
ಬೆಂಗಳೂರು(ಆ. 18) ಅಫ್ಘಾನಿಸ್ತಾನವನ್ನು ತಾಲೀಬಾನಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಷರಿಯಾ ಕಾನೂನಿನ ಮೂಲಕ ಆಡಳಿತ ಮಾಡುತ್ತೇವೆ ಎಂದು ಹೇಳಿದ್ದು
ನಾವು ಮೊದಲಿನಂತೆ ಇಲ್ಲ ಎನ್ನುತ್ತಲೂ ಇದ್ದಾರೆ.
ಎಲ್ಲ ರಾಷ್ಟ್ರಗಳು ಅಫ್ಘಾನ್ ನಲ್ಲಿ ಸಿಲುಕಿದ್ದ ತಮ್ಮ ದೇಶದ ಪ್ರಜೆಗಳನ್ನು ಸುರಕ್ಷಿತವಾಗಿ ಕರೆಸಿಕೊಳ್ಳುವ ಕೆಲಸ ಮಾಡಿವೆ. ಆಫ್ಘಾನ್ ನಿಂದ ಭಾರತೀಯ ಸೇನೆಗೆ ಸೇರಿದ
ಮೂರು ಭದ್ರತಾ ಶ್ವಾನಗಳನ್ನು ಸುರಕ್ಷಿತವಾಗಿ ನಮ್ಮ ದೇಶಕ್ಕೆ ಕರೆದುಕೊಂಡು ಬರಲಾಗಿದೆ.
ರೋಚಕ ಏರ್ ಲಿಫ್ಟ್ ಕಹಾನಿ.. ಹಿಂದಿನ ಹೀರೋ ಯಾರು?
ಕಾಬೂಲ್ ನಲ್ಲಿರುವ ಭಾರತೀಯ ರಾಯಭಾರ ಕಚೇರಿಯಲ್ಲಿ ಐಟಿಬಿಪಿ ಯೋಧರ ಜತೆ ಕಾರ್ಯ ನಿರ್ವಹಿಸುತ್ತಿದ್ದ ಶ್ವಾನಗಳು ದೇಶಕ್ಕೆ ಹಿಂದಿರುಗಿವೆ. ಸ್ನೈಫರ್
ಶ್ವಾನಗಳಾದ ಮಾಯಾ, ರೂಬಿ ಮತ್ತು ಬಾಬಿಯನ್ನು ಏರ್ ಲಿಫ್ಟ್ ಮುಖೇನ ಕರೆದುಕೊಂಡು ಬರಲಾಗಿದೆ.
30 ರಾಯಭಾರ ಕಚೇರಿಯ ಅಧಿಕಾರಿಗಳು, 21 ನಾಗರಿಕರು, 99 ಯೋಧರು ಮತ್ತು ಮೂರು ಶ್ವಾನಗಳಿದ್ದ ಭಾರತೀಯ ವಾಯುಸೇನೆ ಸಿ-17 ವಿಮಾನ ಗಜಿಯಾಬಾದ್
ವಿಮಾನ ನಿಲ್ಧಾಣಕ್ಕೆ ಮಂಗಳವಾರ ಬೆಳಗ್ಗೆ ಬಂದು ಇಳಿದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ