ಜೈನ ದೀಕ್ಷೆ ಸ್ವೀಕರಿಸಿದ ವರ್ಷಕ್ಕೆ 75 ಕೋಟಿ ಸಂಬಳ ಪಡೆಯುತ್ತಿದ್ದ ಮುಕೇಶ್‌ ಅಂಬಾನಿ ಆಪ್ತ!

Published : Jun 21, 2025, 07:49 PM IST
Mukesh Ambani Aide Prakash Shah

ಸಾರಾಂಶ

ಮುಕೇಶ್‌ ಅಂಬಾನಿಯವರ ಆಪ್ತ ಸಹಾಯಕರಾಗಿದ್ದ ಅವರು ಈಗ ಐಷಾರಾಮಿ ಜೀವನವನ್ನು ತ್ಯಜಿಸಿ 'ದೀಕ್ಷೆ' ತೆಗೆದುಕೊಂಡಿದ್ದಾರೆ. 

ನವದೆಹಲಿ (ಜೂ.21): ಒಂದು ಕಾಲದಲ್ಲಿ ರಿಲಯನ್ಸ್‌ ಇಂಡಸ್ಟ್ರೀಸ್‌ ಚೇರ್ಮನ್‌ ಮುಕೇಶ್‌ ಅಂಬಾನಿ ಅವರ ಆಪ್ತರಾಗಿದ್ದ ಪ್ರಕಾಶ್‌ ಶಾ ಇತ್ತೀಚೆಗೆ ಜೈನ ದೀಕ್ಷೆ ಪಡೆದುಕೊಂಡಿದ್ದಾರೆ. ಮುಕೇಶ್‌ ಅಂಬಾನಿ ಬಲಗೈ ಬಂಟರಾಗಿದ್ದ ಪ್ರಕಾಶ್‌ ಶಾ, 63ನೇ ವರ್ಷದಲ್ಲಿ ನಿವೃತ್ತಿರಾಗಿದ್ದರು. ಆ ಬಳಿಕ ಅವರು ಜೈನ ದೀಕ್ಷೆ ಪಡೆದು ಉಳಿದ ಜೀವನ ನಡೆಸಬೇಕು ಎಂದು ತೀರ್ಮಾನ ಮಾಡಿದ್ದಾರೆ.

ನಿವೃತ್ತರಾಗುವ ವೇಳೆ ಪ್ರಕಾಶ್‌ ಶಾ ರಿಲಯನ್ಸ್‌ ಇಂಡಸ್ಟ್ರೀಸ್‌ನಲ್ಲಿ ಉಪಾಧ್ಯಕ್ಷ ಹುದ್ದೆಯಲ್ಲಿದ್ದರು. ಕಳೆದ ಮಹಾವೀರ ಜಯಂತಿಯ ಸಂದರ್ಭದಲ್ಲಿ ಅವರು ಪತ್ನಿ ನೈನಾ ಶಾ ಅವರೊಂದಿಗೆ ಜೈನ ದೀಕ್ಷೆ ಪಡೆದುಕೊಂಡಿದ್ದಾರೆ.

ಪ್ರಕಾಶ್ ಶಾ ಹಲವು ವರ್ಷಗಳ ಹಿಂದೆಲೇ ಜೈನದೀಕ್ಷೆ ಪಡೆಯುವುದು ನಿಶ್ಚಿತವಾಗಿತ್ತು. ಆದರೆ, ಕೋವಿಡ್‌-19 ಕಾರಣದಿಂದಾಗಿ ದೀಕ್ಷೆ ಪಡೆದುಕೊಳ್ಳುವುದು ವಿಳಂಬವಾಗಿತ್ತು. 'ದೀಕ್ಷೆ' ಎಂದರೆ ಒಬ್ಬ ವ್ಯಕ್ತಿಯು ಕಠಿಣ ಜೀವನವನ್ನು ನಡೆಸಲು ಪ್ರತಿಜ್ಞೆ ಮಾಡುವ ಒಂದು ಆಚರಣೆ. ದೀಕ್ಷೆ ತೆಗೆದುಕೊಂಡ ನಂತರ, ಯಾವುದೇ ಪಾಪವನ್ನು ಮಾಡಲು ಸಾಧ್ಯವಿಲ್ಲ ಮತ್ತು ಮೋಕ್ಷವನ್ನು ಪಡೆಯಲು ಒಳ್ಳೆಯ ಕಾರ್ಯಗಳನ್ನು ಮಾಡಬೇಕು ಎಂದು ಜೈನರಲ್ಲಿ ನಂಬಲಾಗುತ್ತದೆ.

ಯಾರು ಈ ಪ್ರಕಾಶ್‌ ಶಾ?

ಪ್ರಕಾಶ್ ಶಾ, ಐಐಟಿ ಬಾಂಬೆಯಿಂದ ಕೆಮಿಕಲ್ ಎಂಜಿನಿಯರಿಂಗ್ ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಅವರ ಪತ್ನಿ ಕೂಡ ವಾಣಿಜ್ಯ ಪದವೀಧರೆ. ಅವರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಇಬ್ಬರು ಗಂಡು ಮಕ್ಕಳಲ್ಲಿ ಒಬ್ಬ ವರ್ಷಗಳ ಹಿಂದೆಯೇ ದೀಕ್ಷೆ ಪಡೆದಿದ್ದಾರೆ. ಅವರ ಇನ್ನೊಬ್ಬ ಮಗ ಮದುವೆಯಾಗಿ ಒಂದು ಮಗುವನ್ನು ಹೊಂದಿದ್ದಾನೆ. ಜಾಮ್‌ನಗರ ಪೆಟ್‌ಕೋಕ್ ಅನಿಲೀಕರಣ ಯೋಜನೆ ಮತ್ತು ಪೆಟ್‌ಕೋಕ್ ಮಾರ್ಕೆಟಿಂಗ್‌ನಂತಹ ಪ್ರಮುಖ ಯೋಜನೆಗಳನ್ನು ಷಾ ನಿರ್ವಹಿಸಿದರು. ಮಾಧ್ಯಮ ವರದಿಗಳ ಪ್ರಕಾರ, ಷಾ ನಿವೃತ್ತರಾಗಲು ನಿರ್ಧರಿಸಿದ ಸಮಯದಲ್ಲಿ ವಾರ್ಷಿಕ 75 ಕೋಟಿ ರೂ. ಸಂಬಳ ಪಡೆಯುತ್ತಿದ್ದರು.

ಒಬ್ಬ ಸನ್ಯಾಸಿಯಾಗಿ, ಅವರು ಈಗ ಬರಿಗಾಲಿನಲ್ಲಿ ನಡೆಯಲಿದ್ದು, ಸರಳವಾದ ಬಿಳಿ ನಿಲುವಂಗಿಗಳನ್ನು ಧರಿಸುತ್ತಾರೆ ಮತ್ತು ದಾನದಿಂದ ಬಂದ ಆಹಾರವನ್ನು ಮಾತ್ರವೇ ಸೇವಿಸುತ್ತಾರೆ. ಷಾ ಅವರಿಗೆ ಈಗ 64 ವರ್ಷ. ಅವರ ದೀಕ್ಷೆಯ ಸಮಾರಂಭವನ್ನು ಸಂಪೂರ್ಣವಾಗಿ ಮುಂಬೈನ ಬೋರಿವಲಿಯಲ್ಲಿ ನಡೆಸಲಾಯಿತು. ಏಳು ವರ್ಷಗಳ ಹಿಂದೆ, ಅವರ ಮಗನಿಗೆ ದೀಕ್ಷೆ ನೀಡಿದಾಗ, ಅವರಿಗೆ 'ಭುವನ್ ಜೀತ್ ಮಹಾರಾಜ್' ಎಂಬ ಹೆಸರನ್ನು ನೀಡಲಾಯಿತು. ಅವರು ಹೇಳಿದರು, 'ಬಾಲ್ಯದಿಂದಲೂ ನನಗೆ ದೀಕ್ಷೆ ತೆಗೆದುಕೊಳ್ಳುವ ಬಯಕೆ ಇತ್ತು. ಅದರಿಂದ ಸಿಗುವ ಆಧ್ಯಾತ್ಮಿಕ ಆನಂದ ಮತ್ತು ಮಾನಸಿಕ ಶಾಂತಿ ಹೋಲಿಸಲಾಗದು' ಎಂದಿದ್ದರು.

 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

Explainer: ವಿಶ್ವದ ಅತಿದೊಡ್ಡ ಏರ್‌ಲೈನ್ಸ್‌ ಸ್ಮಶಾನವಾದ ಭಾರತ, ದೇಶದಲ್ಲಿ ವಿಮಾನ ಕಂಪನಿ ಬದುಕೋದು ಯಾಕೆ ಕಷ್ಟ?
ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!