
ನವದೆಹಲಿ(ಆ.21): ತಮ್ಮ ಬಹುಕಾಲದ ಪಿಂಚಣಿ ಸಂಬಂಧಿತ ಬೇಡಿಕೆ ಈಡೇರದ ಕಾರಣಕ್ಕೆ ಭಾರತೀಯ ರಿಸರ್ವ್ ಬ್ಯಾಂಕ್ ಅಧಿಕಾರಿಗಳು ಹಾಗೂ ನೌಕರರು ಸೆಪ್ಟೆಂಬರ್ 4,5ರಂದು ಸಾಮೂಹಿಕ ರಜೆಯ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಯುನೈಟೆಡ್ ಫೋರಂ ಆಫ್ ರಿಸರ್ವ್ ಬ್ಯಾಂಕ್ ಅಫೀಸರ್ಸ್ ಅಂಡ್ ಎಂಪ್ಲಾಯೀಸ್ನ ಮುಖ್ಯ ಕಾಯರ್ದರ್ಶಿ ಜಿ. ಜಗದೀಶ್, ದಶಕ ಕಳೆದರೂ ಪಿಂಚಣಿ ಸಂಬಂಧಿತ ಬೇಡಿಕೆ ಈಡೇರದ ಕಾರಣ ಸಾಮೂಹಿಕ ರಜೆಯ ಪ್ರತಿಭಟನೆ ನಡೆಸಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ.
ಇದೇ ಕಾರಣಕ್ಕೆ ಈ ಹಿಂದೆಯೂ ಹಲವು ಹೋರಾಟಗಳು ನಡೆದಿದ್ದು, ಸರ್ಕಾರ ಮಾತ್ರ ನಮ್ಮ ಬೇಡಿಕೆ ಈಡೇರಿಸುವುದರತ್ತ ಗಮನಹರಿಸಿಲ್ಲ. ನಮ್ಮ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಬೇಕೆಂಬ ಕಾರಣಕ್ಕೆ ಎರಡು ದಿನಗಳ ಕಾಲ ಆರ್ಬಿಐ ಅಧಿಕಾರಿಗಳು ಹಾಗೂ ನೌಕರರು ಸಾಮಾನ್ಯ ರಜೆ ಪಡೆದುಕೊಳ್ಳಲಿದ್ದಾರೆ ಎಂದು ಜಗದೀಶ್ ತಿಳಿಸಿದ್ದಾರೆ.
ಆಗಸ್ಟ್ 27ರಂದು ಆರ್ಬಿಐನ ನಿರ್ದೇಶಕರಿಗೆ ಮನವಿ ಪತ್ರ ನೀಡಲು ನಿರ್ಧರಿಸಲಾಗಿದ್ದು, ಅದರಲ್ಲಿ ಪಿಂಚಣಿ ನೀತಿ ಸುಧಾರಣೆ, ಕಾಂಟ್ರಿಬ್ಯೂಟರಿ ಪ್ರಾವಿಡಂಟ್ ಫಂಡ್ (ಸಿಪಿಎಫ್) ಉಳಿಸಿಕೊಂಡವರಿಗೆ ಪಿಂಚಣಿ ಆಯ್ಕೆಯ ಮರು ನೀಡಿಕೆ ಹಾಗೂ 2012ರಿಂದ ನೇಮಕವಾದವರಿಗೆ ಸಿಪಿಎಫ್ ಹಾಗೂ ಹೆಚ್ಚುವರಿ ಭವಿಷ್ಯ ನಿಧಿ ಪಡೆಯಲು ಅವಕಾಶ ಸೇರಿ ಮತ್ತಿತರ ಬೇಡಿಕೆಗಳನ್ನು ಉಲ್ಲೇಖಿಸಲಾಗುತ್ತದೆ ಎಂದು ಜಗದೀಶ್ ತಿಳಿಸಿದ್ದಾರೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಓದಿರಿ.