ಕಟಕ ರಾಶಿಯವರ ಮನಸ್ಸಿಂದು ತಲ್ಲಣಗೊಳ್ಳುವ ಸಾಧ್ಯತೆ ಇದೆ, ಉಳಿದ ರಾಶಿಯವರ ದಿನ ಹೇಗಿರಲಿದೆ?

First Published Jun 22, 2018, 7:40 PM IST
Highlights

ಗ್ರಹ ಗತಿಗಳು ಬದಲಾದವರೆ ರಾಶಿ ನಕ್ಷತ್ರಗಳ ಮೇಲೂ ಪರಿಣಾಮ ಬೀಳೋದು ಸಹಜ. ಯಾವ ಗ್ರಹ, ಯಾವ ಮನೆಯಲ್ಲಿದೆ? ಯಾವ ರಾಶಿ ಮೇಲೆ ಹೇಗೆ ಪರಿಣಾಮ ಬೀರುತ್ತಾನೆ. ನಿಮ್ಮ ಜಾತಕ ನಿಮ್ಮ ಕೈಯಲ್ಲಿ. ನಿಮ್ಮ ಭವಿಷ್ಯ, ನಿಮ್ಮ ಕೈಯಲ್ಲಿ...

23-06-18 - ಶನಿವಾರ

ಶ್ರೀ ವಿಲಂಬಿ ನಾಮ ಸಂವತ್ಸರ

ಉತ್ತರಾಯಣ

ಗ್ರೀಷ್ಮ ಋತು

ನಿಜ ಜ್ಯೇಷ್ಠ ಮಾಸ

ಶುಕ್ಲ ಪಕ್ಷ

ಏಕಾದಶಿ ತಿಥಿ

ಸ್ವಾತಿ ನಕ್ಷತ್ರ

ಮೇಷ ರಾಶಿ: ಇಂದು ನಿಮ್ಮ ಪಾಲಿಗೆ ಅಸಾಧಾರಣ ದಿನ. ಶುಭ ಫಲಗಳು ನಿಮ್ಮ ಪಾಲಿಗಿವೆ. ನಿಮ್ಮ ರಾಶಿಯಿಂದ ಕೇಂದ್ರದಲ್ಲಿ ಗುರುಚಂದ್ರರು ಇರುವುದರಿಂದ ಉತ್ತಮ ಫಲಗಳನ್ನು ಅನುಭವಿಸಲಿದ್ದೀರಿ. ಶನಿವಾರ ಶುಭದಾಯಕವಾಗಿದೆ. 
ದೋಷ ಪರಿಹಾರ - ನಿಮ್ಮ ಇಷ್ಟ ದೇವರನ್ನು ನೆನೆಯಿರಿ. 

ವೃಷಭ: ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಯ, ನೀವು ಅಂದುಕೊಂಡ ಗುರಿ ತಲುಪುವಲ್ಲಿ ಹಿನ್ನಡೆಯಾಗಲಿದೆ. ಅಪೇಕ್ಷೆಗಳು ಅಧಿಕವಾಗಿದ್ದು ಫಲ ಕಡಿಮೆ. ಹಳೆಯ ಬಾಕಿ ಬರಲಿದೆ.
ದೋಷ ಪರಿಹಾರ : ಶಂ ಶನೈಶ್ಚರಾಯ ನಮ: ಮಂತ್ರವನ್ನು 7 ಬಾರಿ ಹೇಳಿಕೊಳ್ಳಿ 

ಮಿಥುನ: ಇಂದು ಬೆಳಗ್ಗೆ ಎದ್ದು ಶುಭ್ರವಾದ ನಂತರ ಸ್ವಲ್ಪ ಹೆಸರುಕಾಳನ್ನು ಸೇವಿಸಿ. ಅಥವಾ ಹೆಸರುಕಾಳಿನ ಪಲ್ಯ ಮಾಡಿಕೊಂಡು ತಿನ್ನಿ. ಅಷ್ಟೆ ಅಲ್ಲ ಹೆಸರು ಕಾಳು ದಾನ ಮಾಡಿ ಬನ್ನಿ. ನಿಮ್ಮ ದಿನ ಸುಗಮವಾಗಿರುತ್ತದೆ.
ದೋಷ ಪರಿಹಾರ : ಓಂ ನಮೋ ನಾರಾಯಣಾಯ ಮಂತ್ರವನ್ನು 8 ಬಾರಿ ಸ್ಮರಿಸಿ.

ಕಟಕ: ಇಂದು ನಿಮ್ಮ ಮನಸ್ಸು ತಲ್ಲಣಗೊಳ್ಳುವ ಸಾಧ್ಯತೆ ಇದೆ. ನಿಮ್ಮ ರಾಶಿಯ ಅಧಿಪತಿಯಾದ ಚಂದ್ರ ಶುಕ್ರನ ಮನೆಯಲ್ಲಿದ್ದು, ಶುಕ್ರ ಚಂದ್ರನ ಮನೆಯಲ್ಲಿದ್ದು ಒಂದು ಪರಿವರ್ತನ ಯೋಗವಿದೆ. ಆದ್ದರಿಂದ ನಿಮ್ಮ ಹುಷಾರಿನಲ್ಲಿ ನೀವಿರಬೇಕು. ಸ್ತ್ರೀ-ಪುರುಷರಲ್ಲಿ ಪರಸ್ಪರ ಗೌರವವಿರಲಿ. 
ದೋಷ ಪರಿಹಾರ: ಊಟ ಮಾಡುವ ಮುನ್ನ ತಮ್ಮದೆ ಅನ್ನಪೂರ್ಣೇಶ್ವರಿ ಸ್ಮರಣೆ ಮಾಡಿ.

ಸಿಂಹ: ಇಂದು ನಿಮಗೆ ಓರ್ವ ವಿದ್ವಾಂಸರಿಂದ ಪ್ರಶಂಸೆ ಸಿಗಲಿದೆ. ಮಿತ್ರರಿಂದ ನಿಮ್ಮ ಮಕ್ಕಳಿಗೆ  ಇರುಸುಮುರುಸಾಗಬಹುದು. ಮಕ್ಕಳನ್ನು ಗೌರವಿಸಿ, ಅವರ ಮನಸ್ಸಿಗೆ ನೋವು ಮಾಡದೆ ಅವರನ್ನು ತಿದ್ದುವ ಪ್ರಯತ್ನ ಮಾಡಬೇಕಾಗುತ್ತದೆ.
ದೋಷ ಪರಿಹಾರ : 1 ಕೆಜಿ ಗೋಧಿಯನ್ನು ಶಿವನಿಗೆ ಸಮರ್ಪಿಸಿಬನ್ನಿ

ಕನ್ಯಾ: ಉದ್ಯೋಗದಲ್ಲಿರುವ ಮಿತ್ರರೇ ನಿಮಗೆ ಸಿಹಿಸುದ್ದಿ. ಉದ್ಯೋಗ ಬದಲಾವಣೆಗೆ ಅವಕಾಶವಿದೆ, ಬಡ್ತಿಯೂ ಸಿಗಲಿದೆ. ಆದಾಯವೂ ದ್ವಿಗುಣವಾಗಲಿದೆ. ಆದರೆ ನಿಮ್ಮ ವಾಹನ ಸಂಚಾರದಲ್ಲಿ ಎಚ್ಚರವಾಗಿರಿ.
ದೋಷ ಪರಿಹಾರ: ಮನೋ ಬಲ ಸ್ಮರಣೆಯೇ ಸಾಕು.

ತುಲಾ: ನಿಮ್ಮ ರಾಶಿಯಲ್ಲಿ ಗಜಕೇಸರಿಯೋಗ ಏರ್ಪಟ್ಟಿದ್ದೆ. ಗಜ ಅಂದ್ರೆ ಆನೆ , ಕೇಸರಿ ಅಂದ್ರೆ ಸಿಂಹ ಎರಡೂ ವೈರ ಪ್ರಾಣಿಗಳು ಹೇಗೆ ಯೋಗವಾಗತ್ತೆ ಅಂದ್ರೆ ಗಜದಂಥ ದಿಟ್ಟತೆ, ಸಿಂಹದಂಥ ಧೈರ್ಯ ಬರಲಿದೆ. ಆದ್ರೆ ಗುರು ಚಂದ್ರರು ಇರುವುದು ಶತ್ರು ರಾಶಿಯಲ್ಲಿ  ಹಾಗಾಗಿ ಫಲ ಪ್ರಮಾಣ ಕಡಿಮೆ.  
ದೋಷ ಪರಿಹಾರ: ನವಗ್ರಹ ದರ್ಶನ, ನಮಸ್ಕಾರ ಮಾಡಿ

ವೃಶ್ಚಿಕ: ಮಿತ್ರರೇ ಸ್ವಲ್ಪ ಹಣ ಖರ್ಚಾಗಬಹುದು. ವೃಥಾ ಮೈಮೇಲೆ ಎಳೆದುಕೊಂಡು ಹುಂಬತನ ಪ್ರದರ್ಶಿಸಬೇಡಿ. ಆರೋಗ್ಯದ ಕಡೆಗೆ ಗಮನವಹಿಸಿ. ನೀರು ಕುಡಿಯುವಾಗ ಎಚ್ಚರದಿಂದ ಎರಡು ಬಾರಿ ಕುಡಿಯುವ ಬಾಟಲ್ ಅಥವಾ ಲೋಟ ಪರಿಶೀಲಿಸಿ ಕುಡಿಯಿರಿ.
ದೋಷ ಪರಿಹಾರ: ಗಣಪತಿ ಸುಬ್ರಹ್ಮಣ್ಯ ಉಭಯ ದೇವತೆಗಳನ್ನು ಸ್ಮರಿಸಿ.

ಧನಸ್ಸು: ನೀವು ಕೈಗೊಳ್ಳುವ ಕಾರ್ಯದಲ್ಲಿ ಸ್ವಲ್ಪ ಹಿನ್ನಡೆ ಇದೆ. ನಿರ್ಧಾರ ಕೈಗೊಳ್ಳಲು ಹಿಂದು ಮುಂದೆ ನೋಡುತ್ತೀರಿ. ಇಂದು ಅರಾಮಾಗಿರಿ. ಯಾವ ಪ್ರಮುಖ ನಿರ್ಧಾರವೂ ಬೇಡ. 
ದೋಷ ಪರಿಹಾರ: ನಿಮ್ಮ ತಾಯಿಗೆ ನಮಸ್ಕಾರ ಮಾಡಿ. 

ಮಕರ: ಇಂದು ಬಿಡುವಿಲ್ಲದಷ್ಟು ಕೆಲಸ, ಕೆಲವರಿಗೆ ಸಮಯ ಹೇಗಪ್ಪಾ ತಳ್ಳುವುದು ಎಂಬ ಚಿಂತೆ. ಇಂದು ಪುಟ್ಟ ಪ್ರವಾಸ ಕೈಗೊಳ್ಳಿ. ಮನೆ ಕೆಲಸಗಳನ್ನು ಮಾಡಿ. ಹಿರಿಯರ ಸಲಹೆಯಿಂದ ದಿನ ಸುಗಮವಾಗಲಿದೆ. 
ದೋಷ ಪರಿಹಾರ: ಶಂ ಶನೈಶ್ಚರಾಯ ನಮ: ಹೇಳಿಕೊಳ್ಳಿ.

ಕುಂಭ: ಇಂದು ಯಾವ ಮುಖ್ಯ ಜವಾಬ್ದಾರಿಯನ್ನೂ ವಹಿಸುವುದು ಬೇಡ. ಹಾಗಂತ ಆಲಸ್ಯವೂ ಬೇಡ. ನಿಮ್ಮ ಮಿತಿಯಲ್ಲಿನ ಕೆಲಸಗಳನ್ನು ಮಾಡುವುದರಲ್ಲಿ ಯೋಚಿಸುವ ಅಗತ್ಯವಿಲ್ಲ. ಮಿತ್ರರೊಂದಿಗೆ ಕಾಲಹರಣ ಮಾಡಬೇಡಿ. 
ದೋಷ ಪರಿಹಾರ : ನಿಮ್ಮ ಕುಲದೇವರಿಗೆ ನಮಸ್ಕಾರ ಹಾಕಿ.  

ಮೀನ: ಇಂದು ನಿಮ್ಮ ಗುರುಪೀಠಕ್ಕೆ ಹೋಗಿಬಂದರೆ ನಿಮ್ಮ ಕಾರ್ಯ ನೆರವೇರುತ್ತದೆ. ಮುಖ್ಯವಾಗಿ ಉಪನ್ಯಾಸಕ ವೃತ್ತಿಯವರು ಗುರು ದರ್ಶನ ಮಾಡಿ. ಸ್ವಲ್ಪ ಧನಾಗಮನವಿದೆ. ಖುಷಿಯಾಗಿರಿ. 
ದೋಷ ಪರಿಹಾರ: ಗುರು ಚರಿತ್ರೆ ಪಾರಾಯಣ ಮಾಡಿದರೆ ಅತ್ಯಂತ ಫಲದಾಯಕ.

- ಗೀತಾಸುತ.

click me!