ಕಿರಣ್‌ ಮಜುಂದಾರ್‌ ಶಾಗೆ ಆಸ್ಪ್ರೇಲಿಯಾ ಅತ್ಯುಚ್ಚ ಗೌರವ!

Published : Jan 19, 2020, 10:28 AM ISTUpdated : Jan 19, 2020, 11:18 AM IST
ಕಿರಣ್‌ ಮಜುಂದಾರ್‌ ಶಾಗೆ ಆಸ್ಪ್ರೇಲಿಯಾ ಅತ್ಯುಚ್ಚ ಗೌರವ!

ಸಾರಾಂಶ

ಕಿರಣ್‌ ಮಜುಂದಾರ್‌ ಶಾಗೆ ಆಸ್ಪ್ರೇಲಿಯಾ ಅತ್ಯುಚ್ಚ ಗೌರವ| ಆರ್ಡರ್‌ ಆಫ್‌ ಆಸ್ಪ್ರೇಲಿಯಾ ಪ್ರದಾನ| ಇದಕ್ಕೆ ಪಾತ್ರರಾದ 4ನೇ ಭಾರತೀಯ ಪ್ರಜೆ

ನವದೆಹಲಿ[ಜ.19]: ಆಸ್ಪ್ರೇಲಿಯಾ ಸರ್ಕಾರ ಕೊಡ ಮಾಡುವ ಅತ್ಯುನ್ನತ ನಾಗರಿಕ ಗೌರವ ‘ಆರ್ಡರ್‌ ಅಫ್‌ ಆಸ್ಪ್ರೇಲಿಯಾ’ಕ್ಕೆ ಬೆಂಗಳೂರು ಮೂಲದ ಬಯೋಕಾನ್‌ ಸಂಸ್ಥಾಪಕಿ ಕಿರಣ್‌ ಮಜುಂದಾರ್‌ ಶಾ ಅವರು ಪಾತ್ರರಾಗಿದ್ದಾರೆ.

ಆ ಮೂಲಕ ಈ ಗೌರವಕ್ಕೆ ಭಾಜನರಾದ ನಾಲ್ಕನೇ ಭಾರತೀಯ ವ್ಯಕ್ತಿ ಎಂಬ ಹಿರಿಮೆ ಮುಡಿಗೇರಿಸಿಕೊಂಡಿದ್ದಾರೆ. ಈ ಹಿಂದೆ ಕ್ರಿಕೆಟ್‌ ದಂತಕತೆ ಸಚಿನ್‌ ತೆಂಡುಲ್ಕರ್‌, ಮಾಜಿ ಅಟಾರ್ನಿ ಜನರಲ್‌ ಸೋಲಿ ಸೊರಾಬ್ಜಿ ಹಾಗೂ ಸಮಾಜ ಸೇವಕಿ ಮದರ್‌ ಥೆರೇಸಾಗೆ ಈ ಗೌರವ ಲಭಿಸಿತ್ತು.

ಇ-ಸಿಗರೇಟ್ ಬ್ಯಾನ್ ಘೋಷಣೆ ನಿಮ್ಮಿಂದೇಕೆ?: ಕಿರಣ್ ಬೆರಗಾದರು ನಿರ್ಮಲಾ ಉತ್ತರಕ್ಕೆ!

ಶುಕ್ರವಾರ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾರತದಲ್ಲಿನ ಆಸ್ಪ್ರೇಲಿಯಾ ರಾಯಭಾರಿ ಹರೀಂದರ್‌ ಸಿಧು ಗೌರವ ಪ್ರದಾನ ಮಾಡಿದ್ದಾರೆ.

ಆಸ್ಪ್ರೇಲಿಯಾ ಹಾಗೂ ಭಾರತ ನಡುವಿನ ಸಂಬಂಧ ಸುಧಾರಣೆಯಲ್ಲಿ ಕಿರಣ್‌ ಪಾತ್ರ ಪರಿಗಣಿಸಿ, ಈ ಗೌರವಕ್ಕೆ ಆಯ್ಕೆ ಮಾಡಲಾಗಿದೆ ಎಂದು ಆಸ್ಪ್ರೇಲಿಯಾ ಅಧಿಕಾರಿಗಳು ತಿಳಿಸಿದ್ದಾರೆ. ಮಜುಂದರ್‌ ಶಾ ಆಸ್ಪ್ರೇಲಿಯಾದ ಫೆಡರೇಶನ್‌ ವಿಶ್ವ ವಿದ್ಯಾಲಯದ ಹಳೇ ವಿದ್ಯಾರ್ಥಿಯೂ ಹೌದು.

ಕನ್ನಡಿಗರಿಗೆ ಅವಮಾನ: ಕೊನೆಗೂ ಕ್ಷಮೆ ಕೇಳಿದ ಕಿರಣ್ ಮಜುಂದಾರ್ ಶಾ

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

ಅಬುಧಾಬಿಯಲ್ಲಿ ಫ್ರಾನ್ಸ್‌ನ ನೌಕಾನೆಲೆ ಮೇಲೆ ಇರಾನ್ ಡ್ರೋನ್ ದಾಳಿ: ಇರಾನ್ ಆಕ್ರಮಣದ ವಿರುದ್ಧ ಒಟ್ಟಾದ ಗಲ್ಫ್‌ ರಾಷ್ಟ್ರಗಳು
ಯುದ್ಧ ವಿದೇಶದಲ್ಲಾದ್ರೂ ತಲೆ ಮೇಲೆ ಕೈಹೊತ್ತು ಕುಳಿತ ಭಾರತೀಯರು, ಷೇರು ಮಾರ್ಕೆಟ್ ನಲ್ಲಿ ಭೂಕಂಪ