
ಇಸ್ಲಾಮಾಬಾದ್(ಅ.07): ಬೇಹುಗಾರಿಕೆ ನಡೆಸಿದ ಆರೋಪದ ಮೇಲೆ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಭಾರತೀಯ ಪ್ರಜೆ ಕುಲಭೂಷಣ್ ಜಾಧವ್ ಪರ ವಾದ ಮಂಡಿಸಲು ಪಾಕಿಸ್ತಾನ ವಕೀಲರು ನಿರಾಕರಿಸಿದ್ದಾರೆ.
ಕುಲಭೂಷಣ್ ಪರ ವಾದ ಮಂಡಿಸಲು ಭಾರತೀಯ ವಕೀಲರೊಬ್ಬರನ್ನು ಅಥವಾ ಇನ್ನೊಂದು ದೇಶದ ವಕೀಲರನ್ನು ನೇಮಿಸಲು ಅವಕಾಶ ನೀಡುವಂತೆ ಭಾರತ ಕೇಳಿಕೊಂಡಿತ್ತು. ಆದರೆ, ಈ ಕೋರಿಕೆಯನ್ನು ನಿರಾಕರಿಸಿದ್ದ ಇಸ್ಲಾಮಾಬಾದ್ ಹೈಕೋರ್ಟ್, ಮಖ್ದೂಮ್ ಅಲಿ ಖಾನ್ ಹಾಗೂ ಅಬಿದ್ ಹಸನ್ ಮಿಂಟೋ ಎಂಬ ಇಬ್ಬರು ಹಿರಿಯ ವಕೀಲರ ನೆರವು ಪಡೆಯುವಂತೆ ಸೂಚಿಸಿತ್ತು.
ಆದರೆ, ತಾನು ಬಹಳ ಹಿಂದೆಯೇ ನಿವೃತ್ತಿ ಆಗಿದ್ದು, ವಕೀಲಿಕೆ ಮಾಡುತ್ತಿಲ್ಲ ಎಂದು ಅಬಿದ್ ಹಸನ್ ಮಿಂಟೋ ನೆಪ ಹೇಳಿದರೆ, ಮಖ್ದೂಮ್ ಅಲಿ ಖಾನ್ ತಮಗೆ ಪೂರ್ವ ಯೋಜಿತ ಕೆಲಸಗಳು ಇವೆ ಎಂದು ಹೇಳಿ ಕುಲಭೂಷಣ್ ಪರ ವಾದ ಮಂಡನೆಯಿಂದ ತಪ್ಪಿಸಿಕೊಂಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ