
ಭಾರತ ಮತ್ತು ಪಾಕಿಸ್ತಾನದ ಸಂಘರ್ಷದ ಹಿನ್ನೆಲೆಯಲ್ಲಿ ಷೇರುಪೇಟೆ ಭಾರಿ ಕುಸಿತ ಕಂಡಿತ್ತು. ಆದರೆ ಇದೀಗ ಉಭಯ ದೇಶಗಳು ಕದನ ವಿರಾಮ ಘೋಷಿಸಿದ್ದ ಬೆನ್ನಲ್ಲೇ, ಷೇರುಪೇಟೆಯಲ್ಲಿ ಗೂಳಿ ಅಬ್ಬರಿಸಿದೆ. ಸೆನ್ಸೆಕ್ಸ್ ಮತ್ತು ನಿಫ್ಟಿ ದಾಖಲೆ ಬರೆದಿದೆ. ನಿಫ್ಟಿ 50 ಸೂಚ್ಯಂಕವು 24,420 ಕ್ಕೆ ಏರಿಕೆಯಾಗಿ 24,737 ರ ದಿನದ ಗರಿಷ್ಠ ಮಟ್ಟವನ್ನು ತಲುಪಿತು. ದಿನದ ಇಂಟ್ರಾಡೇಯಲ್ಲಿ 700 ಕ್ಕೂ ಹೆಚ್ಚು ಅಂಕಗಳ ಲಾಭವನ್ನು ದಾಖಲಿಸಿತು. ಬಿಎಸ್ಇ ಸೆನ್ಸೆಕ್ಸ್ 80,803 ಕ್ಕೆ ಪ್ರಾರಂಭವಾಗಿ 81,830 ರ ದಿನದ ಇಂಟ್ರಾಡೇಯಲ್ಲಿ ಗರಿಷ್ಠ ಮಟ್ಟವನ್ನು ತಲುಪಿತು. ಈ ದಿನದ ಇಂಟ್ರಾಡೇಯಲ್ಲಿ ಗರಿಷ್ಠ ಮಟ್ಟವನ್ನು ತಲುಪಿದರೂ, 30-ಸ್ಟಾಕ್ ಸೂಚ್ಯಂಕವು ಆರಂಭಿಕ ಗಂಟೆಯ ಕೆಲವೇ ನಿಮಿಷಗಳಲ್ಲಿ 2,200 ಕ್ಕೂ ಹೆಚ್ಚು ಅಂಕಗಳ ಲಾಭವನ್ನು ದಾಖಲಿಸಿತು. ಬ್ಯಾಂಕ್ ನಿಫ್ಟಿ ಸೂಚ್ಯಂಕವು 54,658 ಕ್ಕೆ ಪ್ರಾರಂಭವಾಯಿತು ಮತ್ತು ದಿನದ ಇಂಟ್ರಾಡೇಯಲ್ಲಿ 55,292 ರ ಗರಿಷ್ಠ ಮಟ್ಟವನ್ನು ತಲುಪುವ ಮೂಲಕ 55 ಸಾವಿರ ಗರಿಷ್ಠವನ್ನು ಮರಳಿ ಪಡೆಯಿತು.
ಷೇರು ಮಾರುಕಟ್ಟೆ ತಜ್ಞರ ಪ್ರಕಾರ, ಭಾರತೀಯ ಷೇರು ಮಾರುಕಟ್ಟೆ ಏರಲು ಕಾರಣ, ಭಾರತ-ಪಾಕಿಸ್ತಾನ ಕದನ ವಿರಾಮ. ಆದಾಗ್ಯೂ, ಅಮೆರಿಕ ಮತ್ತು ಚೀನಾ ವ್ಯಾಪಾರ ಒಪ್ಪಂದ, ಭಾರತ ಮತ್ತು ಇಂಗ್ಲೆಂಡ್ ನಡುವೆ ಮುಕ್ತ ವ್ಯಾಪಾರ ಒಪ್ಪಂದ, ಚಿಲ್ಲರೆ ಹೂಡಿಕೆದಾರರ ಭಾವನೆಯನ್ನು ಉತ್ತೇಜಿಸುವ ಬಲವಾದ ಎಎಂಎಫ್ಐ ಡೇಟಾ ಮತ್ತು ಎಫ್ಐಐಎಸ್ ಖರೀದಿಗೆ ಇಂದು ದಲಾಲ್ ಸ್ಟ್ರೀಟ್ ಸೂಚ್ಯಂಕಗಳನ್ನು ಉತ್ತೇಜಿಸಿರುವುದು ಕೂಡ ಪ್ರಮುಖ ಕಾರನ ಎನ್ನಲಾಗಿದೆ. "ಭಾರತ-ಪಾಕಿಸ್ತಾನ ಉದ್ವಿಗ್ನತೆಯ ಹೊರತಾಗಿಯೂ, ಭಾರತೀಯ ಷೇರು ಮಾರುಕಟ್ಟೆ ಅಚ್ಚರಿಯ ಸ್ಥಿತಿಸ್ಥಾಪಕತ್ವವನ್ನು ಪ್ರದರ್ಶಿಸಿದೆ. ಇದಕ್ಕೆ ಮುಖ್ಯ ಕಾರಣವೆಂದರೆ FII ಗಳ ನಿರಂತರ ಖರೀದಿ. ಭಾರತ-ಪಾಕಿಸ್ತಾನ ಕದನ ವಿರಾಮದ ನಂತರ, FII ಗಳು ಭಾರತೀಯ ಷೇರುಗಳ ಮೇಲೆ ಹೆಚ್ಚು ಆಕ್ರಮಣಕಾರಿಯಾಗಿ ಹೂಡಿಕೆ ಮಾಡುವ ನಿರೀಕ್ಷೆಯಿದೆ. ಇದು ದಲಾಲ್ ಸ್ಟ್ರೀಟ್ನಲ್ಲಿ ಏರಿಕೆಗೆ ಕಾರಣವಾಗುತ್ತಿದೆ ಎನ್ನುವುದು, ಮೆಹ್ತಾ ಈಕ್ವಿಟೀಸ್ನ ಸಂಶೋಧನೆಯ ಎವಿಪಿ ಪ್ರಶಾಂತ್ ತಾಪ್ಸಿ ಅವರ ಮಾತು.
ಗೃಹ, ವಾಹನ ಸಾಲ ಬಯಸಿದವರಿಗೆ ಬಂಪರ್: FD ಇಡುವವರಿಗೆ ಬ್ಯಾಡ್ ನ್ಯೂಸ್: ಇಲ್ಲಿದೆ ಡಿಟೇಲ್ಸ್...
ಇದರ ಜೊತೆಗೆ, ಅಮೆರಿಕ ಮ ತ್ತು ಚೀನಾ ವ್ಯಾಪಾರ ಒಪ್ಪಂದದ ಘೋಷಣೆಯ ನಂತರ, ಜಾಗತಿಕ ಭಾವನೆಗಳ ನಿರೀಕ್ಷೆಯು ಸುಧಾರಿಸಿದೆ. ಈಗ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸುಂಕದ ಬಗ್ಗೆ ಹೂಡಿಕೆದಾರರಿಗೆ ಸ್ವಲ್ಪ ಸ್ಪಷ್ಟತೆ ಸಿಗುತ್ತಿದೆ, ಇದು ದಲಾಲ್ ಸ್ಟ್ರೀಟ್ ಸೇರಿದಂತೆ ಪ್ರಮುಖ ಏಷ್ಯಾದ ಷೇರುಪೇಟೆಗಳನ್ನು ಉತ್ತೇಜಿಸಿದೆ ಎಂದಿದ್ದಾರೆ ಪ್ರಾಫಿಟ್ಮಾರ್ಟ್ ಸೆಕ್ಯುರಿಟೀಸ್ನ ಸಂಶೋಧನಾ ಮುಖ್ಯಸ್ಥ ಅವಿನಾಶ್ ಗೋರಕ್ಷಕರ್. “ಕಳೆದ ವಾರ, ಭಾರತ ಮತ್ತು ಇಂಗ್ಲೆಂಡ್ ನಡುವೆ ವ್ಯಾಪಾರ ಒಪ್ಪಂದವನ್ನು ಘೋಷಿಸಲಾಯಿತು, ಇದು ಭಾರತೀಯ ರಫ್ತು ಮತ್ತು ಆಮದು ವ್ಯವಹಾರಕ್ಕೆ ಸ್ವಲ್ಪ ಪರಿಹಾರವನ್ನು ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ. ಆದ್ದರಿಂದ, ಭಾರತ-ಪಾಕಿಸ್ತಾನ ಉದ್ವಿಗ್ನತೆಯ ಉಲ್ಬಣವನ್ನು ಕಡಿಮೆ ಮಾಡುವ ಘೋಷಣೆಯ ನಂತರ ಮಾರುಕಟ್ಟೆ ಈ ದೊಡ್ಡ ಬೆಳವಣಿಗೆಯನ್ನು ರಿಯಾಯಿತಿ ಮಾಡಲು ಪ್ರಯತ್ನಿಸುತ್ತಿದೆ ಎನ್ನುವುದು ಅವರ ಹೇಳಿಕೆ.
ಅಮೆರಿಕ ಮತ್ತು ಇಂಗ್ಲೆಡ್ ನಡುವಿನ ವ್ಯಾಪಾರ ಒಪ್ಪಂದದ ಘೋಷಣೆ ಮತ್ತು ಅಮೆರಿಕ ಹಾಗೂ ಚೀನಾದ ಅಧಿಕಾರಿಗಳು ವಾರಾಂತ್ಯದಲ್ಲಿ ಸ್ವಿಟ್ಜರ್ಲ್ಯಾಂಡ್ನಲ್ಲಿ ವ್ಯಾಪಾರ ಚರ್ಚೆಗಳಿಗಾಗಿ ಸಭೆ ಸೇರುತ್ತಿದ್ದಾರೆ ಎಂಬ ವರದಿಗಳು ವಿಶಾಲವಾದ ಮಾತುಕತೆಗಳು ಮತ್ತು ಸುಂಕ ಕಡಿತಕ್ಕೆ ದಾರಿ ಮಾಡಿಕೊಟ್ಟವು, ಹೂಡಿಕೆದಾರರ ಭಾವನೆಯನ್ನು ಬೆಂಬಲಿಸಿದವು. ಇದಕ್ಕಾಗಿ ಈ ಚೇತರಿಕೆ ಎನ್ನುವುದು ಎಚ್ಡಿಎಫ್ಸಿ ಸೆಕ್ಯುರಿಟೀಸ್ನ ಪ್ರೈಮ್ ರಿಸರ್ಚ್ ಮುಖ್ಯಸ್ಥ ದೇವರ್ಶ್ ವಕಿಲ್ ಮಾತು. “ಭಾರತ-ಪಾಕಿಸ್ತಾನ ಉದ್ವಿಗ್ನತೆಯ ಹೊರತಾಗಿಯೂ, ಭಾರತೀಯ ಷೇರು ಮಾರುಕಟ್ಟೆಯು ಆಶ್ಚರ್ಯಕರ ಸ್ಥಿತಿಸ್ಥಾಪಕತ್ವವನ್ನು ಪ್ರದರ್ಶಿಸಿದೆ. ಈ ಸ್ಥಿತಿಸ್ಥಾಪಕತ್ವಕ್ಕೆ ಮೂಲಭೂತ ಕಾರಣ ನಿರಂತರ ಎಫ್ಐಐ ಖರೀದಿಯಾಗಿದೆ. ಭಾರತ-ಪಾಕಿಸ್ತಾನ ಕದನ ವಿರಾಮ ಘೋಷಣೆಯ ನಂತರ, ಎಫ್ಐಐಗಳು ಭಾರತೀಯ ಷೇರುಗಳ ಮೇಲೆ ಹೆಚ್ಚಿನ ಏರಿಕೆಯನ್ನು ತೋರಿಸುತ್ತಿವೆ ಎಂಬ ಗುಸುಗುಸು ಕೇಳಿಬರುತ್ತಿದೆ, ಇದು ದಲಾಲ್ ಸ್ಟ್ರೀಟ್ನಲ್ಲಿ ಏರಿಕೆಗೆ ಉತ್ತೇಜನ ನೀಡುತ್ತಿದೆ, ”ಎನ್ನುತ್ತಾರೆ ಲಕ್ಷ್ಮಿಶ್ರೀ ಹೂಡಿಕೆ ಮತ್ತು ಭದ್ರತೆಗಳ ಸಂಶೋಧನಾ ಮುಖ್ಯಸ್ಥ ಅಂಶುಲ್ ಜೈನ್.
ಬಾಡಿಗೆದಾರರಿಗೆ ಆದಾಯತೆರಿಗೆ ಇಲಾಖೆ ಶಾಕ್: ದಂಡ-ಶಿಕ್ಷೆ ಆಗ್ಬಾರ್ದು ಎಂದ್ರೆ ಕೂಡಲೇ ಈ ರೀತಿ ಮಾಡಿ...
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಓದಿರಿ.