ಕೇಂದ್ರದಿಂದ ಲಾಟರಿ: GST ಬಿಲ್‌ ಕೇಳಿ ಪಡೆಯಿರಿ, 1 ಕೋಟಿ ರು. ಬಹುಮಾನ ಗೆಲ್ಲಿ!

Published : Feb 05, 2020, 08:07 AM ISTUpdated : Feb 05, 2020, 04:42 PM IST
ಕೇಂದ್ರದಿಂದ ಲಾಟರಿ: GST ಬಿಲ್‌ ಕೇಳಿ ಪಡೆಯಿರಿ, 1 ಕೋಟಿ ರು. ಬಹುಮಾನ ಗೆಲ್ಲಿ!

ಸಾರಾಂಶ

ಜಿಎಸ್‌ಟಿ ಬಿಲ್‌ ಕೇಳಿ ಪಡೆಯಿರಿ, 1 ಕೋಟಿ ರು. ಬಹುಮಾನ ಗೆಲ್ಲಿ!| ತೆರಿಗೆ ಸೋರಿಕೆ ತಡೆಗೆ ಕೇಂದ್ರದಿಂದ ಲಾಟರಿ ಯೋಜನೆ ಪ್ರಸ್ತಾವ| ಶೀಘ್ರದಲ್ಲೇ ಜಿಎಸ್‌ಟಿ ಮಂಡಳಿಯಿಂದ ಅನುಮತಿ ಸಂಭವ

ನವದೆಹಲಿ[ಫೆ.05]: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸಂಗ್ರಹದಲ್ಲಿ ಆಗುತ್ತಿರುವ ಸೋರಿಕೆ ತಡೆಗೆ ಕೇಂದ್ರ ಸರ್ಕಾರ ವಿಶಿಷ್ಟದಾರಿಯೊಂದನ್ನು ಹುಡುಕಲು ಮುಂದಾಗಿದೆ. ಖರೀದಿ ಪ್ರಕ್ರಿಯೆ ವೇಳೆ ಜಿಎಸ್‌ಟಿ ಬಿಲ್‌ ಪಡೆಯುವಂತೆ ಗ್ರಾಹಕರನ್ನು ಪ್ರೋತ್ಸಾಹಿಸಲು, ಬಿಲ್‌ ಪಡೆದವರಿಗಾಗಿ ಲಾಟರಿ ಯೋಜನೆಯೊಂದನ್ನು ಪ್ರಕಟಿಸಲು ಸಜ್ಜಾಗುತ್ತಿದೆ. ವಿಜೇತರಿಗೆ 10 ಲಕ್ಷ ರು.ನಿಂದ 1 ಕೋಟಿ ರು.ವರೆಗೂ ಬಹುಮಾನ ನೀಡಲು ಉದ್ದೇಶಿಸಿದೆ.

ಭವಿಷ್ಯ ನಿಧಿ, ಪಿಂಚಣಿ ಮೇಲೂ ತೆರಿಗೆ: ಟ್ಯಾಕ್ಸ್ ಸಂಗ್ರಹಕ್ಕೆ ಕೇಂದ್ರದ ಹೊಸ ಮಾರ್ಗ!

ಈ ಕುರಿತ ಪ್ರಸ್ತಾವವನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅಧ್ಯಕ್ಷತೆಯಲ್ಲಿ ರಾಜ್ಯಗಳ ಹಣಕಾಸು ಸಚಿವರನ್ನು ಒಳಗೊಂಡ ಜಿಎಸ್‌ಟಿ ಮಂಡಳಿ ಸಭೆ ಶೀಘ್ರದಲ್ಲೇ ಪರಿಶೀಲಿಸಿ ಅಂತಿಮ ನಿರ್ಧಾರ ಕೈಗೊಳ್ಳಲಿದೆ.

ಹೊಸ ಲಾಟರಿ ಯೋಜನೆಯೊಂದನ್ನು ರೂಪಿಸಿದ್ದೇವೆ. ಜಿಎಸ್‌ಟಿ ಅಡಿ ಪಡೆಯುವ ಪ್ರತಿ ಬಿಲ್‌ಗೂ ಲಾಟರಿ ಗೆಲ್ಲುವ ಅವಕಾಶ ಇರುತ್ತದೆ. ತೆರಿಗೆ ಪಾವತಿಸಲು ಗ್ರಾಹಕರಿಗೆ ಇದು ಪ್ರೋತ್ಸಾಹಕವಾಗಿ ಕೆಲಸ ಮಾಡಲಿದೆ. 1 ಕೋಟಿ ಅಥವಾ 10 ಲಕ್ಷ ರು. ಗೆಲ್ಲುವ ಅವಕಾಶ ಇರುವ ಕಾರಣದಿಂದ, ಶೇ.28ರಷ್ಟುತೆರಿಗೆಯನ್ನು ಗ್ರಾಹಕರು ಉಳಿಸಲು ಬಯಸುವುದಿಲ್ಲ ಎಂದು ಕಾರ್ಯಕ್ರಮವೊಂದರಲ್ಲಿ ಕೇಂದ್ರೀಯ ಪರೋಕ್ಷ ತೆರಿಗೆ ಹಾಗೂ ಕಸ್ಟಮ್ಸ್‌ ಮಂಡಳಿ ಸದಸ್ಯ ಜಾನ್‌ ಜೋಸೆಫ್‌ ಅವರು ತಿಳಿಸಿದ್ದಾರೆ.

ದಿನವೊಂದಕ್ಕೆ 10 ಸಾವಿರಕ್ಕಿಂತ ಹೆಚ್ಚು ನಗದು ಪಾವತಿ ನಿಷಿದ್ಧ!

ಈಗಿರುವ ಯೋಜನೆಯ ಪ್ರಕಾರ, ಪ್ರತಿ ಬಿಲ್‌ ಅನ್ನು ವೆಬ್‌ಸೈಟ್‌ವೊಂದಕ್ಕೆ ಅಪ್‌ಲೋಡ್‌ ಮಾಡಲಾಗುತ್ತದೆ. ಸ್ವಯಂಚಾಲಿತವಾಗಿ ಡ್ರಾ ಆಗಲಿದೆ. ವಿಜೇತರಿಗೆ ಬಹುಮಾನ ಬಂದಿರುವುದನ್ನು ತಿಳಿಸಲಾಗುತ್ತದೆ.

ಕನಿಷ್ಠ ಎಷ್ಟುಮೊತ್ತದ ಬಿಲ್‌ಗಳನ್ನು ಲಾಟರಿ ಪ್ರಕ್ರಿಯೆಗೆ ಸೇರಿಸಬೇಕು ಎಂಬುದನ್ನು ಜಿಎಸ್‌ಟಿ ಮಂಡಳಿ ಸಭೆ ನಿರ್ಧರಿಸುತ್ತದೆ. ಗ್ರಾಹಕ ಹಿತರಕ್ಷಣಾ ನಿಧಿಯನ್ನು ಬಳಸಿ ಲಾಟರಿಯಡಿ ಬಹುಮಾನ ನೀಡಲಾಗುತ್ತದೆ ಎಂದು ಹೇಳಲಾಗಿದೆ. ಲಾಭ ನಿಗ್ರಹ ಕಾರ್ಯಾಚರಣೆ ವೇಳೆ ಗಳಿಸುವ ಹಣವನ್ನು ಈ ನಿಧಿಗೆ ಜಮೆ ಮಾಡಲಾಗಿರುತ್ತದೆ.

ಫೆಬ್ರವರಿ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ ಮಾಡಿ

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

ಅನಿಲ್ ಅಂಬಾನಿ ಕುಟುಂಬಕ್ಕೆ ಮತ್ತೊಂದು ಶಾಕ್, ಪುತ್ರನ ವಿರುದ್ದ 228 ಕೋಟಿ ರೂ ವಂಚನೆ ಕೇಸ್
ಮದ್ಯ ಮಾರಾಟಕ್ಕೆ ಇಳಿದ ಯುವರಾಜ್‌ ಸಿಂಗ್‌, ಒಂದು ತಿಂಗಳ ಸಂಬಳಕ್ಕೆ ಬರುತ್ತೆ ಒಂದು ಬಾಟಲ್‌!