
ವಾಶಿಂಗ್ಟನ್ (ಏ.07) ಅಮೆರಿಕ ಹಾಗೂ ಇರಾನ್ ನಡುವಿನ ಸಂಘರ್ಷ ತೀವ್ರಗೊಳ್ಳುತ್ತಿದೆ. ಹೊರ್ಮೊಜ್ ಜಲಸಂಧಿ ತೆರೆಯುವಂತೆ ಅಮೆರಿಕ, ಇರಾನ್ಗೆ ತಾಕೀತು ಮಾಡಿದೆ. ಇಂದು ರಾತ್ರಿ 8 ಗಂಟೆ ಒಳಗೆ ಇರಾನ್ ಅಧಿಪತ್ಯ ಸಾಧಿಸಿರುವ ಹೊರ್ಮುಜ್ ಜಲಸಂಧಿ ತೆರೆಯದಿದ್ದರೆ ಇಡೀ ನಾಗರೀಕತೆಯನ್ನೇ ಮುಗಿಸುತ್ತೇವೆ. ಮತ್ತೆ ಯಾವತ್ತೂ ಈ ನಾಗರೀಕತೆ ಮರಳುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಎಚ್ಚರಿಸಿದ್ದಾರೆ.
ಒಂದು ನಾಗರೀಕತೆಯನ್ನು ಮುಗಿಸುವುದು ನನಗೂ ಇಷ್ಟವಿಲ್ಲ. ಆದರೆ ಪರಿಸ್ಥಿತಿ ನೋಡಿದರೆ ಇದು ಆಗಲಿದೆ. ಇರಾನ್ನಲ್ಲಿ ಸಂಪೂರ್ಣ ಹಾಗೂ ಪೂರ್ಣಪ್ರಮಾಣದ ಆಡಳಿತ ಬದಲಾವಣೆ ಗುರಿ ಹೊಂದಿದ್ದೇವೆ. ಇದರತ್ತ ಸಾಗುತ್ತಿದ್ದೇವೆ. ಹೊಸ ಆಡಳಿತದಲ್ಲಿ ಮೂಲಭೂತವಾದಿಗಳಿಗೆ ಅವಕಾಶವಿಲ್ಲ. ಕ್ರಾಂತಿಕಾರಕ ಅದ್ಭುತವೊಂದು ಸಂಭವಿಸಲಿದೆ. ಅತ್ಯಂತ ಸಂಕೀರ್ಣ ಹಾಗೂ ದುರ್ಗಮ ಕ್ಷಣಗಳಲ್ಲಿ ಒಂದಾಗಿದೆ. ಇಂದು ರಾತ್ರಿಯೇ ಭವಿಷ್ಯ ನಿರ್ಧಾರವಾಗಲಿದೆ. ಕಳೆದ 47 ವರ್ಷಗಳಿಂದ ನಡೆಯುತ್ತಿದ್ದ ಭ್ರಷ್ಟಾಚಾರ, ಸುಲಿಗೆ, ಸಾವು, ಅತಿಕ್ರಮಣಗಳ ಕೊನೆಗೊಳ್ಳುತ್ತಿದೆ. ಇರಾನ್ ಜನರಿಗೆ ದೇವರು ಒಳ್ಳೆಯದು ಮಾಡಲಿ ಎಂದು ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಟ್ರುಥ್ ಸೋಶಿಯಲ್ನಲ್ಲಿ ಎಚ್ಚರಿಕೆ ನೀಡಿದ್ದಾರೆ.
ಡೋನಾಲ್ಡ್ ಟ್ರಂಪ್ ಲಾಸ್ಟ್ ವಾರ್ನಿಂಗ್ ನೀಡುವ ಮೊದಲೇ ಅಮೆರಿಕ ಸೇನಾ ಇರಾನ್ನ ಅತ್ಯಂತ ಪ್ರಮುಖ ಖರ್ಗ್ ದ್ವೀಪದ ಮೇಲೆ ದಾಳಿ ಮಾಡಿದೆ. ಖರ್ಗ್ನಲ್ಲಿ ತೈಲ ಘಟಕ, ತೈಲ ಸಂಸ್ಕರಣ ಘಟಕದ ಮೇಲೆ ಅಮೆರಿಕ ದಾಳಿ ಮಾಡಿದೆ. ಖರ್ಗ್ ದ್ವೀಪದ ಹಲವೆಡೆ ದಾಳಿ ನಡೆಯುತ್ತಿದೆ. ಇರಾನ್ ಕೂಡ ಪ್ರತಿ ದಾಳಿಗೆ ಸಜ್ಜಾಗಿದೆ.
ಇರಾನ್ ಹೆಜ್ಜೆ ಹೆಜ್ಜೆಗೂ ಅಮೆರಿಕಗೆ ಎಚ್ಚರಿಕೆ ನೀಡುತ್ತಿದೆ. ಜೊತೆಗೆ ತನ್ನ ದಾಳಿ ಮುಂದುವರಿಸುತ್ತಿದೆ. ಇದೇ ವೇಳೆ ಹೊರ್ಮುಜ್ ಜಲಸಂಧಿ ಆತ್ಮೀಯರಿಗೆ, ಆಪ್ತ ಸ್ನೇಹಿತರಿಗೆ ತೆರೆದಿದೆ ಎಂದು ಅಮೆರಿಕವನ್ನು ಅಣಕಿಸಿದೆ. ಇತ್ತ ಇರಾನ್ ಪ್ರತಿ ದಾಳಿ ನಡೆಸಿತ್ತು. ಅರಬ್ ರಾಷ್ಟ್ರಗಳ ಮೇಲೆ ಮಿಸೈಲ್ ದಾಳಿಯಾಗಿದೆ. ಇದು ಅರಬ್ ರಾಷ್ಟ್ರಗಳ ಕಣ್ಣು ಕೆಂಪಾಗಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ