಗಿದೆ. ಪ್ರತಿಕೂಲ ಹವಾಮಾನದಲ್ಲಿ ವಿಮಾನವನ್ನು ಲ್ಯಾಂಡ್ ಮಾಡಲು ಪೈಲಟ್ ಹೆಣಗಾಡುವುದನ್ನು ಚಿತ್ರ ತೋರಿಸುತ್ತದೆ. ಪ್ರಯಾಣಿಕರ ಭಯ ಮತ್ತು ಪೈಲಟ್ಗಳ ಮೇಲಿನ ಒತ್ತಡವನ್ನು ಚಿತ್ರ ಬಿಂಬಿಸುತ್ತದೆ.
02:49 PM (IST) Jun 12
ರೂಪದರ್ಶಿಯಾಗಿ, ನಟಿಯಾಗಿ, ನಿರೂಪಕಿಯಾಗಿ ಹಾಗೂ ರಾಜಕಾರಣಿಯಾಗಿ ಗುರುತಿಸಿಕೊಂಡಿರುವ ಸ್ಮೃತಿ ಇರಾನಿ ಅವರು ಹಿಂದೊಮ್ಮೆ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಅದರ ವಿಡಿಯೋ ಇದೀಗ ಪುನಃ ವೈರಲ್ ಆಗುತ್ತಿದೆ.
02:45 PM (IST) Jun 12
ಕೊರಿಯನ್ ಸಿನಿಮಾಗಳು ವಿಶಿಷ್ಟವಾಗಿ ದೃಷ್ಟಿಕೋನಗಳನ್ನು ಪ್ರಶ್ನಿಸುವ, ಭಾವನೆಗಳನ್ನು ಕೆರಳಿಸುವ ಮತ್ತು ರೂಪಾಂತರವನ್ನು ಪ್ರೇರೇಪಿಸುವಲ್ಲಿ ನಿಪುಣವಾಗಿವೆ. ಬದುಕುಳಿಯುವ ಕಥೆಯಾಗಿರಲಿ, ನೈತಿಕ ಸಂದಿಗ್ಧತೆಗಳಾಗಿರಲಿ ಅಥವಾ ಮಾನವ ಸಂಪರ್ಕವಾಗಿರಲಿ, ಈ ಸಿನಿಮಾಗಳು ಜೀವನದಲ್ಲಿ ಅಮೂಲ್ಯ ಪಾಠಗಳನ್ನು ನೀಡುತ್ತವೆ.
01:23 PM (IST) Jun 12
ಚಿತ್ರದ ಒಂದು ಪ್ರಮುಖ ಸಾಹಸ ದೃಶ್ಯಕ್ಕಾಗಿ ಸೆಟ್ನಲ್ಲಿ ಅತಿ ಹೆಚ್ಚು ಒತ್ತಡದಲ್ಲಿ ನೀರನ್ನು ತುಂಬಿದ ದೊಡ್ಡ ಟ್ಯಾಂಕ್ ಅನ್ನು ಸಿದ್ಧಪಡಿಸಲಾಗಿತ್ತು. ಆದರೆ, ನೀರಿನ ಒತ್ತಡವನ್ನು ತಡೆಯಲು ಸಾಧ್ಯವಾಗದೆ ಟ್ಯಾಂಕ್ ಹಠಾತ್ತನೆ ಒಡೆದು ಸ್ಫೋಟಗೊಂಡಿದೆ.
12:13 PM (IST) Jun 12
ಕಾಂತಾರ ಚಿತ್ರತಂಡದ ಮೂವರು ಕಲಾವಿದರು ನಿಗೂಢವಾಗಿ ಸಾವಿಗೀಡಾಗಿದ್ದಾರೆ. ಚಿತ್ರೀಕರಣ ಆರಂಭಕ್ಕೂ ಮುನ್ನವೇ ದೈವದಿಂದ ರಿಷಬ್ ಶೆಟ್ಟಿಗೆ ಎಚ್ಚರಿಕೆ ನೀಡಲಾಗಿತ್ತು. ಈ ಸಾವುಗಳು ದೈವದ ಶಾಪವೇ? ಎಂಬ ಪ್ರಶ್ನೆ ಅದಕ್ಕೆ ಸಂಬಂಧಿಸಿದ ಘಟನೆಗಳು ಇಲ್ಲಿವೆ ನೋಡಿ..
11:25 AM (IST) Jun 12
10:49 AM (IST) Jun 12
09:46 AM (IST) Jun 12
ಕೆಲ ಸಮಯದ ಹಿಂದೆ ತಮಗೆ ಪರಿಚಯವಾಗಿದ್ದ ವ್ಯಕ್ತಿಯೊಬ್ಬನನ್ನು ಸಂಪೂರ್ಣವಾಗಿ ನಂಬಿ ಆತ ಹೇಳಿದಂತೆ ಹಣ ವಿನಿಯೋಗ ಮಾಡಿದ್ದರಿಂದ ತಮ್ಮ ಜೀವನದ ಉಳಿಕೆ ಎಲ್ಲವನ್ನು ಕೆಲ ಕ್ಷಣಗಳಲ್ಲಿ ಸಂಪೂರ್ಣವಾಗಿ ಕಳೆದುಕೊಂಡಿದ್ದಾಗಿ ಕಿರುತೆರೆ ದಂಪತಿ ಅಳಲು ತೋಡಿಕೊಂಡಿದ್ದಾರೆ.
08:31 AM (IST) Jun 12
ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ನಟಿ ಅನುಷ್ಕಾ ಶೆಟ್ಟಿ, ಲೋಕೇಶ್ ಸಿನಿಮ್ಯಾಟಿಕ್ ಯೂನಿವರ್ಸ್ ಸಿನಿಮಾಗೆ ಸೇರ್ಪಡೆಯಾಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.