
ಬೆಂಗಳೂರು[ಜು.30]: ಸೋಮವಾರ ಸಂಜೆಯಿಂದ ನಾಪತ್ತೆಯಾಗಿರುವ ಕಾಫಿ ಡೇ ಮಾಲೀಕ ಸಿದ್ಧಾರ್ಥ ಇನ್ನೂ ಪತ್ತೆಯಾಗಿಲ್ಲ. ಪೊಲೀಸರು ನೇತ್ರಾವತಿ ನದಿಯಲ್ಲಿ ಹುಡುಕಾಟ ಆರಂಭಿಸಿ 12 ಗಂಟೆಗಳು ಉರುಳಿದರೂ ಉದ್ಯಮಿ ಪತ್ತೆಯಾಗಿಲ್ಲ. ಈಗಾಗಲೇ ಅವರು ಬರೆದಿದ್ದಾರೆನ್ನಲಾದ ಭಾವುಕ ಪತ್ರ ವೈರಲ್ ಆಗಿದ್ದು, ಗಂಟೆಗಳು ಉರುಳಿದಂತೆ ಅವರು ಆತ್ಮಹತ್ಯೆ ಮಾಡಿಕೊಂಡಿರುವ ಅನುಮಾನಗಳು ಹೆಚ್ಚಾಗಲಾರಂಭಿಸಿವೆ. ಈ ಎಲ್ಲಾ ಬೆಳವಣಿಗೆಗ: ಬೆನ್ನಲ್ಲೇ ಸಿದ್ಧಾರ್ಥ ಮಾಲೀಕತ್ವದ ಮಾಲೀಕತ್ವದ ಕಂಪನಿಗಳ ಷೇರು ಬೆಲೆಯಲ್ಲೂ ತೀವ್ರ ಕುಸಿತವಾಗಿದೆ.
ಎಸ್. ಎಂ ಕೃಷ್ಣ ಅಳಿಯ, ಉದ್ಯಮಿ ಸಿದ್ಧಾರ್ಥ ಆತ್ಮಹತ್ಯೆ? ಪತ್ರದಲ್ಲಿ ಮಹತ್ವದ ಮಾಹಿತಿ!
ಸಿದ್ಧಾರ್ಥ ಮಾಲೀಕತ್ವದ ಕೆಫೆ ಕಾಫಿ ಡೇ, ಎಸ್ಐಸಿಎಎಲ್ ಷೇರು ಬೆಲೆ ತೀವ್ರ ಕುಸಿತಗೊಂಡಿದೆ. ನಿನ್ನೆಯ ವಹಿವಾಟು ಮುಕ್ತಾಯದ ಹೊತ್ತಿಗೆ 192 ರೂ ಮೌಲ್ಯವಿದ್ದ ಕೆಫೆ ಕಾಫಿ ಡೇ ಷೇರು ಮಾರುಕಟ್ಟೆ, ಇಂದು ಮಂಗಳವಾರ 153 ರೂಗೆ ಇಳಿದಿದೆ.
ಸಿದ್ಧಾರ್ಥರ ಮತ್ತೊಂದು ಕಂಪನಿ MICAL ಷೇರು ಬೆಲೆಯಲ್ಲೂ ತೀವ್ರ ಕುಸಿತವಗಿದ್ದು, ಸದ್ಯ 75 ರೂ.ಗೆ ಬಂದಿಳಿದಿದೆ.
ಎಸ್.ಎಂ.ಕೃಷ್ಣ ಅಳಿಯ, ಕಾಫಿ ಡೇ ಮಾಲೀಕ ಸಿದ್ಧಾರ್ಥ ನೇತ್ರಾವತಿ ನದಿ ಬಳಿ ನಾಪತ್ತೆ
ಕಂಪೆನಿ ಮಾಲೀಕ ನಾಪತ್ತೆಯಾಗಿದ್ದಾರೆಂದು ಬಹಿರಂಗವಾದ ಬೆನ್ನಲ್ಲೇ ಷೇರು ಮಾರುಕಟ್ಟೆ ಶೇ, 20ರಷ್ಟು ಕುಸಿತ ಕಂಡಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಓದಿರಿ.