ಯಾರ್ಯಾರು ಬದುಕ್ಬೇಕೋ ಅವರು 24 ಗಂಟೆಗಳಲ್ಲಿ ಊರು ಖಾಲಿ ಮಾಡಿ ಎಂದ ಇಸ್ರೇಲ್‌: ದಿಕ್ಕಾಪಾಲಾಗಿ ಓಡ್ತಿರೋ ಗಾಜಾ ಜನತೆ!

Published : Oct 13, 2023, 08:00 PM ISTUpdated : Oct 14, 2023, 10:26 AM IST
ಯಾರ್ಯಾರು ಬದುಕ್ಬೇಕೋ ಅವರು 24 ಗಂಟೆಗಳಲ್ಲಿ ಊರು ಖಾಲಿ ಮಾಡಿ ಎಂದ ಇಸ್ರೇಲ್‌: ದಿಕ್ಕಾಪಾಲಾಗಿ ಓಡ್ತಿರೋ ಗಾಜಾ ಜನತೆ!

ಸಾರಾಂಶ

ಗಾಜಾ ಪಟ್ಟಿಯ ಹಲವಾರು ನಿವಾಸಿಗಳು ಇಸ್ರೇಲ್‌ ಮಿಲಿಟರಿಯ 24-ಗಂಟೆಗಳ ಗಡುವಿನ ನಂತರ ತಮ್ಮ ಮನೆಗಳನ್ನು ತೊರೆಯಲು ಪ್ರಾರಂಭಿಸಿದ್ದಾರೆ.

ಜೆರುಸಲೇಂ (ಅಕ್ಟೋಬರ್ 13, 2023): ಹಮಾಸ್‌ ಉಗ್ರರ ದಾಳಿಗೆ ಇಸ್ರೇಲ್‌ ಯುದ್ಧ ಸಾರಿದೆ. ಈ ಯುದ್ಧ ಇನ್ನೂ ಮುಂದುವರಿದಿದ್ದು, ಉತ್ತರ ಗಾಜಾ ಜನತೆ ಅಲ್ಲಿಂದ ಖಾಲಿ ಮಾಡುವಂತೆ ಇಸ್ರೇಲ್‌ 24 ಗಂಟೆಗಳ ಡೆಡ್‌ಲೈನ್‌ ನೀಡಿದೆ. ಈ ಗಡುವಿಗೆ ಬೆದರಿದೆ ಗಾಜಾ ಪಟ್ಟಿಯ ಅನೇಕ ನಿವಾಸಿಗಳು ತಮ್ಮ ಮನೆಗಳನ್ನು ತೊರೆಯಲು ಪ್ರಾರಂಭಿಸಿದ್ದಾರೆ. ಸಾವಿರಾರು ಜನರು ಊರು ಖಾಲಿ ಮಾಡ್ತಿದ್ದಾರೆ ಎಂದು ತಿಳಿದುಬಂದಿದೆ.

ಗಾಜಾ ಪಟ್ಟಿಯ ಹಲವಾರು ನಿವಾಸಿಗಳು ಇಸ್ರೇಲ್‌ ಮಿಲಿಟರಿಯ 24-ಗಂಟೆಗಳ ಗಡುವಿನ ನಂತರ ತಮ್ಮ ಮನೆಗಳನ್ನು ತೊರೆಯಲು ಪ್ರಾರಂಭಿಸಿದ್ದಾರೆ. ಹೆಚ್ಚಿನ ಸಾವುನೋವುಗಳಿಗೆ ಅಪಾಯವನ್ನುಂಟುಮಾಡುವ ನಿರೀಕ್ಷಿತ ಭೂ ಸೇನೆಯ ಆಕ್ರಮಣಕ್ಕೆ ಮುಂಚಿತವಾಗಿ ದಕ್ಷಿಣಕ್ಕೆ ಸ್ಥಳಾಂತರಿಸಲು ಖಾಲಿ ಮಾಡ್ತಿದ್ದಾರೆ ಎನ್ನಲಾಗಿದೆ.

ಇದನ್ನು ಓದಿ: ಗಾಜಾಗೆ ಮತ್ತೊಂದು ದೊಡ್ಡ ಶಾಕ್ ನೀಡಿದ ಇಸ್ರೇಲ್‌: ನೀರಿಲ್ಲ, ಕರೆಂಟಿಲ್ಲ, ಇಂಧನವೂ ಇಲ್ಲ!

ಹಲವಾರು ಕಾರುಗಳಲ್ಲಿ ನಾಗರಿಕರು ಬಟ್ಟೆಗಳು ಮತ್ತು ಹಾಸಿಗೆಗಳನ್ನು ಕಾರಿನ ಮೇಲ್ಭಾಗದಲ್ಲಿ ಕಟ್ಟಿಕೊಂಡು ತಮ್ಮ ತವರು ಎಂದು ಕರೆದ ಸಣ್ಣ ಗಾಜಾ ಪಟ್ಟಿಯಿಂದ ಸ್ಥಳಾಂತರವಾಗ್ತಿದ್ದಾರೆ. ಈ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಸಹ ವೈರಲ್‌ ಆಗುತ್ತಿದೆ. ಉತ್ತರ ಗಾಜಾ ಜನತೆ ವಾಹನಗಳಲ್ಲಿ ತಮ್ಮ ಲಗೇಜ್‌ ಸಮೇತ ಖಾಲಿ ಮಾಡ್ತಿದ್ದಾರೆ. 

ಈ ಮಧ್ಯೆ ಪ್ಯಾಲೆಸ್ತೀನ್‌ ಗುಂಪು ಹಮಾಸ್‌ನ ವಿನಾಶಕಾರಿ ದಾಳಿಗೆ ಪ್ರತಿಕ್ರಿಯೆಯಾಗಿ ಮುಂಬರುವ ದಿನಗಳಲ್ಲಿ "ಗಮನಾರ್ಹವಾಗಿ" ಕಾರ್ಯನಿರ್ವಹಿಸಲು ತನ್ನ ಮಿಲಿಟರಿ ವಾಗ್ದಾನ ಮಾಡಿದ್ದರಿಂದ ಇಸ್ರೇಲ್ 300,000 ಮೀಸಲುದಾರರನ್ನು ಸಜ್ಜುಗೊಳಿಸಿದೆ ಮತ್ತು ಟ್ಯಾಂಕ್‌ಗಳನ್ನು ಸಂಗ್ರಹಿಸಿದೆ.

"ಗಾಜಾ ನಗರದ ನಾಗರಿಕರೇ, ನಿಮ್ಮ ಸ್ವಂತ ಸುರಕ್ಷತೆ ಮತ್ತು ನಿಮ್ಮ ಕುಟುಂಬಗಳ ಸುರಕ್ಷತೆಗಾಗಿ ದಕ್ಷಿಣಕ್ಕೆ ಸ್ಥಳಾಂತರಿಸಿ ಮತ್ತು ನಿಮ್ಮನ್ನು ಮಾನವ ಗುರಾಣಿಗಳಾಗಿ ಬಳಸುತ್ತಿರುವ ಹಮಾಸ್ ಭಯೋತ್ಪಾದಕರಿಂದ ದೂರವಿರಿ" ಎಂದು ಇಸ್ರೇಲ್‌ ಮಿಲಿಟರಿ ಹೇಳಿದೆ. ಹಾಗೂ, ಹಮಾಸ್ ಉಗ್ರರು ನಾಗರಿಕ ಕಟ್ಟಡಗಳಲ್ಲಿ ಅಡಗಿಕೊಂಡಿದೆ ಎಂದು ಆರೋಪಿಸಿದೆ. ಅಲ್ಲದೆ, ವಿಮಾನದ ಮೂಲಕ ಪತ್ರಗಳನ್ನು ಎಸೆಯುತ್ತಿರುವ ಇಸ್ರೇಲ್‌ ಮಿಲಿಟರಿ, ಜಾಗ ಖಾಲಿ ಮಾಡಿ ಎಂದು ಎಚ್ಚರಿಸಿದೆ.

ಇದನ್ನೂ ಓದಿ: ಹಮಾಸ್‌ ಬಗ್ಗೆ ಶಶಿ ತರೂರ್‌ ಹೇಳಿಕೆಗೆ ಇಸ್ರೇಲ್‌ ಮಾಜಿ ರಾಯಭಾರಿ ಆಘಾತ: ಕಾಂಗ್ರೆಸ್‌ ನಾಯಕನ ಸ್ಪಷ್ಟನೆ ಹೀಗಿದೆ..

ಇನ್ನೊಂದೆಡೆ, ಗಾಜಾ ನಾಗರಿಕರನ್ನು ತೊರೆಯಲು ಇಸ್ರೇಲ್‌ನ ಕರೆ "ವಿನಾಶಕಾರಿ ಮಾನವೀಯ ಪರಿಣಾಮಗಳಿಲ್ಲದೆ" ಸಂಭವಿಸುವುದಿಲ್ಲ ಎಂದು ವಿಶ್ವಸಂಸ್ಥೆ ಎಚ್ಚರಿಸಿದೆ.  ವಿಶ್ವ ಆರೋಗ್ಯ ಸಂಸ್ಥೆಯು ಸಹ ಕಳವಳ ವ್ಯಕ್ತಪಡಿಸಿದ್ದು, ಇಸ್ರೇಲ್‌ನ ಆದೇಶ, ಉತ್ತರ ಗಾಜಾದಿಂದ ದುರ್ಬಲ ಆಸ್ಪತ್ರೆ ರೋಗಿಗಳನ್ನು ಸ್ಥಳಾಂತರಿಸುವುದು ಅಸಾಧ್ಯವೆಂದು ಸ್ಥಳೀಯ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ. "ಆದ್ದರಿಂದ ಆ ಜನರನ್ನು ಸ್ಥಳಾಂತರಿಸುವುದು ಮರಣದಂಡನೆಯಾಗಿದೆ. ಆರೋಗ್ಯ ಕಾರ್ಯಕರ್ತರನ್ನು ಹಾಗೆ ಹೇಳುವುದು ಕ್ರೂರವಾಗಿದೆ" ಎಂದೂ ಅವರು ಹೇಳಿದರು.

1948 ರಲ್ಲಿ ಇಸ್ರೇಲ್‌ ಸ್ಥಾಪನೆಯಾದಾಗ ಅಲ್ಲಿಂದ ಪಲಾಯನ ಮಾಡಿದ ಅಥವಾ ಮನೆಗಳಿಂದ ಹೊರಹಾಕಲ್ಪಟ್ಟ ನಿರಾಶ್ರಿತರಿಂದ ಗಾಜಾ ನಗರದಲ್ಲಿ ಒಂದು ಮಿಲಿಯನ್‌ಗಿಂತಲೂ ಹೆಚ್ಚು ಜನಸಂಖ್ಯೆ ಆಗಿದೆ. ಶನಿವಾರ ಹಮಾಸ್ ದಾಳಿಯಲ್ಲಿ 1,300 ಕ್ಕೂ ಹೆಚ್ಚು ಇಸ್ರೇಲಿಗಳು ಮೃತಪಟ್ಟಿದ್ದರೆ, ಪ್ರತೀಕಾರದ ದಾಳಿಯಲ್ಲಿ ಸುಮಾರು 1,800 ಪ್ಯಾಲೆಸ್ತೀನ್‌ ಜನರು ಹತ್ಯೆಯಾಗಿದ್ದಾರೆ.

ಇದನ್ನೂ ಓದಿ: ಇಸ್ರೇಲ್‌ ಮೊದಲ ಗುರಿ; ಮುಂದೆ ಸಂಪೂರ್ಣ ಭೂಮಿಯಲ್ಲೇ ನಮ್ಮ ಕಾನೂನು ಇರುತ್ತೆ: ಹಮಾಸ್‌ ಕಮಾಂಡರ್‌ ಎಚ್ಚರಿಕೆ!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಅಮೆರಿಕಾದ ಬಳಿಕ ಈಗ ಮೆಕ್ಸಿಕೋದಿಂದಲೂ ಭಾರತದ ಮೇಲೆ ಶೇ.50 ಸುಂಕ: ಜನವರಿ 1ರಿಂದಲೇ ಹೊಸ ತೆರಿಗೆ ಜಾರಿ
ಎಐ ನಿರ್ಮಾತೃಗಳಿಗೆ 2025ರ ಟೈಮ್ ವರ್ಷದ ವ್ಯಕ್ತಿ ಗೌರವ!