ಕೇರಳದಲ್ಲಿ ಶೀಘ್ರ ಕೈದಿಗಳ ಪೆಟ್ರೋಲ್‌ ಬಂಕ್‌ ಆರಂಭ!

Published : Sep 19, 2019, 10:25 AM IST
ಕೇರಳದಲ್ಲಿ ಶೀಘ್ರ ಕೈದಿಗಳ ಪೆಟ್ರೋಲ್‌ ಬಂಕ್‌ ಆರಂಭ!

ಸಾರಾಂಶ

ಕೇರಳದಲ್ಲಿ ಶೀಘ್ರ ಕೈದಿಗಳ ಪೆಟ್ರೋಲ್‌ ಬಂಕ್‌ ಆರಂಭ| 3 ಕೇಂದ್ರ ಕಾರಾಗೃಹಗಳಲ್ಲಿ ಯೋಜನೆ ಜಾರಿ

ತಿರುವನಂತಪುರಂ[ಸೆ.19]: ಕೈದಿಗಳಿಂದ ರುಚಿಕರ ಆಹಾರ ತಯಾರಿಸಿ ಮಾರಾಟ ಮಾಡುವ ಯೋಜನೆ ಯಶಸ್ವಿಯಾದ ಬಳಿಕ, ಕೈದಿಗಳಿಂದಲೇ ಪೆಟ್ರೋಲ್‌ ಬಂಕ್‌ ನಡೆಸುವ ನೂತನ ಪ್ರಯತ್ನಕ್ಕೆ ಕೇರಳ ಸರ್ಕಾರ ಮುಂದಾಗಿದೆ. ಈಗಾಗಗಲೇ ತಮಿಳು ನಾಡು ಹಾಗೂ ಪಂಜಾಬ್‌ನಲ್ಲಿ ಈ ಯೋಜನೆ ಯಶಸ್ವಿಯಾಗಿದ್ದು, ಎಲ್ಲವೂ ಅಂದುಕೊಂಡಂತೆ ನಡೆದರೆ ನವೆಂಬರ್‌-ಡಿಸೆಂಬರ್‌ ವೇಳೆಗೆ ಕೇರಳದಲ್ಲಿ ಕೈದಿಗಳಿಂದಲೇ ನಡೆಸಲ್ಪಡುವ ಪೆಟ್ರೋಲ್‌ ಬಂಕ್‌ ಅಸಿತ್ವಕ್ಕೆ ಬರಲಿದೆ.

ತಿರುವನಂತಪುರಂನ ಪೂಜಪ್ಪುರ, ತ್ರಿಶ್ಶೂರ್‌ನ ವಿಯ್ಯೂರ್‌ ಹಾಗೂ ಕಣ್ಣೂರ್‌ ಕೇಂದ್ರ ಕಾರಾಗೃಹಗಳಲ್ಲಿ ಈ ಯೋಜನೆ ಜಾರಿಗೆ ಬರಲಿದ್ದು, ಕಾರಾಗೃಹ ಇಲಾಖೆ ಗೊತ್ತು ಪಡಿಸಿದ ಸ್ಥಳದಲ್ಲಿ ಇಂಡಿಯನ್‌ ಆಯಿಲ್‌ ಕಾರ್ಪೊರೇಶನ್‌ ಬಂಕ್‌ಗಳನ್ನು ತೆರೆಯಲಿದೆ. ಪ್ರತೀ ಬಂಕ್‌ಗಳಲ್ಲಿ ವಿವಿಧ ಶಿಫ್ಟ್‌ಗಳಲ್ಲಿ 15 ಕೈದಿಗಳು ಕೆಲಸ ಮಾಡಲಿದ್ದಾರೆ. ಇದಕ್ಕೆ ಸರ್ಕಾರ ಅನುಮತಿ ನೀಡಿದ್ದು, ಕಾರಾಗೃಹ ಇಲಾಖೆಯಡಿ ಈ ಬಂಕ್‌ಗಳು ಕಾರ್ಯ ನಿರ್ವಹಿಸಲಿದೆ. ಇದರಿಂದ ಹೆಚ್ಚಿನ ಆದಾಯದ ಜತೆಗೆ ಖೈದಿಗಳಿಗೆ ರಚನಾತ್ಮಕ ಚಟುವಟಿಕೆಗಳಲ್ಲಿ ಪಾಲ್ಗೊಂಡಂತೆಯೂ ಆಗುತ್ತದೆ.

ಕಾರಾಗೃಹ ನಿಯಮಾವಳಿಯಂತೆ ಅವರಿಗೆ ದಿನಗೂಲಿ ಕೂಡ ನೀಡಲಾಗುತ್ತದೆ ಎಂದು ಕಣ್ಣೂರು ಜಿಲ್ಲಾ ಕಾರಾಗೃಹ ಪೊಲೀಸ್‌ ಮಹಾನಿರ್ದೇಶಕ ರಿಷಿರಾಜ್‌ ಸಿಂಗ್‌ ಹೇಳಿದ್ದಾರೆ. ಈ ಹಿಂದೆ ಕೈದಿಗಳೇ ತಯಾರಿಸಿದ ವಿವಿಧ ಭಕ್ಷ್ಯ ಭೋಜಗಳನ್ನು ಮಾರಾಟ ಮಾಡುವ ಯೋಜನೆ ಯಶಸ್ವಿಯಾಗಿತ್ತು. ಅಲ್ಲದೇ ಆನ್‌ಲೈನ್‌ ಮಾರಾಟಕ್ಕೆ ಸ್ವಿಗ್ಗಿ ಜತೆ ಕೂಡ ಒಪ್ಪಂದ ಮಾಡಿಕೊಳ್ಳಲಾಗಿತ್ತು.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

ಅನಿಲ್ ಅಂಬಾನಿ ಕುಟುಂಬಕ್ಕೆ ಮತ್ತೊಂದು ಶಾಕ್, ಪುತ್ರನ ವಿರುದ್ದ 228 ಕೋಟಿ ರೂ ವಂಚನೆ ಕೇಸ್
ಮದ್ಯ ಮಾರಾಟಕ್ಕೆ ಇಳಿದ ಯುವರಾಜ್‌ ಸಿಂಗ್‌, ಒಂದು ತಿಂಗಳ ಸಂಬಳಕ್ಕೆ ಬರುತ್ತೆ ಒಂದು ಬಾಟಲ್‌!