
ನವದೆಹಲಿ[ಫೆ.05]: ಅಸಂಘಟಿತ ವಲಯದ ನೌಕರರಿಗೆ 60 ವರ್ಷ ತುಂಬುತ್ತಿದ್ದಂತೆ 3000 ರು. ಮಾಸಿಕ ಪಿಂಚಣಿ ಸಿಗುವಂತೆ ಮಾಡಲು ಪ್ರಧಾನಮಂತ್ರಿ ಶ್ರಮಯೋಗಿ ಮಾನಧನ ಯೋಜನೆಯನ್ನು ಬಜೆಟ್ನಲ್ಲಿ ಪ್ರಕಟಿಸಿರುವ ಕೇಂದ್ರ ಸರ್ಕಾರ, ಭವಿಷ್ಯ ನಿಧಿ ಗ್ರಾಹಕರಿಗೂ ಬಂಪರ್ ಕೊಡುಗೆಯೊಂದನ್ನು ಪ್ರಕಟಿಸುವ ನಿರೀಕ್ಷೆ ಇದೆ.
ಸದ್ಯ ಭವಿಷ್ಯ ನಿಧಿಯಡಿ 1000 ರು. ಕನಿಷ್ಠ ಪಿಂಚಣಿ ಸಿಗುತ್ತಿದೆ. ಆ ಮೊತ್ತವನ್ನು ಶ್ರಮಯೋಗಿ ಮಾನಧನ ಯೋಜನೆಯಂತೆ ಕನಿಷ್ಠ 3000 ರು.ಗೆ ಏರಿಸಲು ಸರ್ಕಾರ ಚಿಂತನೆ ನಡೆಸುತ್ತಿದೆ. ಲೋಕಸಭೆ ಚುನಾವಣೆಗೂ ಮೊದಲೇ ಈ ಕುರಿತು ಘೋಷಣೆ ಹೊರಬೀಳುವ ಸಾಧ್ಯತೆ ಇದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಓದಿರಿ.