Trump Tax: ಹೊರ್ಮುಜ್ ಜಲಸಂಧಿ ಮೇಲೆ ಶೇ. 20 ತೆರಿಗೆ; ಭಾರತದ ಎಲ್‌ಪಿಜಿ ಪೂರೈಕೆಗೆ ಕುತ್ತು?

Published : Jul 13, 2026, 10:56 PM IST
Trump Proposes 20 Percent Tax on Hormuz Strait

ಸಾರಾಂಶ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹೊರ್ಮುಜ್ ಜಲಸಂಧಿ ಮೂಲಕ ಸಾಗುವ ಹಡಗುಗಳ ಮೇಲೆ ಶೇ. 20ರಷ್ಟು ಭದ್ರತಾ ಶುಲ್ಕ ವಿಧಿಸುವುದಾಗಿ ಘೋಷಿಸಿದ್ದಾರೆ. ಇರಾನ್‌ಗೆ ಪಾಠ ಕಲಿಸುವ ಈ ಕ್ರಮದಿಂದ ಭಾರತದಲ್ಲಿ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ ಏರಿಕೆಯಾಗುವ ಆತಂಕ ಎದುರಾಗಿದೆ.

ಅಮೆರಿಕ-ಇರಾನ್ ನಡುವಿನ ಸಂಘರ್ಷ ಮತ್ತೆ ಭುಗಿಲೆದ್ದಿದ್ದು, ಮತ್ತೆ ಜಗತ್ತಿನ ಆರ್ಥಿಕತೆ ಅಲ್ಲೋಲ ಕಲ್ಲೋಲವಾಗುವ ಬಗ್ಗೆ ಚಿಂತೆಗೀಡುಮಾಡಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald trump) ಅವರು ತಮ್ಮನ್ನು ತಾವೇ 'ಹೊರ್ಮುಜ್ ಜಲಸಂಧಿಯ ರಕ್ಷಕ' (Guardian of the Hormuz Strait) ಎಂದು ಘೋಷಿಸಿಕೊಂಡಿದ್ದು, ಜಾಗತಿಕ ವಾಣಿಜ್ಯ ವಲಯದಲ್ಲಿ ತಲ್ಲಣ ಮೂಡಿಸುವಂತಹ ಆದೇಶವೊಂದನ್ನು ಹೊರಡಿಸಿದ್ದಾರೆ. 

ಟ್ರಂಪ್‌ನ ಈ ನಿರ್ಧಾರ ಜಾಗತಿಕವಾಗಿ ಪರಿಣಾಮ ಬೀರಲಿದೆ

ಇದರ ಅನ್ವಯ ಇನ್ಮುಂದೆ ಹೊರ್ಮುಜ್ ಜಲಸಂಧಿಯ ಮೂಲಕ ಹಾದುಹೋಗುವ ಪ್ರತಿಯೊಂದು ವಾಣಿಜ್ಯ ಸರಕು ಮತ್ತು ತೈಲ ಟ್ಯಾಂಕರ್‌ಗಳ ಮೇಲೆ ಶೇ. 20ರಷ್ಟು ಭಾರಿ ಭದ್ರತಾ ಶುಲ್ಕವನ್ನು ಹೇರಲಾಗುವುದು ಎಂದು ಘೋಷಿಸಿದ್ದಾರೆ. ಈ ಅನಿರೀಕ್ಷಿತ ಕ್ರಮದಿಂದ ಇರಾನ್‌ಗೆ ಶಿಕ್ಷೆ ನೀಡುವ ಮಾರ್ಗವೆಂದು ಹೇಳಲಾಗುತ್ತಿದೆ ಆದರೆ, ಈ ಒಂದು ನಿರ್ಧಾರದಿಂದ ಜಾಗತಿಕ ಮಾರುಕಟ್ಟೆಗಳು ಅಕ್ಷರಶಃ ಕಂಗಾಲಾಗುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ. ಇದು ಅಮೆರಿಕದ 'ರಕ್ಷಕ' ಮನೋಭಾವದ ತೆರಿಗೆಯಾಗಲಿದ್ದು, ಇದರ ಪರಿಣಾಮ ಮಾತ್ರ ಜಗತ್ತಿನಾದ್ಯಂತ ಆಗಲಿದೆ.

ಭಾರತದ ಅಡುಗೆ ಮನೆಗೂ ತಟ್ಟಲಿದೆ ಬಿಸಿ

ಟ್ರಂಪ್ ಅವರ ಈ 'ತೆರಿಗೆ ದಾಳಿ'ಯ ನೇರ ಪರಿಣಾಮ ಭಾರತದ ಮೇಲೆ ಆಗುವ ಸಾಧ್ಯತೆ ದಟ್ಟವಾಗಿದೆ. ಗಲ್ಫ್ ರಾಷ್ಟ್ರಗಳಿಂದ ಬರುವ ಹಡಗುಗಳ ಮೇಲೆ ಈ ತೆರಿಗೆ ಅನ್ವಯವಾಗುವುದರಿಂದ, ಭಾರತಕ್ಕೆ ಆಮದು ಆಗುವ ವಸ್ತುಗಳ ಬೆಲೆ ಏರಿಕೆಯಾಗುವುದು ಬಹುತೇಕ ನಿಶ್ಚಿತವಾಗಿದೆ. ಇದು ಭಾರತದ ಆರ್ಥಿಕತೆಯ ಮೇಲೆ ಹೊಸದೊಂದು ಒತ್ತಡವನ್ನು ಸೃಷ್ಟಿಸಲಿದೆ. ವಿಶೇಷವಾಗಿ, ಭಾರತದ ಕೋಟ್ಯಂತರ ಮನೆಗಳ ಅಡುಗೆ ಮನೆಯ ಬಜೆಟ್‌ಗೆ ಇದು ನೇರವಾಗಿ ಕತ್ತರಿ ಹಾಕಲಿದೆ. ಈ ತೆರಿಗೆಯಿಂದಾಗಿ ಭಾರತದಲ್ಲಿ ಎಲ್‌ಪಿಜಿ (LPG) ಸಿಲಿಂಡರ್‌ಗಳ ಬೆಲೆಗಳು ಗಗನಕ್ಕೇರುವ ಆತಂಕ ಎದುರಾಗಿದೆ. ಅಷ್ಟೇ ಅಲ್ಲ, ಅಡುಗೆ ಅನಿಲದ ಸಂಪೂರ್ಣ ಪೂರೈಕೆ ಸರಪಳಿಯೇ ಬುಡಮೇಲಾಗುವ ಅಪಾಯವಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಒಂದು ಕಡೆ ಇರಾನ್‌ಗೆ ಬಿಸಿ ಮುಟ್ಟಿಸುವ ಯತ್ನವಾದರೆ, ಇನ್ನೊಂದೆಡೆ ಭಾರತದಂತಹ ರಾಷ್ಟ್ರಗಳ ಆರ್ಥಿಕತೆಯ ಮೇಲೆ ಇದು ದೊಡ್ಡ ಹೊಡೆತ ನೀಡಲಿದೆ. ಟ್ರಂಪ್ ಅವರ ಹುಚ್ಚುತನದ ನಿರ್ಧಾರವು ಜಾಗತಿಕ ವಾಣಿಜ್ಯ ಸಮೀಕರಣಗಳನ್ನೇ ಬದಲಿಸುವ ಸೂಚನೆ ನೀಡಿದ್ದು, ಮುಂದೇನಾಗಲಿದೆಯೋ ಎಂಬ ಆತಂಕವಂತೂ ಇದೆ..

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬಾಂಗ್ಲಾದೇಶದಲ್ಲಿ ರಾಮನ ವಿಗ್ರಹ ನಿರ್ಮಿಸುತ್ತಿದ್ದ ವ್ಯಕ್ತಿ ಅರೆಸ್ಟ್! ಯಾರು ಈ ಹರಿದಾಸ್ ಚಂದ್ರ?
ಈ ವ್ಯವಸ್ಥೆ ಭಾರತದಲ್ಲೂ ಇರಬೇಕಿತ್ತು: ಈ ದೇಶದಲ್ಲಿ ಜೈಲುಗಳಿವೆ ಆದರೆ ಒಬ್ಬನೇ ಒಬ್ಬ ಕೈದಿ ಇಲ್ಲ!