IAS ಅಧಿಕಾರಿಯಾದ ರಿಕ್ಷಾ ಎಳೆಯುವವರ ಮಗ ಗೋವಿಂದ್‌ ಜೈಸ್ವಾಲ್‌: ಹೋರಾಟದ ಹಾದಿ ಹೀಗಿದೆ..

By BK AshwinFirst Published Jun 7, 2023, 5:28 PM IST
Highlights

ತನ್ನ ಹಳ್ಳಿಯ ಸರ್ಕಾರಿ ಶಾಲೆ ಮತ್ತು ತೀರಾ ಸಾಮಾನ್ಯ ಶಿಕ್ಷಣ ಸಂಸ್ಥೆಯಲ್ಲಿ ಓದುತ್ತಿದ್ದರೂ, ಐಎಎಸ್ ಆಗುವ ಗುರಿ ಇಟ್ಟುಕೊಂಡು ಕಠಿಣ ಪರಿಶ್ರಮ ಮತ್ತು ಸೂಕ್ತ ತಂತ್ರವನ್ನು ಬಳಸಿದರೆ ಯಶಸ್ಸು ಸಿಗುತ್ತದೆ ಎಂದು ಗೋವಿಂದ್‌ ಜೈಸ್ವಾಲ್‌ ನಂಬಿದ್ದರು.

ನವದೆಹಲಿ (ಜೂನ್ 7, 2023):  ರಿಕ್ಷಾ ಎಳೆಯುವವರ ಮಗ ಗೋವಿಂದ್ ಜೈಸ್ವಾಲ್ ಐಎಎಸ್‌ ಅಧಿಕಾರಿಯಾಗಿ ಇಡೀ ದೇಶಕ್ಕೆ ಸ್ಪೂರ್ತಿ ಆಗಿದ್ದಾರೆ. ಇವರು 2006 ರಲ್ಲಿ ಪರೀಕ್ಷೆ ಬರೆದು ದೇಶಕ್ಕೆ 48ನೇ ಸ್ಥಾನ ಗಳಿಸಿ ಈ ಸಾಧನೆ ಮಾಡಿದ್ದಾರೆ. ಉತ್ತರ ಪ್ರದೇಶದ ವಾರಾಣಸಿಯವರಾದ ರಿಕ್ಷಾ ಚಾಲಕನ ಮಗನಾದ ಐಎಎಸ್ ಗೋವಿಂದ್ ಜೈಸ್ವಾಲ್ ತನ್ನ ಸಾಧನೆಯ ಹೊರತಾಗಿ ಬೇರೆ ಪರ್ಯಾಯಕ್ಕೆ ಅವಕಾಶವನ್ನೇ ನೀಡಲಿಲ್ಲ. 

ತನ್ನ ತಂದೆಯ ಸ್ಥಾನಮಾನ ಮತ್ತು ಬಡತನದಿಂದಾಗಿ ಬಾಲ್ಯದಲ್ಲಿ ಅವನು ಅನುಭವಿಸಿದ ಗೇಲಿ, ಅಪಹಾಸ್ಯಗಳಿಂದ ಗೋವಿಂದ್‌ ಜೈಸ್ವಾಲ್ ಇನ್ನೂ ಹೆಚ್ಚು ಕಷ್ಟಪಡಲು ಪ್ರೆರೇಪಣೆಯಾಯ್ತು. ತನ್ನ ಹಳ್ಳಿಯ ಸರ್ಕಾರಿ ಶಾಲೆ ಮತ್ತು ತೀರಾ ಸಾಮಾನ್ಯ ಶಿಕ್ಷಣ ಸಂಸ್ಥೆಯಲ್ಲಿ ಓದುತ್ತಿದ್ದರೂ, ಐಎಎಸ್ ಆಗುವ ಗುರಿ ಇಟ್ಟುಕೊಂಡು ಕಠಿಣ ಪರಿಶ್ರಮ ಮತ್ತು ಸೂಕ್ತ ತಂತ್ರವನ್ನು ಬಳಸಿದರೆ ಯಶಸ್ಸು ಸಿಗುತ್ತದೆ ಎಂದು ಅವರು ನಂಬಿದ್ದರು.

ಇದನ್ನು ಓದಿ: ರೈತನ ಮಗಳು, ಕಂಡಕ್ಟರ್‌ ಪುತ್ರ ಐಎಎಸ್‌ ಪಾಸ್‌: ರಾಜ್ಯದ 35 ಮಂದಿ ತೇರ್ಗಡೆ

ಗೋವಿಂದ್ ಜೈಸ್ವಾಲ್ ಹಿನ್ನೆಲೆ
ಕುಟುಂಬವು ಒಂದು ಸಮಯದಲ್ಲಿ ಆರ್ಥಿಕವಾಗಿ ಸ್ಥಿರವಾಗಿದ್ದರೂ, ಬಳಿಕ ಪರಿಸ್ಥಿತಿ ಬದಲಾಗಿದ್ದು, ನಾರಾಯಣ್ ಅವರ ಕಡಿಮೆ ಸಂಬಳದ ಮೇಲೆ ಕುಟುಂಬ ಸಂಪೂರ್ಣ ಅವಲಂಬನೆಯಾಯ್ತು. ಗೋವಿಂದ್‌ನನ್ನು ದೆಹಲಿಗೆ ಕಳುಹಿಸಲು, ಅವನ ತಂದೆ ತನ್ನ ಬಳಿಯಿದ್ದ ಸ್ವಲ್ಪ ಭೂಮಿಯನ್ನು ಮಾರಬೇಕಾಯಿತು. ಈ ಮಧ್ಯೆ, ಅವರ ತಂದೆಯ ಕಾಲು ಸರಿ ಇಲ್ಲದ ಕಾರಣ ಅವರು ರಿಕ್ಷಾ ಎಳೆಯುವುದನ್ನು ನಿಲ್ಲಿಸಬೇಕಾಯಿತು. ಇಡೀ ಕುಟುಂಬ ಆಗ ಗೋವಿಂದ್ ಅವರು ಆಯ್ಕೆ ಮಾಡಿದ ವೃತ್ತಿಯಲ್ಲಿ ಯಶಸ್ವಿಯಾಗಬೇಕೆಂದು ಎಣಿಸುತ್ತಿತ್ತು. 
"ಅಧ್ಯಯನದಿಂದ ನೀವು ಏನು ಪಡೆಯುತ್ತೀರಿ?" ನೀವು ಹೆಚ್ಚಾಗಿ ಎರಡು ರಿಕ್ಷಾಗಳನ್ನು ಖರೀದಿಸಬಹುದು ಎನ್ನುವ ಗೇಲಿಯ ಮಾತುಗಳನ್ನೂ ಗೋವಿಂದ್‌ ಕೇಳಿಸಿಕೊಳ್ಳಬೇಕಾಯ್ತು.  ಆದರೆ ಅವರಿಗೆ ತಮ್ಮ ಕುಟುಂಬದಿಂದ ಸಾಕಷ್ಟು ಬೆಂಬಲ ದೊರೆತ ಕಾರಣ ದೆಹಲಿಗೆ ಹೋದರು.

ಹೋರಾಟದ ಹಾದಿ
ಹಣವನ್ನು ಉಳಿಸುವ ಸಲುವಾಗಿ, ಗೋವಿಂದ್‌ ಜೈಸ್ವಾಲ್ ತಮ್ಮ ತಯಾರಿಯ ದಿನಗಳಲ್ಲಿ ಪ್ರಬಲವಾಗಿ ಹೋರಾಡಿದರು ಮತ್ತು ಸರಿಯಾಗಿ ಊಟವನ್ನು ಮಾಡುತ್ತಿರಲಿಲ್ಲ. ಆದರೂ ಏಕಾಗ್ರತೆ ಮಾತ್ರ ಬಿಡಲಿಲ್ಲ. ಈ ಕಾರಣದಿಂದ ಗೋವಿಂದ್‌ ಜೈಸ್ವಾಲ್ 2006 ರಲ್ಲಿ IAS ಪರೀಕ್ಷೆಯಲ್ಲಿ ತನ್ನ ಮೊದಲ ಪ್ರಯತ್ನದಲ್ಲಿ AIR 48 ಅಂಕಗಳನ್ನು ಗಳಿಸಿ ಉತ್ತೀರ್ಣರಾದರು. ಇತರ ಐಎಎಸ್ ಯಶಸ್ಸಿನ ಕಥೆಗಳ ಹೊರತಾಗಿಯೂ, ಗೋವಿಂದ್ ಜೈಸ್ವಾಲ್ ಅವರದು ಅನನ್ಯವಾಗಿದೆ. ಇದು ಅಚಲ ಬದ್ಧತೆ ಮತ್ತು ದೃಢತೆಯ ಕಥೆ. ಐಎಎಸ್ ಯಶಸ್ಸಿಗೆ ಜೈಸ್ವಾಲ್ ಅವರ ಹಾದಿ ಕಷ್ಟಕರ.  

ಇದನ್ನೂ ಓದಿ: ಯುಪಿಎಸ್ಸಿಯಲ್ಲಿ ರಾಜ್ಯದ 35 ಮಂದಿ ಪಾಸ್‌: ದೇಶಕ್ಕೆ 55ನೇ ರ‍್ಯಾಂಕ್‌ ಪಡೆದ ಭಾವನಾ ರಾಜ್ಯಕ್ಕೆ ನಂ. 1

ಜೀವನ ಬದಲಾಯಿಸುವ ಕ್ಷಣ
ಗೋವಿಂದ್ ಜೈಸ್ವಾಲ್ ಅವರು ತಮ್ಮ ಮೊದಲ ಪ್ರಯತ್ನದಲ್ಲಿ ನಾಗರಿಕ ಸೇವಾ ಪರೀಕ್ಷೆಯಲ್ಲಿ ಉತ್ತೀರ್ಣರಾದ ನಂತರ ನೀಡಿದ ದೂರದರ್ಶನದ ಸಂದರ್ಶನದಲ್ಲಿ ತಮ್ಮ ಜೀವನದ ಹಾದಿಯನ್ನು ಬದಲಾಯಿಸಿದ ಘಟನೆಯನ್ನು ವಿವರಿಸಿದರು. ತಾನು 11 ವರ್ಷದವರಾಗಿದ್ದಾಗ ಶ್ರೀಮಂತ ಸ್ನೇಹಿತನ ಮನೆಗೆ ಆಟವಾಡಲು ಹೋಗಿದ್ದೆ. ರಿಕ್ಷಾ ಚಾಲಕನ ಮಗನೆಂದು ಅವನನ್ನು ಅಪಹಾಸ್ಯ ಮಾಡಲಾಯಿತು ಮತ್ತು ಹೊರಹಾಕಲಾಯಿತು.

ಆರ್ಥಿಕ ಅಸಮಾನತೆಯು ಸಾಮಾಜಿಕ ವಿಭಾಗಗಳಲ್ಲಿ ಹೇಗೆ ಹರಿಯುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಯುವಜನರಿಗೆ ಸಾಮಾನ್ಯವಾಗಿ ತಿಳುವಳಿಕೆ ಇಲ್ಲದಿರುವುದರಿಂದ, ಯುವ ಗೋವಿಂದ್ ಈ ಅವಮಾನದ ಹಿಂದಿನ ಪ್ರೇರಣೆಯನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲಿಲ್ಲ. ಆದರೂ, ಹೆಚ್ಚು ಅನುಭವಿ ಸ್ನೇಹಿತನು ಅವನಿಗೆ ಜೀವನದ ಕಠೋರ ಸತ್ಯಗಳನ್ನು ವಿವರಿಸಿದನು ಮತ್ತು ತನ್ನ ಪರಿಸ್ಥಿತಿ ಬದಲಾಯಿಸಿಕೊಳ್ಳದಿದ್ದರೆ, ಅವನು ತನ್ನ ಜೀವನದುದ್ದಕ್ಕೂ ಇದೆ ರೀತಿ ಆಗುತ್ತದೆ ಎಂದು ಎಚ್ಚರಿಸಿದನು. ಒಬ್ಬರು ಅನುಸರಿಸಬಹುದಾದ ಶ್ರೇಷ್ಠ ಮಟ್ಟದ ಸೇವೆ ಯಾವುದು ಎಂದು ಗೋವಿಂದ್ ಕೇಳಿದಾಗ, ಐಎಎಸ್ ರಾಷ್ಟ್ರದ ಅತ್ಯುನ್ನತ ಹುದ್ದೆ ಎಂದು ಅವರಿಗೆ ತಿಳಿಸಲಾಯಿತು. ಆ ಯುವಕ ತಾನು ಒಂದು ದಿನ ಐಎಎಸ್ ಅಧಿಕಾರಿಯಾಗಿ ಕೆಲಸ ಮಾಡುತ್ತೇನೆ ಎಂದು ಅಂದು ನಿರ್ಧರಿಸಿದವನು ಎಂದಿಗೂ ಆ ಛಲ ಬಿಡಲಿಲ್ಲ.  

ಇದನ್ನೂ ಓದಿ: ಯುಪಿಎಸ್‌ಸಿ ಪರೀಕ್ಷೆಯಲ್ಲಿ ತೇರ್ಗಡೆಯಾದ ಬೆಳಗಾವಿಯ ಶೃತಿ ಯರಗಟ್ಟಿ; ವಿಜಯಪುರ ತಾಂಡಾ ಹುಡುಗನಿಂದ್ಲೂ ಸಾಧನೆ

ಇದನ್ನೂ ಓದಿ: UPSC Civil Services: ಯುಪಿಎಸ್‌ಸಿ ಫಲಿತಾಂಶ ಪ್ರಕಟ: ಟಾಪ್‌ 4 ರ‍್ಯಾಂಕ್‌ ಮಹಿಳೆಯರ ಪಾಲು

click me!