ಇಂದು 2.5 ಕೋಟಿ ರು. ಸಹಾಯಧನ ವಿತರಣೆ: ಪ್ರಕಾಶ್ ಶೆಟ್ಟಿ

By Kannadaprabha NewsFirst Published Dec 25, 2022, 2:17 PM IST
Highlights

ಕೂಳೂರಿನಲ್ಲಿರುವ ಗೋಲ್ಡ… ಪಿಂಚ್‌ ಮೈದಾನದಲ್ಲಿ ಆಶಾ ಪ್ರಕಾಶ್‌ ಶೆಟ್ಟಿಸಹಾಯ ಹಸ್ತ ಯೋಜನೆ ಕಾರ್ಯಕ್ರಮ ಡಿ.25 ರಂದು ಭಾನುವಾರ ಸಂಜೆ 3 ಗಂಟೆಗೆ ನಡೆಯಲಿದ್ದು, ಸುಮಾರು 1,250 ಕುಟುಂಬಗಳಿಗೆ 2.50 ಕೋಟಿ ರುಪಾಯಿ ಸಹಾಯ ಧನವನ್ನು ವಿತರಿಸಲಾಗುವುದು ಎಂದು ಎಂಆರ್‌ಜಿ ಗ್ರೂಪ್‌ ಚೇರ್ಮನ್‌ ಕೆ. ಪ್ರಕಾಶ್‌ ಶೆಟ್ಟಿತಿಳಿಸಿದ್ದಾರೆ.

ಮಂಗಳೂರು (ಡಿ.25): ಕೂಳೂರಿನಲ್ಲಿರುವ ಗೋಲ್ಡ… ಪಿಂಚ್‌ ಮೈದಾನದಲ್ಲಿ ಆಶಾ ಪ್ರಕಾಶ್‌ ಶೆಟ್ಟಿಸಹಾಯ ಹಸ್ತ ಯೋಜನೆ ಕಾರ್ಯಕ್ರಮ ಡಿ.25 ರಂದು ಭಾನುವಾರ ಸಂಜೆ 3 ಗಂಟೆಗೆ ನಡೆಯಲಿದ್ದು, ಸುಮಾರು 1,250 ಕುಟುಂಬಗಳಿಗೆ 2.50 ಕೋಟಿ ರುಪಾಯಿ ಸಹಾಯ ಧನವನ್ನು ವಿತರಿಸಲಾಗುವುದು ಎಂದು ಎಂಆರ್‌ಜಿ ಗ್ರೂಪ್‌ ಚೇರ್ಮನ್‌ ಕೆ. ಪ್ರಕಾಶ್‌ ಶೆಟ್ಟಿತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿ ಸಹಾಯ ಹಸ್ತ ಯೋಜನೆಗೆ ಸಂಬಂಧಿಸಿ ಅರ್ಜಿಗಳನ್ನು ವಿತರಣೆ ಮಾಡಿ ಬಳಿಕ ಅವುಗಳನ್ನು ಸ್ಥಳೀಯ ಸಂಘ ಸಂಸ್ಥೆಗಳ ಮೂಲಕ ಪರಿಶೀಲಿಸಿ, ಅವಶ್ಯವೆನಿಸಿದಲ್ಲಿ ಅರ್ಜಿದಾರರ ಮನೆಗೆ ತೆರಳಿ ಪರಿಸ್ಥಿತಿಯನ್ನು ಅವಲೋಕಿಸಿ ಬಳಿಕ ಆಯ್ಕೆ ಮಾಡಲಾಗಿದೆ. ತೀರಾ ಅವಶ್ಯಕತೆ ಇರುವವರನ್ನು ಗುರುತಿಸಿದ್ದೇವೆ ಎಂಬ ತೃಪ್ತಿ ನಮಗಿದೆ ಎಂದು ವಿವರಿಸಿದರು.

ಸುವರ್ಣ ನ್ಯೂಸ್‌ನ ಜಯಪ್ರಕಾಶ್ ಶೆಟ್ಟಿಯವರಿಗೆ ಪುನೀತ್ ಪ್ರಶಸ್ತಿಯ ಗರಿ

ಸಮಾಜ ಸೇವೆ, ಸೇವಾ ಕಾರ್ಯಗಳನ್ನು ನಡೆಸುತ್ತಿರುವ ಸಂಘ ಸಂಸ್ಥೆಗಳನ್ನೂ ನೆರವಿಗೆ ಆಯ್ಕೆ ಮಾಡಲಾಗಿದೆ. ಜಾತಿ, ಧರ್ಮಗಳನ್ನು ಪರಿಗಣಿಸದೆ ಸಹಾಯವನ್ನು ವಿತರಿಸಲಾಗುತ್ತಿದೆ. 1,250 ಕುಟುಂಬಗಳನ್ನು ಆಯ್ಕೆ ಮಾಡಲಾಗಿದೆ. ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆಯ ಪ್ರತಿಯೊಂದು ಗ್ರಾಮಗಳಿಂದಲೂ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ಸ್ವತಂತ್ರ ಸಮಿತಿ ಫಲಾನುಭವಿಗಳನ್ನು ಆಯ್ಕೆ ಮಾಡಿರುವುದರಿಂದ ಇದರಲ್ಲಿ ಯಾರದೇ ಶಿಫಾರಸುಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗಿಲ್ಲ. ಯೋಜನೆಯಲ್ಲಿ ಅರ್ಹ ಫಲಾನುಭವಿಗಳಿಗೆ ಸಹಾಯ ಸಲ್ಲಬೇಕೆನ್ನುವ ಆಶಯದಲ್ಲಿ ಬೇರೆ ಬೇರೆ ಸಮಿತಿಗಳನ್ನು ರಚಿಸಿಕೊಂಡು ಕಳೆದ ಎರಡು ತಿಂಗಳಿನಿಂದ ಕಾರ್ಯನಿರತವಾಗಿ ಫಲಾನುಭವಿಗಳ ಪಟ್ಟಿಯನ್ನು ಅಂತಿಮಗೊಳಿಸಲಾಗಿದೆ ಎಂದರು.

ಡಿ.25ರಂದು ಸಂಜೆ 3 ಗಂಟೆಗೆ ಫಲಾನುಭವಿಗಳನ್ನು ವಾಹನದ ಮೂಲಕ ಕೂಳೂರು ಬಳಿಯ ಗೋಲ್ಡ… ಪಿಂಚ್‌ ಮೈದಾನದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಕರೆದುಕೊಂಡು ಅವರಿಗೆ ಅಲ್ಲಿಯೇ ಸಹಾಯವನ್ನು ನೀಡಿ ಬಳಿಕ ಅವರನ್ನು ವಾಹನದಲ್ಲಿ ಅವರ ಮನೆಗೆ ಕಳುಹಿಸಿ ಕೊಡುವ ವ್ಯವಸ್ಥೆ ಮಾಡಲಾಗಿದೆ ಎಂದು ಪ್ರಕಾಶ್‌ ಶೆಟ್ಟಿಹೇಳಿದರು.

ಕಾರ್ಯಕ್ರಮದಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಹರೇಕಳ ಹಾಜಬ್ಬ, ಸಾಲುಮರದ ತಿಮ್ಮಕ್ಕ ಮತ್ತು ಮಹಾಲಿಂಗ ನಾಯ್‌್ಕ, ಮೂಡುಬಿದಿರೆ ಆಳ್ವಾಸ್‌ ಶಿಕ್ಣಣ ಸಂಸ್ಥೆಯ ಅಧ್ಯಕ್ಷ ಡಾ.ಎಂ. ಮೋಹನ್‌ ಆಳ್ವ, ಗುರ್ಮೆ ¶ೌಂಡೇಶನ್‌ ಅಧ್ಯಕ್ಷ ಗುರ್ಮೆ ಸುರೇಶ್‌ ಶೆಟ್ಟಿ, ಎಂಆರ್‌ಜಿ ಗ್ರೂಪ್‌ನ ನಿರ್ದೇಶಕ ಗೌರವ್‌ ಪಿ. ಶೆಟ್ಟಿಭಾಗವಹಿಸಲಿದ್ದಾರೆ ಎಂದವರು ತಿಳಿಸಿದರು.

ಹೋಟೆಲ್‌ ಉದ್ಯಮದ ಮೂಲಕ ಕನ್ನಡ ನಾಡಿನ ಕೀರ್ತಿ ಪಸರಿಸಿದ ಪ್ರಕಾಶ್ ಶೆಟ್ಟಿ!

ಗುರ್ಮೆ ¶ೌಂಡೇಶನ್‌ ಟ್ರಸ್ವ್‌ನ ಅಧ್ಯಕ್ಷ ಗುರ್ಮೆ ಸುರೇಶ್‌ ಶೆಟ್ಟಿ, ಬೆಂಗಳೂರು ಬಂಟರ ಸಂಘದ ಮಾಜಿ ಅಧ್ಯಕ್ಷ ಉಪೇಂದ್ರ ಶೆಟ್ಟಿಬೆಂಗಳೂರು ಇದ್ದರು.

ಸಮಾಜದ ಆರ್ಥಿಕ ಅಶಕ್ತರಿಗೆ ನೆರವಾಗಿ ಅವರಲ್ಲಿ ಆತ್ಮ ವಿಶ್ವಾಸ ಮೂಡಿಸಿ, ಅವರು ಮುಖ್ಯ ವಾಹಿನಿಯಲ್ಲಿ ಘನತೆಯ ಬದುಕು ಕಟ್ಟಿಕೊಳ್ಳ ಬೇಕೆಂಬುದು ಎಂಆರ್‌ಜಿ ಗ್ರೂಪ್‌ನ ಆಶಯವಾಗಿದೆ. ಕಷ್ಟದಲ್ಲಿರುವವರಿಗೆ ಕಿರು ಸಹಾಯ ಮಾಡಲು ಸಾಧ್ಯವಾ ಎನ್ನುವ ಆಲೋಚನೆಯ ಮೂರ್ತ ರೂಪವೇ ಈ ಯೋಜನೆ. ನಿಜಕ್ಕೂ ಆರ್ಥಿಕ ದುಸ್ಥಿತಿಯಲ್ಲಿದ್ದು, ಎಲ್ಲಿಂದಲಾದರೂ ಒಂದು ಸಣ್ಣ ಆಸರೆ ಒದಗಿದರೆ... ಎನ್ನುವ ನಿರೀಕ್ಷೆಯಲ್ಲಿರುವವರ ಪಾಲಿಗೆ ಭರವಸೆಯಾಗಿ ನಾವಿದ್ದೇವೆ

- ಕೆ. ಪ್ರಕಾಶ್‌ ಶೆಟ್ಟಿ

click me!