ಯಾವ ರಾಶಿಯವರಿಂದು ಎಚ್ಚರ ವಹಿಸಬೇಕು..?

Published : Jul 05, 2018, 07:05 AM IST
ಯಾವ ರಾಶಿಯವರಿಂದು ಎಚ್ಚರ ವಹಿಸಬೇಕು..?

ಸಾರಾಂಶ

ಯಾವ ರಾಶಿಯವರಿಂದು ಎಚ್ಚರ ವಹಿಸಬೇಕು..?

ಆತ್ಮೀಯರೇ, ಇಂದಿನ ಗ್ರಹಸ್ಥಿತಿಯನ್ನು ರಾಶಿ ಚಕ್ರದಲ್ಲಿ ಗಮನಿಸಿಕೊಳ್ಳಬಹುದು. ಮಿಥುನ ರಾಶಿಯಲ್ಲಿ ರವಿ ಇದ್ದು, ಕರ್ಕಟಕ ರಾಶಿಯಲ್ಲಿ ಬುಧ, ರಾಹುಗಳಿದ್ದು, ಶುಕ್ರನು ಸಿಂಹರಾಶಿಲ್ಲಿದ್ದು , ತುಲಾ ರಾಶಿಯಲ್ಲಿ ಗುರು ಇದ್ದು, ಇಂದೂ ಕೂಡ ಧನಸ್ಸು ರಾಶಿಯಲ್ಲಿ  ಶನಿಯರು ಹಾಗೂ  ಮಕರ ರಾಶಿಯಲ್ಲಿ ಕುಜ-ಕೇತುಗಳ ಯುತಿ ಇದೆ. ಚಂದ್ರನು ಇಂದು ಮೀನ ರಾಶಿಯಲ್ಲಿದ್ದಾನೆ. ಗ್ರಹಗಳು ಈ ಸ್ಥಿತಿಯಲ್ಲಿರುವಾಗ ನಿಮ್ಮ ರಾಶಿಯ ಮೇಲೆ ಅವುಗಳು  ಹೇಗೆ ಪರಿಣಾಮ ಬೀರುತ್ತವೆ ಹಾಗೂ ಯಾವ ಫಲವನ್ನ ಕೊಡುತ್ತವೆ ಎಂಬುದನ್ನು ನೋಡೋಣ.  

ಮೇಷ ರಾಶಿ : ಇಂದು ನಿಮ್ಮ ರಾಶಿಯಿಂದ ವ್ಯಯ ಸ್ಥಾನದಲ್ಲಿ ಚಂದ್ರನಿದ್ದಾನೆ. ಸ್ವಲ್ಪ ಸುಖ ನಾಶ, ಮಾನಸಿಕ ಹಿಂಸೆ, ವಾಹನದಲ್ಲಿ ಸಂಚರಿಸುವಾಗ ಸ್ವಲ್ಪ ಎಡವಟ್ಟು ಸಂಭವಿಸಬಹುದು ನಿಧಾನಗತಿಯಲ್ಲಿ ಹೋಗಿ. ಜಾಗರೂಕವಾಗಿರಿ.  

ದೋಷಪರಿಹಾರ : ಇಂದು ಅನ್ನಪೂರ್ಣೇಶ್ವರಿ ದರ್ಶನ ಹಾಗೂ ತಾಯಿಗೆ 5 ಲೋಟ ಹಾಲು ಸಮರ್ಪಿಸಿ.

ವೃಷಭ : ಇಂದು ಸ್ತ್ರೀಯರಿಂದ ಲಾಭ, ಸ್ತ್ರೀಯರಿಗೂ ಲಾಭ, ಆದರೆ ಓರ್ವ ವ್ಯಕ್ತಿ ನಿಮ್ಮ ಹಾದಿತಪ್ಪಿಸುವ ಸಾಧ್ಯತೆ ಇದೆ. ಎಚ್ಚರದಿಂದ ಇರಬೇಕು. ಮುಖ್ಯವಾಗಿ ಧನ ಸ್ಥಾನದಲ್ಲಿ ರವಿ ಯಿದ್ದು ನಿಮ್ಮ ತಂದೆಯಿಂದ ಹಣ ಬರಲಿದೆ.  

ದೋಷ ಪರಿಹಾರ : ನಿಮ್ಮ ಮನೆ ದೇವರಿಗೆ ತುಪ್ಪದ ದೀಪ ಹಚ್ಚಿ.

ಮಿಥುನ : ನಿಮಗೆ ಹಿರಿಯರಿಂದ ಸಹಾಯ. ಕಚೇರಿಗೆ ಎಚ್ಚರವಾಗಿರಿ. ಇಂದು ಉದ್ಯೋಗ ಸ್ಥಾನದಲ್ಲಿ ಸ್ತ್ರೀಯರಿಂದ ಸಹಾಯ ಸಿಗಲಿದೆ, ಸಂಸಾರದಲ್ಲಿ ಸ್ವಲ್ಪ ಭಿನ್ನಾಭಿಪ್ರಾಯವೂ ಬರಲಿದೆ. ಮುಖ್ಯವಾಗಿ  ನಿಮ್ಮ ಸಹೋದರಿಯರಲ್ಲಿ ಜಗಳ ಸಂಭವಿಸುವ ಸಾಧ್ಯತೆ ಇದೆ. ಸ್ವಲ್ಪ ಮಾತು ಹಿಡಿತದಲ್ಲಿರಲಿ. 

ದೋಷ ಪರಿಹಾರ : ಓಂ ಭವಾಯ ನಮ: ಮಂತ್ರವನ್ನು 12 ಬಾರಿ ಪಠಿಸಿ. 

ಕಟಕ : ಇಂದು ನಿಮ್ಮ ರಾಶಿಯ ಅಧಿಪತಿ ಭಾಗ್ಯ ಸ್ಥಾನದಲ್ಲಿರುವುದರಿಂದ ಭಾಗ್ಯ ವೃದ್ಧಿ, ಉಡುಗೊರೆ ಸಿಗಲಿದೆ, ಮಂಗಳಕಾರ್ಯಗಳು ನೆರವೇರಲಿವೆ. ಗುರುವಿನ ಅನುಕೂಲವೂ ಇದೆ. ಉತ್ತಮ ದಿನ
  
ದೋಷ ಪರಿಹಾರ : ಕೂತಲ್ಲೇ ನಾಗ ಪ್ರಾರ್ಥನೆ ಮಾಡಿದರೂ ಸಾಕು.  

ಸಿಂಹ : ಈದಿನ ನಿಮ್ಮ ಸಂಗಾತಿ ಅಥವಾ ನಿಮ್ಮ ಮನೆ ಹೆಣ್ಣುಮಕ್ಕಳು ನಿಮ್ಮೊಂದಿಗೆ ವಾಗ್ವಾದ ಮಾಡಬಹುದು. ಧನ ನಷ್ಟವಾಗುವ ಸಾಧ್ಯತೆ ಇದೆ. ಬರುವ ಲಾಭವೂ ಕೈತಪ್ಪಿಹೋಗಲಿದೆ.

ದೋಷ ಪರಿಹಾರ : ಶಿವ ಪ್ರಾರ್ಥನೆಯೇ ನಿಮ್ಮ ದಿನವನ್ನು ಶಾಂತಗೊಳಿಸುತ್ತದೆ.

ಕನ್ಯಾ : ಆತ್ಮೀಯರೇ ನಿಮ್ಮ ಕುಟುಂಬದವರಿಂದ ಸ್ವಲ್ಪ ಕಿರಿಕಿರಿ ಅನುಭವಿಸಬೇಕಾಗುತ್ತದೆ. ನಿಮ್ಮ ಮಾತೇ ನಿಮಗೆ ತೊಂದರೆ ಕೊಡುತ್ತದೆ. ಮಕ್ಕಳಿಂದ ಸ್ವಲ್ಪ ಕಲಹ ಸಾಧ್ಯತೆ. ಏನಪ್ಪಾ ಬರೀ ಸಮಸ್ಯೆಯೇ ಇದೆ ಅಂದುಕೊಳ್ಳಬೇಡಿ. ಧನಾಗಮನವೂ ಇದೆ.
  
ದೋಷ ಪರಿಹಾರ : ಗುರು ಪ್ರಾರ್ಥನೆ ಮಾಡಿ. 

ತುಲಾ :  ನಿಮ್ಮ ಜೀವನದಲ್ಲಿ ಒಂದು ಹೊಸ ಪ್ರಯತ್ನ, ಸ್ವಲ್ಪ ಶ್ರಮವೂ ಇದೆ. ಇಂದು ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಯಕಾಣಲಿದ್ದೀರಿ. ಸಹೋದರರ ಸಹಾಯ ನಿಮ್ಮ ದಿನವನ್ನು ಉತ್ತಮಗೊಳಿಸಲಿದೆ.  

ದೋಷ ಪರಿಹಾರ : ಅರಳಿ ವೃಕ್ಷಕ್ಕೆ 3 ಪ್ರದಕ್ಷಿಣೆ ಹಾಕಿ. 

ವೃಶ್ಚಿಕ : ಪ್ರಿಯರೇ ನಿಮ್ಮ ರಾಶಿಯವರಿಗೆ ಸ್ವಲ್ಪ ಧನ ವ್ಯಯವಾಗುವ ಸಾಧ್ಯತೆ ಇದೆ. ಕುಟುಂಬದವರಿಗಾಗಿ ಹಣ ವ್ಯಯ. ಹೆಣ್ಣುಮಕ್ಕಳಿಂದ ಸಹಾಯವಾಗಲಿದೆ, ತಂದೆಯಲ್ಲಿ ಸ್ವಲ್ಪ ಭಿನ್ನಾಭಿಪ್ರಾಯ ಬರಲಿದೆ. ಸ್ವಲ್ಪ ಸಮಾಧಾನವಿರಲಿ. 

ದೋಷ ಪರಿಹಾರ : ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ  

ಧನಸ್ಸು : ಆತ್ಮೀಯರೇ ನಿಮ್ಮ ಸಂಸಾರದಲ್ಲಿ ಭಿನ್ನಾಭಿಪ್ರಾಯ ಮೂಡಲಿದೆ. ಪೋಲೀಸ್ ಅಧಿಕಾರಿಗಳಿಂದ ಸಹಾಯ ದೊರೆಯಲಿದೆ. ಅಷ್ಟೇ ಅಲ್ಲ ನಿಮ್ಮ  ನಿಮ್ಮ ಸನಿಹದ ಸ್ತ್ರೀಯರಿಂದ ಆತ್ಮೀಯರಿಂದ ಉಡುಗೊರೆ ಸಿಗಲಿದೆ. ಮುಖ್ಯವಾಗಿ ಅಕ್ಕಪಕ್ಕದವರು ಸ್ವಲ್ಪ ಜಗಳಕ್ಕೆ ಬರಲಿದ್ದಾರೆ ಎಚ್ಚರವಾಗಿರಿ.

ದೋಷ ಪರಿಹಾರ : ಶನಿ ದೇವರಿಗೆ ಎಳ್ಳುದೀಪ ಹಚ್ಚಿ ಇಲ್ಲಾಂದ್ರೆ ನಿಮ್ಮ ಶರೀರ ತೂಕದ ಎಳ್ಳನ್ನು ಸಮರ್ಪಿಸಿದರೂ ಉತ್ತಮ.

ಮಕರ : ಪ್ರಿಯರೇ ಇಂದು ನಿಮ್ಮ ಪಾಲಿಗೆ ಸ್ವಲ್ಪ ಅರ್ಧ ಲಾಭ ಅರ್ಧ ನಷ್ಟದ ದಿನ. ಸುಖವೂ ಇದೆ ದು:ಖವೂ ಇದೆ. ಮೈ ತುಂಬ ಶ್ರಮ. ಆಯಾಸವೂ ಆಗಲಿದೆ. ತಮ್ಮಂದಿರಿಂದ ಸಹಾಯ. 
  
ದೋಷ ಪರಿಹಾರ : ನಿಮ್ಮ ಮನೆ ದೇವರಿಗೆ 5 ನಮಸ್ಕಾರ ಮಾಡಿ. 

ಕುಂಭ :   ನಿಮಗೆ ಇಂದು ಒಂದು ಹೊಸ ಪರೀಕ್ಷೆಯ ದಿನ. ನಿಮ್ಮ ಆತ್ಮೀಯರು ಸಹಾಯ ಮಾಡಲಿದ್ದಾರೆ. ಕಚೇರಿಯಲ್ಲಿ ಸ್ವಲ್ಪ ಕಾರ್ಯ ವ್ಯತ್ಯಯ. ಇತರರ ಸಹಾಯ ಪಡೆಯಬೇಕಾದೀತು. ಓರ್ವ ಸ್ತ್ರೀ ನಿಮಗೆ ಧನ ಸಹಾಯ ಮಾಡುವರು. ಸ್ತ್ರೀಯರಿಗೆ ಉತ್ತಮ ದಿನ.

ದೋಷ ಪರಿಹಾರ : ಧರ್ಮಸ್ಥಳ ಮಂಜುನಾಥ ಸ್ಮರಣೆ ನಿಮ್ಮ ದಿನವನ್ನು ಉತ್ತಮಗೊಳಿಸಲಿದೆ. ಇಲ್ಲ ಓಂ ವಿಶ್ವೇಶ್ವರಾಯ ನಮ: ಎಂಬ ಮಂತ್ರವನ್ನು 11 ಬಾರಿ ಪಠಿಸಿ.
  
ಮೀನ :  ಇಂದು ಸುಖ ಭೋಜನ, ಉತ್ತಮ ಕಾರ್ಯಗಳು ಜರುಗಲಿವೆ. ಮಹಾ ಗುರುಗಳ ಭೇಟಿ ಮಾಡುವ ದಿನ, ಉತ್ತಮ ದಿನವಾಗಿರಲಿದೆ. ಚಿಂತೆ ಬೇಡ. 
  
ದೋಷ ಪರಿಹಾರ : ಹಳದಿ ಬಟ್ಟೆಯನ್ನು ಧರಿಸಿ. ನಿಮ್ಮ ಗುರುವಿಗೆ ನಮಸ್ಕಾರ ಮಾಡಿ

ಗೀತಾಸುತ.

PREV
click me!

Recommended Stories

ನಿಮ್ಮ ಆತ್ಮಕ್ಕೆ ಹಿಂದೊಂದು ಜನ್ಮ ಇತ್ತಾ? ತಿಳಿಯೋದು ಹೇಗೆ?
ನಿಷೇಧದ ನಡುವೆಯೂ ದುಗ್ಗಮ್ಮನ ಜಾತ್ರೆಲಿ ಕೋಣ ಬಲಿ! ದೌಡಾಯಿಸಿ ಬಂದ ಪೊಲೀಸರಿಗೆ ಸಿಕ್ಕಿದ್ದು ಕೇವಲ ರಕ್ತದ ಕಲೆ ಅಷ್ಟೇ