ಪಾನ್‌, ಆಧಾರ್‌ ನೀಡದ ಉದ್ಯೋಗಿಗಳ ಜೇಬಿಗೆ ಕತ್ತರಿ!

Published : Jan 25, 2020, 11:15 AM ISTUpdated : Jan 25, 2020, 11:22 AM IST
ಪಾನ್‌, ಆಧಾರ್‌ ನೀಡದ ಉದ್ಯೋಗಿಗಳ ಜೇಬಿಗೆ ಕತ್ತರಿ!

ಸಾರಾಂಶ

ಪಾನ್‌, ಆಧಾರ್‌ ನೀಡದ ಉದ್ಯೋಗಿಗಳ ಜೇಬಿಗೆ ಕತ್ತರಿ!| 2.5 ಲಕ್ಷಕ್ಕಿಂತಲೂ ಹೆಚ್ಚಿರುವ ಉದ್ಯೋಗಿಗಳು ಪಾನ್‌ ಮತ್ತು ಆಧಾರ್‌ ಮಾಹಿತಿಯನ್ನು ಒದಗಿಸದೇ ಇದ್ದರೆ ಕ್ರಮ

ನವದೆಹಲಿ[ಜ.25]: ವಾರ್ಷಿಕ ಆದಾಯ 2.5 ಲಕ್ಷಕ್ಕಿಂತಲೂ ಹೆಚ್ಚಿರುವ ಉದ್ಯೋಗಿಗಳು ಪಾನ್‌ ಮತ್ತು ಆಧಾರ್‌ ಮಾಹಿತಿಯನ್ನು ಒದಗಿಸದೇ ಇದ್ದರೆ ಸರ್ಕಾರ ಜಾರಿಗೊಳಿಸಿರುವ ನೂತನ ನಿಯಮದಂತೆ ವೇತನದ ಶೇ.20ರಷ್ಟುಹಣ ಟಿಡಿಎಸ್‌ ರೂಪದಲ್ಲಿ ಕಡಿತವಾಗಲಿದೆ.

ವೋಟರ್‌ ಐಡಿಗೆ ಆಧಾರ್‌ ಲಿಂಕ್‌ ಕಡ್ಡಾಯ

ಕೇಂದ್ರೀಯ ನೇರ ತೆರಿಗೆ ಮಂಡಳಿ ನೂತನ ನಿಯಮವೊಂದನ್ನು ರೂಪಿಸಿದ್ದು, ಜ.16ರಿಂದ ಈ ನಿಯಮ ಜಾರಿಗೆ ಬಂದಿದೆ. ಅದರಂತೆ ವಾರ್ಷಿಕ 2.5 ಲಕ್ಷಕ್ಕಿಂತ ಹೆಚ್ಚಿನ ಆದಾಯ ಇರುವವರು ಪಾನ್‌ ಮತ್ತು ಆಧಾರ್‌ ಮಾಹಿತಿ ನೀಡುವುದು ಕಡ್ಡಾಯವಾಗಿದೆ. ಒಂದು ವೇಳೆ ಉದ್ಯೋಗಿಗಳ ಆದಾಯ 2.5 ಲಕ್ಷಕ್ಕಿಂತಲೂ ಕಡಿಮೆ ಇದ್ದರೆ ತೆರಿಗೆ ಕಡಿತಗೊಳ್ಳುವುದಿಲ್ಲ. ಟಿಡಿಎಸ್‌ ಪಾವತಿ ಮತ್ತು ವೇತನದಾರರ ಆದಾಯದ ಕಣ್ಣಿಡಲು ಈ ನಿಯಮವನ್ನು ಜಾರಿಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಕೇಂದ್ರಕ್ಕೆ ನೇರ ತೆರಿಗೆ ಶಾಕ್!

2020ರ ಮಾರ್ಚ್ 31ಕ್ಕೆ ಮುಕ್ತಾಯಗೊಳ್ಳಲಿರುವ ಪ್ರಸಕ್ತ ಹಣಕಾಸು ವರ್ಷದಲ್ಲಿ ನೇರ ತೆರಿಗೆ (ಕಾರ್ಪೋರೆಟ್‌ ಮತ್ತು ಆದಾಯ ತೆರಿಗೆ) ಸಂಗ್ರಹದಲ್ಲಿ ಭಾರೀ ಪ್ರಮಾಣದಲ್ಲಿ ಇಳಿಕೆಯಾಗುವ ಸಾಧ್ಯತೆ ಇದೆ. ಬಹುತೇಕ ನಿಶ್ಚಿತ ಎನ್ನಲಾದ ಈ ಬೆಳವಣಿಗೆ ಖಚಿತಪಟ್ಟಲ್ಲಿ ಅದು ಕಳೆದ 2 ದಶಕಗಳಲ್ಲೇ ಮೊದಲ ಬಾರಿಗೆ ನೇರ ತೆರಿಗೆ ಸಂಗ್ರಹದಲ್ಲಿನ ಇಳಿಕೆಯಾಗಲಿದೆ ಎಂದು ವರದಿಯೊಂದು ಹೇಳಿದೆ. ಸರ್ಕಾರದ ವಾರ್ಷಿಕ ಆದಾಯ ನಿರೀಕ್ಷೆಯಲ್ಲಿ ಶೇ.80ರಷ್ಟುಪಾಲು ನೇರ ತೆರಿಗೆಯದ್ದೇ ಆಗಿರುವ ಕಾರಣ, ಸಹಜವಾಗಿಯೇ ಈ ಬೆಳವಣಿಗೆ ವಿವಿಧ ಯೋಜನೆಗಳ ಜಾರಿಗೆ ತೆರಿಗೆ ಸಂಗ್ರಹವನ್ನೇ ನಂಬಿಕೊಂಡಿರುವ ಕೇಂದ್ರ ಸರ್ಕಾರಕ್ಕೆ ಭಾರೀ ಹೊಡೆತ ನೀಡುವ ಸಾಧ್ಯತೆ ಇದೆ ಎಂದು ವರದಿ ಹೇಳಿದೆ.

ಆಧಾರ್‌ ಜೊತೆ ಪಡಿತರ ಚೀಟಿ ಲಿಂಕ್‌ಗೆ ಕಡ್ಡಾಯ

 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

One8 ಸ್ಪೋರ್ಟ್ಸ್ ಬ್ರ್ಯಾಂಡ್ ಮಾರಾಟಕ್ಕೆ ಮುಂದಾದ ಕೊಹ್ಲಿ, 40 ಕೋಟಿ ಹೂಡಿಕೆ ಪ್ಲಾನ್
ಮೋದಿ-ಪುಟಿನ್‌ ಒಪ್ಪಂದ: 40 ದಿನಗಳಲ್ಲ, ಕೇವಲ 24 ದಿನಗಳಲ್ಲೇ ರಷ್ಯಾಗೆ ತಲುಪಲಿದೆ ಭಾರತದ ಸರಕುಗಳು!