Russia Ukraine Crisis: ಸೇನಾ ದಾಳಿ ತಡೆಯಿರಿ, ಶಾಂತಿಗೆ ಅವಕಾಶ ನೀಡಿ:‌ ಪುಟಿನ್‌ಗೆ ಯುಎನ್ ಮುಖ್ಯಸ್ಥ ಆಗ್ರಹ!

Published : Feb 24, 2022, 11:42 AM IST
Russia Ukraine Crisis: ಸೇನಾ ದಾಳಿ ತಡೆಯಿರಿ, ಶಾಂತಿಗೆ ಅವಕಾಶ ನೀಡಿ:‌ ಪುಟಿನ್‌ಗೆ ಯುಎನ್ ಮುಖ್ಯಸ್ಥ ಆಗ್ರಹ!

ಸಾರಾಂಶ

ಯುಎನ್ ಸೆಕ್ರೆಟರಿ ಜನರಲ್ ಆಂಟೋನಿಯೊ ಗುಟೆರೆಸ್ ಅವರು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ಉಕ್ರೇನ್ ವಿರುದ್ಧ ರಷ್ಯಾದ ಸೈನ್ಯವನ್ನು ಕಳುಹಿಸಬೇಡಿ ಮತ್ತು ಶಾಂತಿಗೆ ಅವಕಾಶ ನೀಡುವಂತೆ ಆಗ್ರಹಿಸಿದ್ದಾರೆ.

ಯುಎಸ್‌ಎ (ಫೆ. 24):  ಯುಎನ್ ಸೆಕ್ರೆಟರಿ-ಜನರಲ್ ಆಂಟೋನಿಯೊ ಗುಟೆರೆಸ್ (Antonio Guterres) ಅವರು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ಉಕ್ರೇನ್ ಮೇಲೆ ಆಕ್ರಮಣ ಮಾಡುವುದನ್ನು ತಡೆಯಲು ಮತ್ತು "ಶಾಂತಿಗೆ ಅವಕಾಶವನ್ನು ನೀಡುವಂತೆ" ನೇರ ಮತ್ತು ಬಲವಾದ ಮನವಿ ಮಾಡಿದ್ದಾರೆ. ಬುಧವಾರ ತಡರಾತ್ರಿ ಉಕ್ರೇನ್‌ನಲ್ಲಿ ನಡೆದ ಯುಎನ್ ಭದ್ರತಾ ಮಂಡಳಿಯ ತುರ್ತು ಸಭೆಯನ್ನು ಉದ್ದೇಶಿಸಿ ಗುಟೆರಸ್ ಮಾತನಾಡಿದರು. ರಷ್ಯಾ ಮತ್ತು ಉಕ್ರೇನ್ ನಡುವಿನ ಉದ್ವಿಗ್ನತೆಯ ನಡುವೆ ಈ ವಾರದ ಎರಡನೇ ಸಭೆ ಮತ್ತು ಜನವರಿ 31 ರ ನಂತರ ನಾಲ್ಕನೇ ಸಭೆಯು ಇದಾಗಿದೆ. ಮಂಗಳವಾರ  ಯುಎನ್ ಮುಖ್ಯಸ್ಥರು ಉಕ್ರೇನ್‌ನ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯನ್ನು ಉದ್ದೇಶಿಸಿ ಮಾತನಾಡಿದ್ದರು.

"ಅಧ್ಯಕ್ಷ ಪುಟಿನ್, ನಿಮ್ಮ ಸೈನ್ಯವನ್ನು ಉಕ್ರೇನ್ ಮೇಲೆ ದಾಳಿ ಮಾಡುವುದನ್ನು ನಿಲ್ಲಿಸಿ, ಶಾಂತಿಗೆ ಅವಕಾಶ ನೀಡಿ, ಈಗಾಗಲೇ ಹಲವಾರು ಜನರು ಸಾವನ್ನಪ್ಪಿದ್ದಾರೆ" ಎಂದು ರಷ್ಯಾ-ಉಕ್ರೇನ್ ಬಿಕ್ಕಟ್ಟಿನ ಕುರಿತು ಮೂರು ದಿನಗಳಲ್ಲಿ ಎರಡನೇ ತುರ್ತು ಭದ್ರತಾ ಮಂಡಳಿಯ ಸಭೆಯಲ್ಲಿ ಗುಟೆರಸ್ ಆಗ್ರಹಿಸಿದ್ದಾರೆ. 

ಇದನ್ನೂ ಓದಿRussia Ukraine Crisis: ಉದ್ವಿಗ್ನ ಪರಿಸ್ಥಿತಿ ತಣ್ಣಗಾಗಿಸುವುದು ಮೊದಲ ಆದ್ಯತೆ: ವಿಶ್ವಸಂಸ್ಥೆಯಲ್ಲಿ ಭಾರತ ಕರೆ!

ವಿಶ್ವ ನಾಯಕರು ಒಬ್ಬರ ನಂತರ ಒಬ್ಬರು ರಷ್ಯಾವನ್ನು ಯುದ್ಧ ಮಾಡದಂತೆ ನಿಲ್ಲುವಂತೆ ಒತ್ತಾಯಿಸುತ್ತಿದ್ದಂತೆ, ಪುಟಿನ್ ರಷ್ಯಾದ ಟಿವಿಯಲ್ಲಿ ಆಶ್ಚರ್ಯಕರ ಭಾಷಣ ಮಾಡಿದ್ದು ಮಿಲಿಟರಿ ಕಾರ್ಯಾಚರಣೆಯ ನಿರ್ಧಾರವನ್ನು ಮಾಡಿದ್ದಾರೆ" ಎಂದು ಘೋಷಿಸಿದರು.

ಗುಟೆರೆಸ್ ನಂತರ ಮಾತನಾಡಿದ ಯುಎನ್ ರಾಜಕೀಯ ವ್ಯವಹಾರಗಳ ಅಂಡರ್-ಸೆಕ್ರೆಟರಿ ರೋಸ್ಮರಿ ಡಿಕಾರ್ಲೊ, ಬುಧವಾರ "ದೊಡ್ಡ ಪ್ರಮಾಣದ ಮಿಲಿಟರಿ ಪಡೆಗಳು ಉಕ್ರೇನ್ ಕಡೆಗೆ ಚಲಿಸುವ" ವರದಿಗಳಿವೆ ಮತ್ತು ರಷ್ಯಾ ನಡುವಿನ ಗಡಿಯಲ್ಲಿ ನಾಗರಿಕ ವಿಮಾನಗಳಿಗೆ "ವಾಯುಪ್ರದೇಶವನ್ನು ಮುಚ್ಚಿದೆ" ಎರಡು ದೇಶಗಳಿಗೆ ಮುಚ್ಚಲಾಗಿದೆ ಎಂದು ಹೇಳಿದರು. ಆದರೆ ಯುಎನ್ ಈ ವರದಿಗಳನ್ನು ಪರಿಶೀಲಿಸಲು ಸಾಧ್ಯವಾಗಲಿಲ್ಲ ಎಂದು ಅವರು ತಿಳಿಸಿದರು. 

ಇದನ್ನೂ ಓದಿ: Ukraine Russia Conflict: ಉಕ್ರೇನ್‌ ಮೇಲೆ ಉತ್ತರದಿಂದಲೂ ರಷ್ಯಾ ದಾಳಿ?

ಇನ್ನು ಯುಎನ್‌ಗೆ ಯುಎಸ್ ರಾಯಭಾರಿ ಲಿಂಡಾ ಥಾಮಸ್-ಗ್ರೀನ್‌ಫೀಲ್ಡ್ ರಷ್ಯಾದ ಅಧ್ಯಕ್ಷರಿಗೆ ಇದೇ ರೀತಿಯ ಮನವಿಯನ್ನು ಮಾಡಿದರು. 'ಉಕ್ರೇನ್ "ನಿಮ್ಮ ಪಡೆಗಳು ಮತ್ತು ನಿಮ್ಮ ಟ್ಯಾಂಕ್‌ಗಳು ಮತ್ತು ನಿಮ್ಮ ವಿಮಾನಗಳನ್ನು ಅವರ ಬ್ಯಾರಕ್‌ಗಳು ಮತ್ತು ಹ್ಯಾಂಗರ್‌ಗಳಿಗೆ ಹಿಂತಿರುಗಿಸಿ ಮತ್ತು ನಿಮ್ಮ ರಾಜತಾಂತ್ರಿಕರನ್ನು ಮಾತುಕತೆಯ ಟೇಬಲ್‌ಗೆ ಕಳುಹಿಸಿ" ಎಂದು ಅವರು ಹೇಳಿದರು.

ರಷ್ಯಾ-ಉಕ್ರೇನ್‌ ಬಿಕ್ಕಟ್ಟಿಗೆ ಕಾರಣ ಏನು?: ಉಕ್ರೇನ್‌ ಪೂರ್ವದಲ್ಲಿ ರಷ್ಯಾ ಹಾಗೂ ಪಶ್ಚಿಮದಲ್ಲಿ ಯುರೋಪಿಯನ್‌ ಒಕ್ಕೂಟಗಳೊಂದಿಗೆ ಗಡಿಯನ್ನು ಹಂಚಿಕೊಳ್ಳುವುದರಿಂದ ಕಾರ್ಯತಂತ್ರದ ದೃಷ್ಟಿಯಿಂದ ಅತ್ಯಂತ ಪ್ರಮುಖ ಪ್ರದೇಶ. ರಷ್ಯಾದೊಂದಿಗೆ ಗಡಿ ಹಂಚಿಕೊಳ್ಳುವ ಪೂರ್ವ ಉಕ್ರೇನ್‌ ಭಾಗದಲ್ಲಿ ಬಹುಸಂಖ್ಯಾತರು ರಷ್ಯನ್‌ ಭಾಷೆಯನ್ನು ಮಾತನಾಡುವವರು. ಇದು ಮೊದಲು ರಷ್ಯಾದ ಭಾಗವಾಗಿದ್ದರಿಂದ ಜನರು ಇನ್ನೂ ರಷ್ಯನ್‌ ಸಂಸ್ಕೃತಿಯನ್ನು ಪಾಲಿಸುತ್ತಾರೆ.

ಅಲ್ಲದೆ ರಷ್ಯಾ ಪರ ನಿಲುವು ಉಳ್ಳವರಾಗಿದ್ದಾರೆ. ಅದೇ ಯುರೋಪಿಯನ್‌ ಒಕ್ಕೂಟದೊಂದಿಗೆ ಗಡಿ ಹಂಚಿಕೊಳ್ಳುವ ಪಶ್ಚಿಮ ಉಕ್ರೇನ್‌ ಭಾಗದ ಜನತೆ ಉಕ್ರೇನಿಯನ್‌ ಭಾಷೆ ಹಾಗೂ ಸಂಸ್ಕೃತಿಯನ್ನು ಪಾಲಿಸುತ್ತಾರೆ ಹಾಗೂ ಅಮೆರಿಕ ಸೇರಿದಂತೆ ಪಾಶ್ಚಿಮಾತ್ಯ ಯುರೋಪ್‌ ರಾಷ್ಟ್ರಗಳ ಪರ ಒಲವುಳ್ಳವರಾಗಿದ್ದಾರೆ. ಈ ಸಾಂಸ್ಕೃತಿಕ ಹಾಗೂ ಸೈದ್ಧಾಂತಿಕ ವಿಭಿನ್ನತೆಯೇ ಬಿಕ್ಕಟ್ಟಿಗೆ ಮೂಲ ಕಾರಣವಾಗಿದೆ.

ಡೋನ್‌ಬಾಸ್‌ ಪ್ರಾಂತ್ಯದ ಮೇಲೆ ರಷ್ಯಾ ಕಣ್ಣು: ರಷ್ಯಾದ ಗಡಿಗೆ ತಾಗಿಕೊಂಡಿರುವ ಡೋನೆಸ್ಕ್‌ ಹಾಗೂ ಲುಹಾಸ್ಕ್‌ಗಳು ಸೇರಿದ್ದ ಡೋನ್‌ಬಾಸ್ಕ್‌ ಪ್ರಾಂತ್ಯದಲ್ಲಿ ಬಹುಸಂಖ್ಯಾತರು ರಷ್ಯನ್‌ ಮಾತನಾಡುವವರು. ಉಕ್ರೇನ್‌ ಆಡಳಿತಗಾರರಿಂದ ನಿರ್ಲಕ್ಷಕ್ಕೊಳಗಾಗಿ ಇವರು ಪ್ರತ್ಯೇಕತಾ ಚಳವಳಿ ಆರಂಭಿಸಿದ್ದರು. ಇವರಿಗೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಶ್ರೀರಕ್ಷೆ ಇದೆ. ಡೋನ್‌ಬಾಸ್‌ ಪ್ರಮುಖ ಕೈಗಾರಿಕಾ ಉತ್ಪಾದನಾ ವಲಯ. ಹೀಗಾಗಿ ಅಲ್ಲಿ ಸ್ವತಂತ್ರ ಸರ್ಕಾರ ರಚನೆಯಾಗಬೇಕು ಎಂದು ರಷ್ಯಾ ಪಟ್ಟುಹಿಡಿದಿದೆ. 

ಆದರೆ, ಡೋನ್‌ಬಾಸ್‌ ಸ್ವತಂತ್ರವಾದರೆ ಅಲ್ಲಿ ರಷ್ಯಾ ಪರ ಜನರಿರುವ ಕಾರಣ ಅಲ್ಲಿನ ಸರ್ಕಾರವನ್ನು ತನ್ನ ಕೈಗೊಂಬೆಯಾಗಿಸಿಕೊಳ್ಳಬಹುದು. ಅಲ್ಲದೇ ಡೋನ್‌ಬಾಸ್‌ ವಲಯದ ಮೂಲಕವೇ ಇಡೀ ಉಕ್ರೇನ್‌ ಆಡಳಿತದಲ್ಲಿ ಹಸ್ತಕ್ಷೇಪಮಾಡಬಹುದು ಎಂಬ ಕಾರಣಕ್ಕೆ ಉಕ್ರೇನ್‌ ಒಪ್ಪಿಗೆ ನೀಡಿಲ್ಲ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವಿದೇಶಗಳಿಗೆ ಭಾರತೀಯ ಪ್ರತಿಭೆ : ನಷ್ಟವೋ ? ಪ್ರಭಾವವೋ?
ಮೋದಿ ಅವಧಿಯಲ್ಲಿ ವಾಕ್‌ ಸ್ವಾತಂತ್ರ್ಯಕ್ಕೆ ಕಡಿವಾಣ : ಸಲ್ಮಾನ್‌ ರಶ್ದಿ ಆರೋಪ