ನಿಮಗಿಂದು ಲಾಭ ಗಳಿಕೆಯ ದಿನ : ಇನ್ನುಳಿದ ರಾಶಿ..?

Published : Dec 14, 2018, 06:47 AM IST
ನಿಮಗಿಂದು ಲಾಭ ಗಳಿಕೆಯ ದಿನ : ಇನ್ನುಳಿದ ರಾಶಿ..?

ಸಾರಾಂಶ

ನಿಮಗಿಂದು ಲಾಭ ಗಳಿಕೆಯ ದಿನ : ಇನ್ನುಳಿದ ರಾಶಿ..?

ನಿಮಗಿಂದು ಲಾಭ ಗಳಿಕೆಯ ದಿನ : ಇನ್ನುಳಿದ ರಾಶಿ..?

ಮೇಷ ರಾಶಿ : ಇಂದು ನಿಮಗೆ ಮಕ್ಕಳಿಂದ ಅದರಲ್ಲೂ ಹೆಣ್ಣುಮಕ್ಕಳಿಂದ ಕಿರಿಕಿರಿ. ಶಾಲೆಯಲ್ಲಿ ನಿಮಗೆ ಬೇಸರವಾಗುವಂಥ ಸಮಸ್ಯೆ ಮಾಡಿಕೊಳ್ಳುತ್ತಾರೆ. ಹಿರಿಯ ಮಕ್ಕಳಾದರೆ ಸಂತಾನ ಸಮಸ್ಯೆಯಿಂದ ಬಳಲುತ್ತಾರೆ. ಆರೋಗ್ಯದಲ್ಲಿ ಸುಧಾರಣೆ ಕಾಣುತ್ತೀರಿ. ಮಿತ್ರರಿಗಾಗಿ ಧನವ್ಯಯ.

ದೋಷಪರಿಹಾರ : ಆದಿತ್ಯ ಸ್ತೋತ್ರ ಪಠಿಸಿ

ವೃಷಭ : ವ್ಯಯಾಧಿಪತಿ ಕುಜ ಚಂದ್ರ ಸಹಿತನಾಗಿದ್ದಾನೆ. ಸ್ವಲ್ಪ ಮಾನಸಿಕ ಸಮಸ್ಯೆ ಕಾಡುತ್ತದೆ. ಅಂದುಕೊಂಡ ಕೆಲಸ ಆಗಲಿಲ್ಲವಲ್ಲಾ ಎಂಬ ಬೇಸರ ನಿಮ್ಮನ್ನು ಕಾಡುತ್ತದೆ. ಸಹೋದರರಿಗೆ ಅನುಕೂಲವಾತಾವರಣ, ಸಾಧಾರಣದಿನವಾಗಿರಲಿದೆ.

ದೋಷ ಪರಿಹಾರ : ಅವರೇ ಕಾಳು ದಾನ ಮಾಡಿ. 

ಮಿಥುನ : ದಾಂಪತ್ಯ ಹೊಂದಾಣಿಕೆಯಲ್ಲಿ  ಸಾಮರಸ್ಯ ಕಷ್ಟ, ರೋಗ ನಿವಾರಣೆ, ಉದ್ಯೋಗ ಸ್ಥಳದಲ್ಲಿ  ಬೆಂಕಿ ಅವಘಡ, ತಂದೆಯಿಂದ ಸಹಾಯ, ಮನೋರೋಗ ನಿವಾರಣೆ, ವಾಹನದಲ್ಲಿ ಸ್ವಲ್ಪ ತೊಂದರೆ ಸಾಧ್ಯತೆ.

ದೋಷ ಪರಿಹಾರ : ಶ್ರೀರಾಮ ಧ್ಯಾನ ಮಾಡಿ

ಕಟಕ :  ಧನಲಾಭ, ಸ್ತ್ರೀಯರಿಗಾಗಿ ಸ್ವಲ್ಪ ಧನ ವ್ಯಯ ಮಾಡಬೇಕಾದ ಪ್ರಸಂಗವೂ ಎದುರಾಗುತ್ತದೆ. ನಿಮ್ಮ ಬುದ್ಧಿಶಕ್ತಿಯಿಂದ ನಿಮ್ಮ ನಿಮ್ಮ ಯೋಜನೆ ಸಾಕಾರಗೊಳ್ಳುತ್ತದೆ. ಸ್ವಲ್ಪ ಹೊಟ್ಟೆ ಭಾಗ ಅಥವಾ ಕಿಬ್ಬೊಟ್ಟೆ ಭಾಗದಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಆಹಾರ ವ್ಯತ್ಯಯವಾಗುವ ಸಾಧ್ಯತೆ ಇದೆ. 
  
ದೋಷ ಪರಿಹಾರ : ಲಕ್ಷ್ಮೀ ದೇವಸ್ಥಾನಕ್ಕೆ ಹಾಲು ಸಮರ್ಪಣೆ ಮಾಡಿ

ಸಿಂಹ : ಮಕ್ಕಳಿಂದ ಸ್ವಲ್ಪ ಮಟ್ಟಿಗೆ  ಅಸಮಾಧಾನ, ಪ್ರಯಾಣ ಬೆಳೆಸುವ ಸಾಧ್ಯತೆ ಇದೆ, ಕಾರ್ಯ ಸ್ಥಳದಲ್ಲಿ  ಉತ್ತಮರ ಸಹಕಾರ, ದಾಂಪತ್ಯದಲ್ಲಿ ಕಲಹ ಸಾಧ್ಯತೆ, ಮನೋವ್ಯಾಧಿ, ಅಸಮಧಾನ.

ದೋಷ ಪರಿಹಾರ : ಲಿಂಗಾಷ್ಟಕ ಹೇಳಿಕೊಳ್ಳಿ.

ಕನ್ಯಾ : ಇಂದು ನಿಮ್ಮ ಪಾಲಿಗೆ ತಂದೆಯಿಂದ ಸಹಕಾರ. ದೊಡ್ಡ ಪ್ರಮಾಣದಲ್ಲಿ ಧನ ವ್ಯಯವಾಗುವ ಸಾಧ್ಯತೆ ಇದೆ. ವಾಹನ ಜಖಂ ಆಗಲಿದೆ. ಪ್ರಯಾಣ ಮಾಡುವಾಗ ಎಚ್ಚರ ಇರಲಿ. ಪ್ರೀತಿ ಪಾತ್ರರೊಂದಿಗೆ ಮಾತು ಕಥೆ.
  
ದೋಷ ಪರಿಹಾರ : ತುಳಸಿಗೆ ನಮಸ್ಕಾರ ಮಾಡಿ

ತುಲಾ :  ಇಂದು ನಿಮ್ಮ ಉದ್ಯೋಗ ಸ್ಥಳದಲ್ಲಿ ಉತ್ತಮ ಸಹಕಾರ, ಲಾಭದ ದಿನವೂ ಹೌದು. ಆದರೆ ಓರ್ವ ಸ್ತ್ರೀಯಿಂದ ಮನಸ್ತಾಪ ಸಾಧ್ಯತೆ. ಹಳೆ ದುಡ್ಡು ಮರಳಿಬರಲಿದೆ, ಮಾತಿನಿಂದ ಪ್ರಶಂಸೆ.

ದೋಷ ಪರಿಹಾರ : ಗಣಪತಿ ದರ್ಶನ ಮಾಡಿ

ವೃಶ್ಚಿಕ : ಇಂದು ಉದ್ಯೋಗ ಲಾಭ, ಹಿರಿಯರಿಂದ ಉಡುಗೊರೆ ಸಿಗಲಿದೆ. ಆದರೆ ನಿಮ್ಮ ಹಣ ಕಳುವಾಗುವ ಸಾಧ್ಯತೆ ಇದೆ. ಎಚ್ಚರವಾಗಿರಿ. ಅಣ್ಣ-ತಮ್ಮಂದಿರು ಸಹಾಯ ಮಾಡುತ್ತಾರೆ. ವಾಹನದಲ್ಲಿ ತೊಡಕು.

ದೋಷ ಪರಿಹಾರ : ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ 

ಧನಸ್ಸು : ಇಂದು ನಿಮ್ಮ ಶರೀರದಲ್ಲಿ ಸ್ವಲ್ಪ ಆಯಾಸ. ಆದರೆ ವ್ಯಾಪಾರದಲ್ಲಿ ಲಾಭವನ್ನು ಪಡೆಯಲಿದ್ದೀರಿ. ಆರೋಗ್ಯ ಸಮಸ್ಯೆಯಿಂದಾಗಿ ನಿಮ್ಮಲ್ಲಿ ಆಲಸ್ಯ ಮೈಗೂಡಿಕೊಳ್ಳಲಿದೆ. ದಾಂಪತ್ಯದಲ್ಲಿ ಮಾತಿನ ಸಮರ.

ದೋಷ ಪರಿಹಾರ : ಗೋವಿಂದ ನಾಮಸ್ಮರಣೆ ಮಾಡಿ

ಮಕರ :  ಇಂದು ತಂದೆ ನಿಮ್ಮ ಸಹಾಯಕ್ಕೆ ಬರುತ್ತಾರೆ. ಸ್ತ್ರೀಯರ ಆರೋಗ್ಯದಲ್ಲಿ ಸ್ವಲ್ಪ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಹೆಂಡತಿಯಿಂದ ಸಹಕಾರ. ಮನೆಯಲ್ಲಿ ಸ್ವಲ್ಪ  ಗೊಂದಲ ವಾತಾವರಣ. ತಾಳ್ಮೆ ಕಳೆದುಕೊಳ್ಳುವುದು ಬೇಡ.
  
ದೋಷ ಪರಿಹಾರ : ಕೃಷ್ಣ ಪ್ರಾರ್ಥನೆ ಮಾಡಿ

ಕುಂಭ : ವ್ಯಾಪಾರಿಗಳಿಗೆ ಶುಭಲಾಭ, ಸುಖ ಬೋಜನ ಪ್ರಾಪ್ತಿ, ಆರೋಗ್ಯದಲ್ಲೂ ಕೊಂಚ ವ್ಯತ್ಯಯ, ನೆಗಡಿ ಕೆಮ್ಮು ಕಾಡಲಿದೆ, ಸ್ತ್ರೀಯರಿಂದ ಭಾಗ್ಯ ವೃದ್ಧಿ, ಹೊಟ್ಟೆ ಭಾಗದಲ್ಲಿ ನೋವು ಕಾಣುವ ಸಾಧ್ಯತೆಯೂ ಇದೆ.  

ದೋಷ ಪರಿಹಾರ : ಕುಕ್ಕೆ ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ
  
ಮೀನ : ಸ್ತ್ರೀಯರಿಗೆ ಆರೋಗ್ಯ ವೃದ್ಧಿ, ಧನ್ಯ ವ್ಯಯ, ಉದ್ಯೋಗದಲ್ಲಿ ಹಿರಿಯರಿಂದ ಕಿರಿಕಿರಿ, ಹೊಟ್ಟೆ ಸಂಬಂಧಿ ಬಾಧೆ ಕಾಡಲಿದೆ, ಸೌಭಾಗ್ಯ ವೃದ್ಧಿಯೋಗ, ವಿದ್ಯಾ ಸಂಪತ್ತು ಪ್ರಾಪ್ತವಾಗಲಿದೆ, ಗುರು ದರ್ಶನ   
  
ದೋಷ ಪರಿಹಾರ : ಮನೆ ದೇವರಿಗೆ ತುಪ್ಪದ ದೀಪ ಹಚ್ಚಿ 

ವಾಞ್ಮಯೀ.

PREV
click me!

Recommended Stories

ನಿಮ್ಮ ಆತ್ಮಕ್ಕೆ ಹಿಂದೊಂದು ಜನ್ಮ ಇತ್ತಾ? ತಿಳಿಯೋದು ಹೇಗೆ?
ನಿಷೇಧದ ನಡುವೆಯೂ ದುಗ್ಗಮ್ಮನ ಜಾತ್ರೆಲಿ ಕೋಣ ಬಲಿ! ದೌಡಾಯಿಸಿ ಬಂದ ಪೊಲೀಸರಿಗೆ ಸಿಕ್ಕಿದ್ದು ಕೇವಲ ರಕ್ತದ ಕಲೆ ಅಷ್ಟೇ