ಪವಿತ್ರ ಹಾಗೂ ಪಾವನ ತಿರ್ಥ ಕ್ಷೇತ್ರವಾಗಿರುವ ಶ್ರೀಕ್ಷೇತ್ರ ಗಾಣಗಾಪುರ ಮಠ

Published : Jul 26, 2018, 01:25 PM IST
ಪವಿತ್ರ ಹಾಗೂ ಪಾವನ ತಿರ್ಥ ಕ್ಷೇತ್ರವಾಗಿರುವ ಶ್ರೀಕ್ಷೇತ್ರ ಗಾಣಗಾಪುರ ಮಠ

ಸಾರಾಂಶ

ಆಷಾಢ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಯನ್ನು ಗುರು ಪೌರ್ಣಿಮಯೆಂದು ಆಚರಿಸುವ ಪರಂಪರೆ ನಮ್ಮ ದೇಶದಲ್ಲಿದೆ. ಗುರು ಪರಂಪರೆಯಲ್ಲಿ ದತ್ತ ಸಂಪ್ರದಾಯವು ಮಹಾನ್ ಸಂಪ್ರದಾಯವೆಂದು ಬಣ್ಣಿಸಲ್ಪಡುತ್ತದೆ. ಶ್ರೀಪಾದ ಶ್ರೀವಲ್ಲಭರು ಹಾಗೂ ಶ್ರೀಗುರು ನೃಸಿಂಹಸರಸ್ವತಿ ಸ್ವಾಮಿ ಮಹಾರಾಜರು ದತ್ತ ಸಂಪ್ರದಾಯದಲ್ಲಿನ ಸರ್ವಶ್ರೇಷ್ಠ ಮತ್ತು ವಂದನೀಯ ಅವತಾರಿಗಳಾಗಿದ್ದಾರೆ.

ಪ್ರಾಚೀನ ಕಾಲದಲ್ಲಿ ವಿದ್ಯಾರ್ಥಿಗಳು ಮತ್ತು ಬ್ರಹ್ಮಚಾರಿಗಳು ಆಶ್ರಮ ಇಲ್ಲದೆ ಗುರುಕುಲಗಳಲ್ಲಿ ವಿದ್ಯೆಯನ್ನುಕಲಿಯುತ್ತಿದ್ದರು. ವಿದ್ಯಾರ್ಥಿಗಳು ಈದಿವಸದಂದು ತಮ್ಮ ಗುರುವಿಗೆ ಪೂಜಿಸಿ ಗುರುದಕ್ಷಿಣೆಯನ್ನು ತಮ್ಮ ಶಕ್ತ್ಯಾನುಸಾರ ನೀಡುತ್ತಿದ್ದರು. ಜೀವನದಲ್ಲಿ ಮಾರ್ಗದರ್ಶನವನ್ನು ಮಾಡುವ ಗುರುವನ್ನು ಸ್ಮರಿಸುವ ಮತ್ತು ಪೂಜಿಸುವ ದಿನವೇ ಇದಾಗಿದೆ. ಈ ದಿವಸದಂದು ಭಕ್ತಾಧಿಗಳು ಹಾಗೂ ಶಿಷ್ಯರು ಗುರುಗಳ ಆಶೀರ್ವಾದವನ್ನು ಪಡೆಯಲು ಉಪವಾಸ ವೃತವನ್ನು ಆರಿಸುವರು. ನಮ್ಮ ಗುರುಗಳು ಸದಾಕಾಲ ನಮ್ಮ ಯೋಗಕ್ಷೇಮದ ಕಾಳಜಿಯನ್ನು ಮಾಡುವರು.

ಎಂದೆಂದಿಗೂ ಮುಗಿಯದ ಅವರ ಋಣವನ್ನು ತೀರಿಸುವುದಾರೂ ಹೇಗೆ? ಇವರಿಗೆ ನಾವು ಕೊಡುವುದಾದರೂ ಏನು? ಅವರ ಋಣವನ್ನು ಅಲ್ಪವೇ ಆಗಲಿ ಅವರ ನೆನಪಿಗಾಗಿ ಪ್ರತೀವರ್ಷ ಆಷಾಢ ಮಾಸದ ಹುಣ್ಣಿಮೆಯನ್ನು ಗುರು ಪೌರ್ಣಿಮೆ ಎಂದು ಆರಿ ಸುತ್ತಾರೆ. ನಮಗೆ ಜ್ಞಾನವನ್ನು ಕೊಡುವ ಮತ್ತು ಸುಸಂಸ್ಕೃತರನ್ನಾಗಿ ಮಾಡುವ ಗುರುವಿಗೆ ಕೃತಜ್ಞತೆಯಿಂದ ಸ್ಮರಿಸುವುದು ನಮ್ಮ ಕರ್ತವ್ಯವಾಗಿದೆ. ಅವರು ಮಾಡಿಸ ಮಹಾನ್ ಉಪಕಾರ ನೆನಪಿಸಿ ಜೀವನದಲ್ಲಿ ಮಾರ್ಗ ಸಫಲತೆಯಿಂದ ಗತಿಮಾನವಾಗಿ ಮಾಡುವ ಸಲುವಾಗಿ ನಮ್ಮ ಸಂಸ್ಕೃತಿಯು ಗುರು ಪೂಜನದ ಪರಂಪರೆಯ ನಿರ್ಮಾಣಮಾಡಿದೆ. ಮಾನವನ ಜೀವನ ಮಾರ್ಗದರ್ಶನವಿಲ್ಲದೆ ವಿಕಾಸವಾಗುವುದಿಲ್ಲ. ಈ ಮಾರ್ಗದರ್ಶನ ತಾಯಿ, ತಂದೆ, ಶಿಕ್ಷಕ,ಆಚಾರ್ಯ ಹಾಗೂಸಂತ-ಸಜ್ಜನ ರಿಂದ ಪಡೆಯುತ್ತಿರುವನಾದರುದರಿಂದ ಇವರೆಲ್ಲರ ಸ್ಮರಣೆ, ಪೂಜನೆ ಮಾಡಿ ಕೃತಜ್ಞತೆಯನ್ನು ಪ್ರಕಟಿಸುವುದು. ಈ ದಿವಸದ ಆಚರಣೆಯಿಂದಲೇ, ನಮ್ಮ ಜೀವನ ಸರ್ವಾರ್ಥದಿಂದ ಉಪಯುಕ್ತವಾಗಿಸಲು ಗುರುಗಳು ಮಾರ್ಗದರ್ಶನ ಮಾಡುವರು. ನಮ್ಮ ಸಂಕಟಗಳನ್ನು ನಿವಾರಿಸಿ ಭಕ್ತಿಯ ಜ್ಞಾನವನ್ನು ಕೊಡುವ ಶಕ್ತಿಯ ಗುರುಗಳಲ್ಲಿರುತ್ತದೆ.

ಈ ಪೌರ್ಣಿಮೆಯನ್ನು ವ್ಯಾಸ-ಪೌರ್ಣಿಮೆ ಯೆಂದೂ ಕರೆಯುತ್ತಾರೆ. ಜಗದ್ ವೃಂದ್ಯ ಹಾಗೂ ಜಗದ್ಗುರುಗಳಾದ ವೇದ ಮಹರ್ಷಿ ವ್ಯಾಸಋಷಿಗಳ ಪೂಜೆಯನ್ನು ಈ ದಿನವೇ ನೆರವೇರಿಸುತ್ತಾರೆ. ದತ್ತಾವಿಚಾರಿಗಳಾದ ಶ್ರೀಗುರು ನೃಸಿಂಹ ಸರಸ್ವತಿ ಸ್ವಾಮಿ ಮಹಾರಾಜರು ನೆಲೆಸಿರುವ ಭೀಮಾಮತ್ತು ಅಮರಜಾ ನದಿಗಳ ಸಂಗಮವಾಗಿರುವ ಪವಿತ್ರ ಹಾಗೂ ಪಾವನ ತಿರ್ಥ ಕ್ಷೇತ್ರವಾಗಿರುವ ಶ್ರೀಕ್ಷೇತ್ರ ಗಾಣಗಾಪುರ (ಗುಲ್ಬರ್ಗಾ ಜಿಲ್ಲೆ) ನಿರ್ಗುಣ ಮಠದಲ್ಲಿ ಗುರುಪೌರ್ಣಿಮೆಯಂದು ಬೆಳಗ್ಗೆ ೧೧ ಗಂಟೆಗೆ ವ್ಯಾಸಪೂಜೆ ಸಡಗರದಿಂದ ಹಾಗೂ ಭೈವಯುತವಾಗಿ ಅಸಂಖ್ಯ ಭಕ್ತರ ಸಮ್ಮುಖದಲ್ಲಿ ಜರುಗುತ್ತದೆ. ಈ ಸಂದರ್ಭದಲ್ಲಿ ಉಪಸ್ಥಿತ ಭಕ್ತ ವೃಂದದವರೆಲ್ಲರೂ ಶ್ರೀಗುರುಗಳ ಹಾಗೂ ನಿರ್ಗುಣ ಪಾದಗಳ ದರ್ಶನವನ್ನು ಪಡೆದು ಕೃತಾರ್ಥರಾಗುತ್ತಾರೆ.

 

PREV
click me!

Recommended Stories

ನಿಮ್ಮ ಜನ್ಮ ದಿನಾಂಕಕ್ಕೆ ಭಾಗ್ಯ ತರುವ ಲಕ್ಷ್ಮೀ ಮಂತ್ರ ಇಲ್ಲಿದೆ ನೋಡಿ!
ಶನಿಯ ಮಾಯಾಜಾಲದಿಂದ 2026ರಲ್ಲಿ ಮೂರು ರಾಶಿಗಳ ಬದುಕಿನ ಕಷ್ಟಗಳು ಮಾಯ, ಆದಾಯ ಡಬಲ್