Zain Nadella Passes Away: ಮೈಕ್ರೋಸಾಫ್ಟ್ ಸಿಇಒ ಸತ್ಯ ನಾದೆಲ್ಲಾಗೆ ಪುತ್ರ ವಿಯೋಗ!

Published : Mar 01, 2022, 12:28 PM ISTUpdated : Mar 01, 2022, 01:06 PM IST
Zain Nadella Passes Away: ಮೈಕ್ರೋಸಾಫ್ಟ್ ಸಿಇಒ ಸತ್ಯ ನಾದೆಲ್ಲಾಗೆ ಪುತ್ರ ವಿಯೋಗ!

ಸಾರಾಂಶ

ಸಾಫ್ಟ್‌ವೇರ್ ತಯಾರಕ ಕಂಪನಿ ಮೈಕ್ರೋಸಾಫ್ಟ್  ತನ್ನ ಕಾರ್ಯನಿರ್ವಾಹಕ ಸಿಬ್ಬಂದಿಗೆ ಇಮೇಲ್‌ನಲ್ಲಿ ಝೈನ್ ನಿಧನರಾಗಿದ್ದಾರೆ ಎಂದು ತಿಳಿಸಿದೆ. 

ಯುಎಸ್‌ಎ (ಮಾ. 01): ಮೈಕ್ರೋಸಾಫ್ಟ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ (CEO) ಸತ್ಯ ಮತ್ತು ಅವರ ಪತ್ನಿ ಅನು ಅವರ ಪುತ್ರ ಜೈನ್ ನಾಡೆಲ್ಲಾ ಸೋಮವಾರ ಬೆಳಗ್ಗೆ ನಿಧನರಾಗಿದ್ದಾರೆ ಎಂದು ಮೈಕ್ರೋಸಾಫ್ಟ್ ಕಾರ್ಪೊರೇಷನ್ ತಿಳಿಸಿದೆ. ಅವರು 26 ವರ್ಷ ವಯಸ್ಸಿನವರಾಗಿದ್ದರು ಮತ್ತು ಸೆರೆಬ್ರಲ್ ಪಾಲ್ಸಿಯೊಂದಿಗೆ (cerebral palsy) ಜನಿಸಿದ್ದರು. ಸಾಫ್ಟ್‌ವೇರ್ ತಯಾರಕ ಕಂಪನಿ ಮೈಕ್ರೋಸಾಫ್ಟ್  ತನ್ನ ಕಾರ್ಯನಿರ್ವಾಹಕ ಸಿಬ್ಬಂದಿಗೆ ಇಮೇಲ್‌ನಲ್ಲಿ ಝೈನ್ ನಿಧನರಾಗಿದ್ದಾರೆ ಎಂದು ತಿಳಿಸಿದೆ.  2014 ರಲ್ಲಿ ಸಿಇಒ ಪಾತ್ರವನ್ನು ವಹಿಸಿಕೊಂಡಾಗಿನಿಂದ, ವಿಕಲಾಂಗ ಬಳಕೆದಾರರಿಗೆ ಉತ್ತಮ ಸೇವೆ ನೀಡಲು ಉತ್ಪನ್ನಗಳನ್ನು ವಿನ್ಯಾಸಗೊಳಿಸಲು ನಾಡೆಲ್ಲಾ ಕಂಪನಿಯನ್ನು ಕೇಂದ್ರೀಕರಿಸಿದ್ದಾರೆ ಮತ್ತು ಝೈನನ್ನು ಬೆಳೆಸುವ ಮತ್ತು ಬೆಂಬಲಿಸುವ ಪಾಠಗಳನ್ನು ಹಲವಯ ಬಾರಿ ಉಲ್ಲೇಖಿಸಿದ್ದಾರೆ. 

"ಝೈನ್ ಸಂಗೀತದಲ್ಲಿ ಅವರ ಸಾರಸಂಗ್ರಹಿ ಅಭಿರುಚಿ, ಅವರ ಪ್ರಕಾಶಮಾನವಾದ  ಮುಗುಳ್ನಗೆ ಮತ್ತು ಅವರ ಕುಟುಂಬಕ್ಕೆ ಮತ್ತು ಅವರನ್ನು ಪ್ರೀತಿಸಿದ ಎಲ್ಲರಿಗೂ ತಂದ ಅಪಾರ ಸಂತೋಷಕ್ಕಾಗಿ ನೆನಪಿನಲ್ಲಿರಲಿದ್ದಾರೆ." ಎಂದು ಮಕ್ಕಳ ಆಸ್ಪತ್ರೆಯ ಸಿಇಒ ಜೆಫ್ ಸ್ಪೆರಿಂಗ್ (Jeff Sperring) ಹೇಳಿದ್ದಾರೆ

ಇದನ್ನೂ ಓದಿ: Brand Finance List: ಜಗತ್ತಿನ ನಂ.1 ಸಿಇಒ ಸತ್ಯ ನಾದೆಳ್ಲಾ; ಎನ್. ಚಂದ್ರಶೇಖರ್, ಆನಂದ್ ಮಹೀಂದ್ರಾ, ಮುಖೇಶ್ ಅಂಬಾನಿಗೂ ಸ್ಥಾನ

ಕಂಪನಿಯಲ್ಲಿ ಅನೇಕ ಬದಲಾವಣೆ: ಭಾರತೀಯ ಮೂಲದ ಸತ್ಯ ನಾದೆಲ್ಲಾ ಅವರು 2014ರಲ್ಲಿ ಮೈಕ್ರೋಸಾಫ್ಟ್ ಕಂಪನಿಯ ನೂತನ ಸಿಇಒ ಆಗಿ ನೇಮಕಗೊಂಡಿದ್ದರು.. ಕಳೆದ ವರ್ಷ, ಝೈನ್ ಅವರ ಹೆಚ್ಚಿನ ಚಿಕಿತ್ಸೆಯನ್ನು ಪಡೆದ ಮಕ್ಕಳ ಆಸ್ಪತ್ರೆ, ಸಿಯಾಟಲ್ ಚಿಲ್ಡ್ರನ್ಸ್ ಸೆಂಟರ್ ಫಾರ್ ಇಂಟಿಗ್ರೇಟಿವ್ ಬ್ರೇನ್ ರಿಸರ್ಚ್‌ನ ಭಾಗವಾಗಿ ಪೀಡಿಯಾಟ್ರಿಕ್ ನ್ಯೂರೋಸೈನ್ಸ್‌ನಲ್ಲಿ ಜೈನ್ ನಾಡೆಲ್ಲಾ ಎಂಡೋವ್ಡ್ ಚೇರನ್ನು ಸ್ಥಾಪಿಸಿದ್ದರು. 2014ರಲ್ಲಿ ಸ್ಟೀವ್ ಬಾಲ್ಮೇರ್ ಅವರಿಂದ ತೆರವಾದ ಮೈಕ್ರೋಸಾಫ್ಟ್ ಸಿಇಒ ಸ್ಥಾನಕ್ಕೆ ಆಯ್ಕೆಯಾದ ಸತ್ಯಾ ನಡೆಲ್ಲಾ, ಜವಾಬ್ದಾರಿವಹಿಸಿಕೊಂಡ ದಿನದಿಂದ ಕಂಪನಿಯಲ್ಲಿ ಅನೇಕ ಬದಲಾವಣೆಗೆ ಮುನ್ನುಡಿ ಬರೆದವರು.

ಪ್ರಮುಖವಾಗಿ ವಿಶ್ವದ ಅತ್ಯಂತ ಕೆಟ್ಟ ಸಿಇಒ ಎಂದು 2012 ರ ಫೋಬ್ಸ್ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದ ಸ್ಟೀವ್ ಬಾಲ್ಮೇರ್, ಮೈಕ್ರೋಸಾಫ್ಟ್ ಕಂಪನಿಯ ಹೆಸರು ಪಾತಾಳಕ್ಕೆ ಕುಸಿಯಲು ಕಾರಣರಾಗಿದ್ದರು. ಆದರೆ ಸತ್ಯಾ ನಡೆಲ್ಲಾ ಕಂಪನಿಯ ಮೌಲ್ಯ ಹೆಚ್ಚಿಸುವಲ್ಲಿ ಅವಿರತವಾಗಿ ಶ್ರಮಿಸಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!
ರಾಜಮೌಳಿ-ಜೇಮ್ಸ್ ಕ್ಯಾಮರೂನ್ ಹೊಸ ಹೆಜ್ಜೆ, ನಟ ಮಹೇಶ್ ಬಾಬುಗೆ ಪ್ಯಾನ್ ವರ್ಲ್ಡ್ ಪಟ್ಟ..!