ಕನ್ನಡಿಗರಿಗೆ ದುಬೈನಲ್ಲಿ ಬೇಕಾದ ನೆರವು ನೀಡಲು ಸಿದ್ಧ: ಶಶಿಧರ ನಾಗರಾಜಪ್ಪ

Published : Apr 14, 2025, 10:31 AM ISTUpdated : Apr 14, 2025, 10:41 AM IST
ಕನ್ನಡಿಗರಿಗೆ ದುಬೈನಲ್ಲಿ ಬೇಕಾದ ನೆರವು ನೀಡಲು ಸಿದ್ಧ: ಶಶಿಧರ ನಾಗರಾಜಪ್ಪ

ಸಾರಾಂಶ

ದುಬೈನಲ್ಲಿ ವ್ಯವಹಾರ ನಡೆಸಲು ಮುಂದಾಗುವ ಸಾಧಕ ಕನ್ನಡಿಗರಿಗೆ ಎಲ್ಲ ರೀತಿಯ ನೆರವು ಸಹಕಾರ ನೀಡಲು ಸಿದ್ಧ ಇದ್ದೇನೆ ಎಂದು ದುಬೈ ಕರ್ನಾಟಕ ಸಂಘದ ಅಧ್ಯಕ್ಷ ಶಶಿಧರ ನಾಗರಾಜಪ್ಪ ಹೇಳಿದರು. 

ದುಬೈ (ಏ.14): ದುಬೈನಲ್ಲಿ ವ್ಯವಹಾರ ನಡೆಸಲು ಮುಂದಾಗುವ ಸಾಧಕ ಕನ್ನಡಿಗರಿಗೆ ಎಲ್ಲ ರೀತಿಯ ನೆರವು ಸಹಕಾರ ನೀಡಲು ಸಿದ್ಧ ಇದ್ದೇನೆ ಎಂದು ದುಬೈ ಕರ್ನಾಟಕ ಸಂಘದ ಅಧ್ಯಕ್ಷ ಶಶಿಧರ ನಾಗರಾಜಪ್ಪ ಹೇಳಿದರು. ದುಬೈನಲ್ಲಿ ಏಷ್ಯಾನೆಟ್ ಸುವರ್ಣ ನ್ಯೂಸ್ ಮತ್ತು ಕನ್ನಡಪ್ರಭವು ಆಯೋಜಿಸಿದ್ದ ದುಬೈ ಇಂಡಿಯಾ ಇಂಟರ್ನ್ಯಾಷನಲ್ ಐಕಾನಿಕ್ ಅವಾರ್ಡ್ಸ್ ಎರಡನೇ ಅವತರಣಿಕೆಯ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ಕನ್ನಡ ನೆಲ, ಜಲ - ಭಾಷೆ ಕುರಿತು ಅಭಿಮಾನ ಮಾತ್ರವಲ್ಲದೆ ಸಕ್ರಿಯ ಸಹಕಾರ ನೀಡುವ ಕನ್ನಡಪ್ರಭ ಮತ್ತು ಏಷ್ಯಾನೆಟ್ ಸುವರ್ಣ ನ್ಯೂಸ್ ಕಾರ್ಯ ಶ್ಲಾಘನೀಯ. ಪ್ರಶಸ್ತಿ ಸ್ವೀಕರಿಸುತ್ತಿರುವ ಒಬ್ಬೊಬ್ಬರೂ ಒಂದೊಂದು ಮಾಣಿಕ್ಯ ಇದ್ದಂತೆ. ನೀವುಗಳು ದುಬೈ ಪ್ರಶಸ್ತಿ ಹಾಗೂ ಪ್ರವಾಸ ಸದುಪಯೋಗಪಡಿಸಿಕೊಳ್ಳಿ ಎಂದೂ ಸಲಹೆ ನೀಡಿದರು. 11 ವರ್ಷಗಳ ಹಿಂದೆ ಇಲ್ಲಿ 40 ಮಕ್ಕಳಿಗೆ ಕನ್ನಡ ಕಲಿಸುವ ಮೂಲಕ ಕನ್ನಡ ಶಾಲೆ ಆರಂಭಿಸಲಾಯ್ತು. ಕಳೆದ ವರ್ಷ ಇದರ ದಶಮಾನೋತ್ಸವ ಆಚರಿಸಿದೆವು. 

ದುಬೈನಲ್ಲಿ 2ನೇ ಆವೃತ್ತಿಯ ದುಬೈ ಐಕಾನಿಕ್‌ ಅವಾರ್ಡ್‌ ಪ್ರದಾನ

11ನೇ ವರ್ಷವಾದ ಈ ವರ್ಷ ನಮ್ಮ ಕನ್ನಡ ಶಾಲೆಯಲ್ಲೀಗ 1250 ಮಕ್ಕಳಿಗೆ ಕನ್ನಡ ಕಲಿಸಲಾಗುತ್ತಿದೆ ಎಂದು ಸಂತಸ ಹಂಚಿಕೊಂಡರು. ಇಲ್ಲಿನ ನಮ್ಮ ಕನ್ನಡ ಕಾರ್ಯವನ್ನು ಇಡೀ ಕರ್ನಾಟಕಕ್ಕೆ ಮೊದಲು ಸಾರಿ ಹೇಳಿದ್ದು ಏಷ್ಯಾನೆಟ್ ಸುವರ್ಣ ನ್ಯೂಸ್ ಮತ್ತು ಕನ್ನಡಪ್ರಭ. ಇಂತಹ ಹಲವು ಕನ್ನಡ ಕಾರಣಗಳಿಗಾಗಿ ದುಬೈ ಜನ ರವಿ ಹೆಗಡೆ ಹಾಗೂ ಅಜಿತ್ ಹನಮಕ್ಕನವರ್ ಬಗ್ಗೆ ಅಭಿಮಾನ ಇರಿಸಿಕೊಂಡಿದೆ ಎಂದು ಶಶಿಧರ್ ನಾಗರಾಜಪ್ಪ ವಿವರಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮದ್ಯಪ್ರಿಯರಿಗೆ ಶಾಕ್.. ಮಧ್ಯಾಹ್ನ 2 ರಿಂದ 5 ರವರೆಗೆ ಮದ್ಯ ಮಾರಾಟ ಬಂದ್: ಏನಿದು ಥಾಯ್‌ ವಿಚಿತ್ರ ನಿಯಮ!
ಮುದ್ದಿನ ಶ್ವಾನಗಳಿಗಾಗಿ ಅನಿಮೇಟೆಡ್ ಸಿನಿಮಾ ಶೋ ಆಯೋಜಿಸಿದ ಥಿಯೇಟರ್: ರೆಡ್ ಕಾರ್ಪೆಟ್ ಹಾಸಿ ಸ್ವಾಗತ