ಪತಿ ಕಾಣದ ಕಡಲಿಗೆ: ಕಾಫಿ ಡೇ ಹೊಣೆ ಮಾಳವಿಕ ಹೆಗಲಿಗೆ!

Published : Jul 31, 2019, 04:27 PM ISTUpdated : Jul 31, 2019, 04:42 PM IST
ಪತಿ ಕಾಣದ ಕಡಲಿಗೆ: ಕಾಫಿ ಡೇ ಹೊಣೆ ಮಾಳವಿಕ ಹೆಗಲಿಗೆ!

ಸಾರಾಂಶ

ಸಿದ್ದಾರ್ಥ ಪತ್ನಿ ಮಾಳವಿಕ ಹೆಗಲಿಗೆ ಕಾಫಿ ಡೇ ಕಂಪನಿ ಜವಾಬ್ದಾರಿ| ಕಾಫಿ ಡೇ ಕಂಪನಿ ಹೊಸ ಆಡಳಿತ ಮಂಡಳಿ ತೀರ್ಮಾನ|  ಸಿದ್ದಾರ್ಥ ಸಾವು ಹಿನ್ನೆಲೆ ಕಾಫಿ ಡೇಗೆ ಹೊಸ ಆಡಳಿತ ಮಂಡಳಿ|  ಕಾಫಿ ಡೇ ಹಂಗಾಮಿ ಅಧ್ಯಕ್ಷರಾಗಿ S.V.ರಂಗನಾಥ್'ಗೆ ಜವಾಬ್ದಾರಿ|  ಇನ್ನೊಬ್ಬ ನಿರ್ದೇಶಕ ನಿತಿನ್ ಬಾಗಮನೆ ಈಗ ಕಾಫಿ ಡೇ ಸಿಒಒ|  ಇಂದು ನಡೆದ ಬೋರ್ಡ್ ಆಫ್ ಡೈರಕ್ಟೆರ್ಸ್ ಸಭೆಯಲ್ಲಿ ತೀರ್ಮಾನ| ಆಗಸ್ಟ್ 8ರಂದು ಕಾಫಿ ಡೇ ಬೋರ್ಡ್ ಆಫ್ ಡೈರೆಕ್ಟರ್ಸ್ ಸಭೆ| 

ಬೆಂಗಳೂರು(ಜು.31): ಕೆಫೆ ಕಾಫಿ ಡೇ ಮಾಲೀಕ ಸಿದ್ಧಾರ್ಥ ಹೆಗಡೆ ಆತ್ಮಹತ್ಯೆ ಹಿನ್ನೆಲೆಯಲ್ಲಿ, ಸಿದ್ಧಾರ್ಥ ಪತ್ನಿ ಮಾಳವಿಕ ಹೆಗಡೆ ಅವರನ್ನು ಸಂಸ್ಥೆಯ ಮುಖ್ಯಸ್ಥೆಯನ್ನಾಗಿ ನೇಮಕ ಮಾಡಲಾಗಿದೆ.

ಈ ಕುರಿತು ನಿರ್ಧಾರ ಪ್ರಕಟಿಸಿರುವ ಸಂಸ್ಥೆಯ ಆಡಳಿತ ಮಂಡಳಿ, ಕಾಫಿ ಡೇ ಜವಾಬ್ದಾರಿಯನ್ನು ಸಿದ್ಧಾರ್ಥ ಪತ್ನಿ ಮಾಳವಿಕ ಹೆಗಡೆ ಹೆಗಲಿಗೆ ವಹಿಸಲಾಗಿದೆ ಎಂದು ತಿಳಿಸಿದೆ.

ಸಿದ್ಧರ್ಥ ನಿಧನದ ಹಿನ್ನೆಲೆಯಲ್ಲಿ ಕಾಫಿ ಡೇ ಕಂಪನಿಗೆ ಹೊಸ ಆಡಳಿತ ಮಂಡಳಿ ರಚಿಸಲಾಗಿದ್ದು, ಈ ನೂತನ ಮಂಡಳಿ ಮಾಳವಿಕ ಅವರನ್ನು ನೂತನ ಮುಖ್ಯಸ್ಥೆಯಾಗಿ ನೇಮಿಸಿದೆ.

ಸದ್ಯ ಕಾಫಿ ಡೇ ಹಂಗಾಮಿ ಅಧ್ಯಕ್ಷರನ್ನಾಗಿ ಎಸ್.ವಿ. ರಂಗನಾಥ್ ಅವರನ್ನು ನೇಮಕ ಮಾಡಲಾಗಿದ್ದು, ನಿತಿನ್ ಬಾಗಮನೆ ಅವರನ್ನು ಹಂಗಾಮಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ(ಸಿಇಒ) ಆಗಿ ನೇಮಕ ಮಾಡಲಾಗಿದೆ.

ಇದೇ ವೇಳೆ ಆ.8ರಂದು ನಡೆಯಲಿರುವ ಬೋರ್ಡ್ ಆಫ್ ಮೀಟಿಂಗ್’ನಲ್ಲಿ ಮಾಳವಿಕ ಆಯ್ಕೆಯನ್ನು ಘೋಷಿಸಲಾಗುವುದು ಎಂದು ಸಂಸ್ಥೆ ತಿಳಿಸಿದೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

ತೆರಿಗೆ ಕಟ್ಟದೆಯೇ ಮನೆಯಲ್ಲಿ ಎಷ್ಟು ಚಿನ್ನ ಇಟ್ಟುಕೊಳ್ಳಬಹುದು? ಈ ಮಿತಿ ಮೀರಿದರೆ ಗಂಡಾಂತರ!
India Latest News Live: 2026ರ ಐಪಿಎಲ್ ಟೂರ್ನಿಗೂ ಮುನ್ನ ಆರ್‌ಸಿಬಿ ಫ್ಯಾನ್ಸ್‌ಗೆ ಸಿಹಿ ಸುದ್ದಿ! ಮಹತ್ವದ ಅಪ್‌ಡೇಟ್ಸ್ ಹಂಚಿಕೊಂಡ ಬೆಂಗಳೂರು ಫ್ರಾಂಚೈಸಿ