
ಗ್ಲಾಸ್ಗೋ (ಮಾರ್ಚ್ 13, 2023): ದರೋಡೆ ಅಥವಾ ಕಳ್ಳತನ ಮಾಡೋರು ಬೇರೆ ಯಾವುದೋ ಊರಲ್ಲಿ ಅಥವಾ ತಮ್ಮ ಮನೆಯಿಂದ ದೂರದ ಏರಿಯಾದಲ್ಲಿ ಕೃತ್ಯವೆಸಗುವುದನ್ನ ಕೇಳಿರ್ತಿರಾ. ಆದರೆ, ಇಲ್ಲೊಬ್ಬರು ಆಸಾಮಿ ತಮ್ಮ ಸ್ವಂತ ಮಗನಿಗೇ ಚಾಕು ತೋರಿಸಿ ದರೋಡೆ ಮಾಡಲು ಹೋಗಿದ್ದಾರೆ ನೋಡಿ.. ಆದರೆ, ಈ ಘಟನೆ ನಮ್ಮ ದೇಶದಲ್ಲಲ್ಲ, ಸ್ಕಾಟ್ಲೆಂಡ್ನಲ್ಲಿ ವರದಿಯಾಗಿದೆ. ದಾರಿಯಲ್ಲಿ ಹೋಗುತ್ತಿರುವವನು ತನ್ನ ಮಗನೆಂದು ತಿಳಿಯದ ತಂದೆ ಅವನ ಕುತ್ತಿಗೆಗೆ ಚಾಕು ಇಟ್ಟು ಹಣ ನೀಡುವಂತೆ ಬೆದರಿಸಿದ್ದಾನೆ.
ಬಳಿಕ ಮಗನನ್ನು ಹತ್ತಿರದಲ್ಲೇ ಇದ್ದ ಎಟಿಎಂಗೆ ಕರೆದೊಯ್ದು ಹಣ ತೆಗೆಸಿದ್ದಾನೆ. ಹಣ ನೀಡುವಂತೆ ಕೇಳಿದಾಗ ತಂದೆಯ ಧ್ವನಿಯನ್ನು ಗುರುತಿಸಿದ ಮಗ, ತಪ್ಪಿಸಿಕೊಂಡು ಮನೆಯವರಿಗೆ ವಿಷಯ ತಿಳಿಸಿದ್ದಾನೆ. ಬಳಿಕ ಪೊಲೀಸರು ತಂದೆಯನ್ನು ಬಂಧಿಸಿದ್ದು, ದರೋಡೆ ಪ್ರಕರಣದಲ್ಲಿ ಜೈಲಿಗಟ್ಟಿದ್ದಾರೆ.
ಇದನ್ನು ಓದಿ: 5 ವರ್ಷದ ನಿರಂತರ ಸಮ್ಮತಿ ಲೈಂಗಿಕ ಕ್ರಿಯೆ ಅತ್ಯಾಚಾರವಲ್ಲ: ಕರ್ನಾಟಕ ಹೈಕೋರ್ಟ್
ಸ್ಕಾಟ್ಲೆಂಡ್ನ ಗ್ಲಾಸ್ಗೋದಲ್ಲಿ ಈ ವಿಚಿತ್ರ ಘಟನೆ ನಡೆದಿದೆ ಎಂದು ಬಿಬಿಸಿ ವರದಿ ಮಾಡಿದೆ. ಇನ್ನು, ತನ್ನ ಸ್ವಂತ ಮಗನ ಬಳಿಯೇ ದರೋಡೆ ಮಾಡುತ್ತಿದ್ದೇನೆ ಎಂದು ಸ್ವತ: ಆರೋಪಿ ತಂದೆಗೆ ತಿಳಿದಿರಲಿಲ್ಲವಂತೆ. ಕಳೆದ ವರ್ಷ ನವೆಂಬರ್ನಲ್ಲಿ ಗ್ಲಾಸ್ಗೋದ ಕ್ರಾನ್ಹಿಲ್ನಲ್ಲಿರುವ ಎಟಿಎಂನಲ್ಲಿ 45 ವರ್ಷದ ಮುಸುಕುಧಾರಿ ವ್ಯಕ್ತಿಯೊಬ್ಬ ಹದಿಹರೆಯದ ಹುಡುಗನನ್ನು ಗುರಿಯಾಗಿಸಿಕೊಂಡು ದರೋಡೆಗೆ ಯತ್ನಿಸಿದ ಘಟನೆ ಸಂಭವಿಸಿದೆ ಎಂದು ವರದಿಯಾಗಿದೆ.
17 ವರ್ಷದ ಪುತ್ರ 10 ಪೌಂಡ್ (ರೂ 986) ಹಿಂಪಡೆಯಲು ತನ್ನ ಮನೆಯ ಸಮೀಪವಿರುವ ಎಟಿಎಂ ಬಳಸಿದ್ದ. ಹಣವನ್ನು ಸಂಗ್ರಹಿಸಿದ ನಂತರ, ಹದಿಹರೆಯದವನು ಮುಖದ ಮೇಲೆ ಕಪ್ಪು ಬಟ್ಟೆಯನ್ನು ಧರಿಸಿದ್ದ ಮುಸುಕುಧಾರಿಯೊಬ್ಬರು ತನ್ನ ಬಳಿ ಬರುತ್ತಿರುವುದನ್ನು ನೋಡಿದರು. ಅವರು ತನ್ನ ಕಾರ್ಡ್ ಅನ್ನು ತನ್ನ ಜೇಬಿನಲ್ಲಿ ಇರಿಸಿ ಮತ್ತು ಯಂತ್ರದಿಂದ ಹಣವನ್ನು ತೆಗೆದುಕೊಳ್ಳುವಾಗ, ತನ್ನ ಬಳಿ ಬಂದರು. ತನ್ನ ಎಡಭಾಗದ ಮುಖದ ಬಳಿ ಏನನ್ನೋ ನೋಡಿದಂತಾಯ್ತು. ತನ್ನ ಮುಖದ ಮೇಲೆ ದೊಡ್ಡ ಕಿಚನ್ ಚಾಕು ಒತ್ತಿದಂತಾಯ್ತು ಎಂದೂ ಪುತ್ರ ಹೇಳಿರುವ ಬಗ್ಗೆ ಪ್ರಾಸಿಕ್ಯೂಟರ್ ಕ್ಯಾರಿ ಸ್ಟೀವನ್ಸ್ ಘಟನೆಯನ್ನು ವಿವರಿಸಿದ್ದಾರೆ.
ಇದನ್ನೂ ಓದಿ: Bengaluru: ಹೀಗೂ ಉಂಟು..! ಪತ್ನಿ ತಡವಾಗಿ ಏಳ್ತಾಳೆ ಎಂದು ಪತಿಯಿಂದ ಪೊಲೀಸರಿಗೆ ದೂರು
ಆಗ ಮುಸುಕುಧಾರಿ ಹಣ ಕೊಡುವಂತೆ ಒತ್ತಾಯಿಸಿದ್ದಾರೆ. ಆ ವೇಳೆಗೆ ಹದಿಹರೆಯದವ ತಕ್ಷಣವೇ ಧ್ವನಿಯಿಂದ ಅದು ತಂದೆ ಎಂದು ಗುರುತಿಸಿದರು ಮತ್ತು ದಿಗ್ಭ್ರಮೆಗೊಂಡಿದ್ದಾನೆ. ಅಲ್ಲದೆ, ''ನೀವು ತಮಾಷೆ ಮಾಡುತ್ತಿಲ್ವಾ? ಇದು ಯಾರೆಂದು ನಿಮಗೆ ತಿಳಿದಿದೆಯೇ?'' ಎಂದು ಆತ ತನ್ನ ತಂದೆಯನ್ನು ಕೇಳಿದ್ದಾನೆ. ತಾನು ಆ ಬಗ್ಗೆ ತಲೆಕೆಡಿಸಿಕೊಳ್ಳಲ್ಲ ಎಂದು ಅವರು ಉತ್ತರಿಸಿದ್ದು, ಬಳಿಕ ನೀವು ಏನು ಮಾಡುತ್ತಿದ್ದೀರಿ?" ಎಂದು ಮುಸುಕನ್ನು ತೆಗೆದು ಪ್ರಶ್ನೆ ಮಾಡಿದ್ದಾರೆ.
ಆದರೆ, "ನನ್ನನ್ನು ಕ್ಷಮಿಸಿ, ನಾನು ಹತಾಶನಾಗಿದ್ದೇನೆ" ಎಂದು ದರೋಡೆಕೋರ ಪ್ರಶ್ನೆ ಮಾಡಿದ್ದು, ಕೂಡಲೇ ಸ್ಥಳದಿಂದ ಓಡಿಹೋಗಿ ಪೊಲೀಸರಿಗೆ ತಿಳಿಸುವ ಮೊದಲು ಘಟನೆಯ ಬಗ್ಗೆ ಮಗ ತನ್ನ ಕುಟುಂಬಕ್ಕೆ ತಿಳಿಸಿದನು. ದರೋಡೆಕೋರನನ್ನು ನಂತರ ಬಂಧಿಸಲಾಯಿತು ಮತ್ತು ನಂತರ ಅವರು ತನ್ನ ಅಪರಾಧ ಒಪ್ಪಿಕೊಂಡಿದ್ದಾರೆ. ಅಲ್ಲದೆ, ಎಟಿಎಂ ಬಳಿ ಇರುವುದು ಅವನು (ನನ್ನ ಮಗ) ಎಂದು ನನಗೆ ತಿಳಿದಿರಲಿಲ್ಲ. ನಾನು ಆ ಕೃತ್ಯ ಮಾಡಿದ್ದೇನೆ. ನಾನು ಅದಕ್ಕಾಗಿ ಜೈಲಿನಲ್ಲಿ ಸಮಯ ಕಳೆಯುತ್ತೇನೆ’’ ಎಂದು ಅವರು ಮಗನನ್ನು ದರೋಡೆ ಮಾಡಲು ಯತ್ನಿಸಿದ ಆರೋಪವನ್ನು ಒಪ್ಪಿಕೊಂಡು ಈ ರೀತಿ ಹೇಳಿದ್ದಾರೆ.
ಇನ್ನು, ಆ ವ್ಯಕ್ತಿಗೆ 26 ತಿಂಗಳ ಶಿಕ್ಷೆ ವಿಧಿಸಿದ ಶೆರಿಫ್ ಆಂಡ್ರ್ಯೂ ಕ್ಯೂಬಿ, "ಇದು ಅತಿ ವಿರಳ ಕೃತ್ಯ" ಎಂದು ನ್ಯಾಯಾಲಯಕ್ಕೆ ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ