ಕೂದಲುಳ್ಳ ಬಾಲ ಹೊಂದಿರುವ ನೇಪಾಳದ ಹುಡುಗ, 'ಹನುಮಂತನ ಪುನರ್ಜನ್ಮ' ಅಂದ್ರು ಸ್ಥಳೀಯರು!

Published : Apr 15, 2022, 06:20 PM IST
ಕೂದಲುಳ್ಳ ಬಾಲ ಹೊಂದಿರುವ ನೇಪಾಳದ ಹುಡುಗ, 'ಹನುಮಂತನ ಪುನರ್ಜನ್ಮ' ಅಂದ್ರು ಸ್ಥಳೀಯರು!

ಸಾರಾಂಶ

ನೇಪಾಳದಲ್ಲಿ 16 ವರ್ಷದ ಹುಡುಗನಿಗೆ 70 ಸೆಂಟಿಮೀಟರ್ ಉದ್ದ ಕೂದಲುಳ್ಳ ಬಾಲವು ಬೆಳೆಯುತ್ತಿದೆ. ಸ್ಥಳೀಯ ಅರ್ಚಕರೊಬ್ಬರು ಈತ ಹನುಮಂತನ ಪುನರ್ಜನ್ಮ ಎಂದು ಹೇಳಿದ್ದಾರೆ.  

ನವದೆಹಲಿ (ಏ.15): ನೇಪಾಳದಲ್ಲಿ (Nepal) ಒಬ್ಬ ಹದಿಹರೆಯದವನು 70 ಸೆಂಟಿಮೀಟರ್ ಉದ್ದದ ಕೂದಲುಳ್ಳ ಬಾಲವನ್ನು (hairy tail )ಹೊಂದಿದ್ದಾನೆ. 16 ವರ್ಷದ ದೇಶಾಂತ್ ಅಧಿಕಾರಿ (Deshant Adhikari) ತಮ್ಮ ಸೊಂಟದ ಹಿಂಭಾಗದಲ್ಲಿದ್ದ ಉದ್ದ ಕೂದಲುಗಳ ಬಗ್ಗೆ ಮೊದಲು ನಾಚಿಕೆ ಪಡುತ್ತಿದ್ದರು. ಆದರೆ, ಇನ್ನು ಮುಂದೆ ತಾನು ಅದನ್ನು ಮರೆ ಮಾಡುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದಾರೆ. 

ಅದರಲ್ಲೂ ಒಬ್ಬ ಅರ್ಚಕ, ದೇಶಾಂತ್ ಅಧಿಕಾರಿ ಹನುಮಂತನ ಪುನರ್ಜನ್ಮ ಎಂದು ಹೇಳಿದ ಬಳಿಕ ತಾವು ಈ ಉದ್ದ ಕೂದಲುಗಳ ಬಗ್ಗೆ ಹೆಮ್ಮೆ ಪಡುವುದಾಗಿ ದೇಶಾಂತ್ ಹೇಳಿದ್ದಾರೆ. ತಮ್ಮ ಮಗನ ಸೊಂಟದ ಹಿಂಭಾಗದಲ್ಲಿ ಬೆಳೆಯುತ್ತಿರುವ ಕೂದಲುಗಳ ಬಗ್ಗೆ ದೇಶಾಂತ್ ಅಧಿಕಾರಿಯ ಪೋಷಕರು ಅವರನ್ನು ಸಾಕಷ್ಟು ಆಸ್ಪತ್ರೆಗಳಿಗೆ ಚಿಕಿತ್ಸೆ ಕೊಡಿಸಿದ್ದರು. ಅದಲ್ಲದೆ, ವಿದೇಶದ ಆಸ್ಪತ್ರೆಗಳಲ್ಲಿಯೂ ಚಿಕಿತ್ಸೆ ನೀಡಿದ್ದಾರೆ. ಆದರೆ, ಯಾವ ಚಿಕಿತ್ಸೆಯೂ ಈತನ ಸಮಸ್ಯೆಗೆ ಪರಿಹಾರ ನೀಡಿರಲಿಲ್ಲ.

ಆದರೆ, ಇತ್ತೀಚೆಗೆ ಸ್ಥಳೀಯ ಅರ್ಚಕರೊಬ್ಬರು ಇದನ್ನು ಗಮನಿಸಿದ್ದು, ದೇಶಾಂತ್ ಹನುಮಂತನ ಪುನರ್ಜನ್ಮ ಎಂದು ಹೇಳಿದ್ದಾರೆ. ಇನ್ನೊಂದೆಡೆ ದೇಶಾಂತ್ ತಮ್ಮ ಅಸಮಾನ್ಯ ಸ್ಥಿತಿಯ ಕಾರಣದಿಂದಾಗಿ ಟಿಕ್‌ಟಾಕ್‌ನಲ್ಲಿ ವೈರಲ್ ಆಗಿದ್ದಾರೆ. ತಮ್ಮ ಈ ವೈಶಿಷ್ಟ್ಯವನ್ನು ಅವರು ಈಗ ಜಗತ್ತಿನ ಮುಂದೆ ತೋರಿಸಲು ಯಾವ ಹಿಂಜರಿಕೆಯನ್ನೂ ಹೊಂದಿಲ್ಲ. "ನನ್ನ ವೀಡಿಯೊ ಟಿಕ್‌ಟಾಕ್‌ನಲ್ಲಿ ವೈರಲ್ ಆಗಿದೆ ಮತ್ತು ಈಗ ಬಹಳಷ್ಟು ಜನರು ನನ್ನನ್ನು ಬಾಲವಿರುವ ಹುಡುಗ ಎಂದು ತಿಳಿದಿದ್ದಾರೆ ಮತ್ತು ಅದರ ಬಗ್ಗೆ ನನಗೆ ಸಂತೋಷವಾಗಿದೆ" ಎಂದು ದೇಶಾಂತ್ ಹೇಳಿದ್ದಾರೆಂದು ಸ್ಥಳೀಯ ಪತ್ರಿಕೆ ವರದಿ ಮಾಡಿದೆ.

ದೇಶಾಂತ್ ಅವರನ್ನು ಸಂದರ್ಶಿಸಿ ಅವರ ಅಸಾಮಾನ್ಯ ಬಾಲದ ಬಗ್ಗೆ ಚಿತ್ರೀಕರಣ ಮಾಡಿರುವ ಚಲನಚಿತ್ರ ನಿರ್ಮಾಪಕ ಪುಷ್ಕರ್ ನೇಪಾಲ್, "ಅವನು ಜನಿಸಿದ ಐದು ದಿನಗಳ ನಂತರ ಆಸ್ಪತ್ರೆಯಿಂದ ಮನೆಗೆ ಕರೆದೊಯ್ಯುವವರೆಗೂ ಅವನ ಹೆತ್ತವರಿಗೆ ಅವನ ಸ್ಥಿತಿಯ ಬಗ್ಗೆ ತಿಳಿದಿರಲಿಲ್ಲ" ಎಂದು ಹೇಳಿದರು.

ಕೊರೋನಾದಿಂದ ಮನುಷ್ಯನನ್ನು ರಕ್ಷಿಸಲು ಮತ್ತೊಮ್ಮೆ ಕೂರ್ಮಾವತಾರ ತಾಳಿದನೇ ವಿಷ್ಣು?

"ಅವರು ಸರಿಯಾದ ಚಿಕಿತ್ಸೆಯನ್ನು ನೀಡುವ ಸಲುವಾಗಿ ವಿವಿಧ ಸ್ಥಳೀಯ ಆಸ್ಪತ್ರೆಗಳಿಗೆ ಮತ್ತು ವಿದೇಶಗಳಿಗೆ ಕರೆದೊಯ್ದರು, ಆದರೆ ಯಾವುದೇ ಪ್ರಯತ್ನವು ಬಾಲ ಬೆಳೆಯುವುದನ್ನು ತಡೆಯಲು ಸಾಧ್ಯವಾಗಲಿಲ್ಲ" ಎಂದು ಅವರು ಹೇಳಿದರು. ನಂತರ ಅವರು ಸ್ಥಳೀಯ ಪುರೋಹಿತರನ್ನು ಸಂಪರ್ಕಿಸಿದರು ಮತ್ತು ಬಾಚಣಿಗೆ ಅಥವಾ ಬಾಲವನ್ನು ಕತ್ತರಿಸಲು ಯಾವುದೇ ಸಾಧನವನ್ನು ಬಳಸದಂತೆ ಅವರಿಗೆ ತಿಳಿಸಲಾಯಿತು.

Hanuman Jayanti 2022: ಹನುಮಂತನ ಬಗೆಗಿನ ಈ ವಿಷಯಗಳು ನಿಮಗೆ ಗೊತ್ತೇ?

ಹುಡುಗನಿಗೆ ಕೆಲವು ಅಲೌಕಿಕ ಶಕ್ತಿ ಇರಬಹುದು, ಏಕೆಂದರೆ ಅವನು ವಾನರಗಳ ದೇವ ಭಗವಾನ್ ಹನುಮಂತನ ಪುನರ್ಜನ್ಮವಾಗಿರಬಹುದು ಎಂದು ಪುರೋಹಿತರು ಸೂಚಿಸಿದರು. ಅವರು ಬಾಲವನ್ನು ನೈಸರ್ಗಿಕವಾಗಿ ಬೆಳೆಯಲು ಅವಕಾಶ ಮಾಡಿಕೊಟ್ಟರು ಬಳಿಕ ಇವರ ಪಾಲಕರು ಈತನಿಗೆ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ತೋರಿದ ಪ್ರಯತ್ನವನ್ನು ಕೈಬಿಟ್ಟರು ಎಂದು ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಆಕಾಶಕ್ಕೇ ಕನ್ನಡಿ ಹಾಕಿ ರಾತ್ರಿಗೆ ಗುಡ್‌ ಬೈ ಸಾಹಸ!
PUBG ಗೇಮ್​ನಿಂದ 6ನೇ ಮಗುವಿನತ್ತ ಪಯಣ: ಅಕ್ರಮವಾಗಿ ಭಾರತಕ್ಕೆ ಬಂದಿದ್ದಾಕೆ ಮತ್ತೊಮ್ಮೆ ಗರ್ಭಿಣಿ!