ಇಸ್ರೇಲ್ ರಕ್ಷಣಾ ಸಚಿವ ಗ್ಯಾಲಂಟ್ ಹಠಾತ್ ವಜಾ

Published : Nov 06, 2024, 11:37 AM IST
ಇಸ್ರೇಲ್ ರಕ್ಷಣಾ ಸಚಿವ ಗ್ಯಾಲಂಟ್ ಹಠಾತ್ ವಜಾ

ಸಾರಾಂಶ

ಇಸ್ರೇಲ್ ಪ್ರಧಾನಿ ನೆತನ್ಯಾಹು ರಕ್ಷಣಾ ಸಚಿವ ಗ್ಯಾಲಂಟ್‌ರನ್ನು ವಜಾಗೊಳಿಸಿದ್ದಾರೆ. 

ಇಸ್ರೇಲ್ ರಕ್ಷಣಾ ಸಚಿವ ಗ್ಯಾಲಂಟ್ ಹಠಾತ್ ವಜಾ
ಟೆಲ್ ಅವಿವ್: ಅತ್ಯಂತ ಅಚ್ಚರಿ ನಡೆಯೊಂದರಲ್ಲಿ ಇಸ್ರೇಲಿ ರಕ್ಷಣಾ ಸಚಿವ ಯೋವ್ ಗ್ಯಾಲಂಟ್‌ರನ್ನು ಪ್ರಧಾನಿ ಬೆಂಜ ಮಿನ್ ನೆತನ್ಯಾಹು ವಜಾ ಮಾಡಿದ್ದಾರೆ. ಗಾಜಾ ಯುದ್ಧ ನಡೆದಾಗಿನಿಂದ ಇಬ್ಬರ ನಡುವೆ ತಿಕ್ಕಾಟ ನಡೆದಿತ್ತು.

ಖಲಿಸ್ತಾನಿ ಬೆಂಬಲಿಗನಾಗಿದ್ದ ಕೆನಡಾ ಪೊಲೀಸ್‌ ಅಧಿಕಾರಿ ಅಮಾನತು

ಒಟ್ಟಾವಾ:  ಕೆನಡಾದ ಬ್ರಾಂಪ್ಟನ್‌ನಲ್ಲಿರುವ ಹಿಂದು ದೇವಸ್ಥಾನದ ಹೊರಗಡದ ಪ್ರತಿಭಟನೆಯಲ್ಲಿ ಖಾಲಿಸ್ತಾನಿ ಪರವಾಗಿ ಭಾಗವಹಿಸಿದ ಕೆನಡಾದ ಪೊಲೀಸ್ ಅಧಿಕಾರಿಯೊಬ್ಬರನ್ನು ಅಮಾನತುಗೊಳಿಸಲಾಗಿದೆ. ದೇವಸ್ಥಾನದ ಅಧಿಕಾರಿಗಳು ಹಾಗೂ ಭಾರತದ ರಾಯಭಾರಿಗಳು ಜಂಟಿಯಾಗಿ ಆಯೋಜಿಸಿದ್ದ ಕಾರ್ಯಕ್ರಮದ ವೇಳೆ ಖಲಿಸ್ತಾನಿ ಧ್ವಜ ಹಿಡಿದವರ ಗುಂಪು ಅಲ್ಲಿದ್ದ ಹಿಂದೂಗಳ ಮೇಲೆ ದಾಳಿ ನಡೆಸಿದ ವಿಡಿಯೋಗಳು ಹರಿದಾಡುತ್ತಿವೆ. ಇದಕ್ಕೆ ಪ್ರತಿಕ್ರಿಯಿಸಿರುವ ಕೆನಡಾ ಅಧಿಕಾರಿಗಳು, 'ಪೀಲ್ ನ ಪೊಲೀಸ್ ಸಿಬ್ಬಂದಿಯೊಬ್ಬರು ಕರ್ತವ್ಯದಲ್ಲಿ ಇರದ ವೇಳೆ ಪ್ರತಿಭಟನೆಯಲ್ಲಿ ಭಾಗವಹಿಸಿರುವ ವಿಡಿಯೋ ನಮ್ಮ ಗಮನಕ್ಕೂ ಬಂದಿದೆ. ಅವರನ್ನು ಸಾಮಾಜಿಕ ಭದ್ರತೆ ಹಾಗೂ ಪೊಲೀಸ್ ಕಾಯ್ದೆಯ ಪ್ರಕಾರ ಅಮಾನತುಗೊಳಿಸಲಾಗಿದೆ' ಎಂದಿದ್ದಾರೆ. 

ಹಿಂದೂಗಳ ಪ್ರತಿಭಟನೆ
ಬ್ರಾಂಪ್ಟನ್: ಭಾನುವಾರ ಇಲ್ಲಿನ ಹಿಂದೂ ಸಭಾ ದೇವಸ್ಥಾನದ ಮೇಲೆ ನಡೆದ ದಾಳಿಯನ್ನು ಖಂಡಿಸಿ ಹಿಂದೂಗಳು ಮಂಗಳವಾರ ದೇವಾಲಯದ ಎದುರು ಪ್ರತಿಭಟನೆ ನಡೆಸಿದ್ದಾರೆ. ಇದರ ನಡುವೆ, ಈ ಪ್ರತಿಭಟನೆಯನ್ನು ಕಾನೂನು ಬಾಹಿರ ಎಂದು ಕರೆದಿರುವ ಕೆನಡಾ ಪೊಲೀಸರು, ಇಂಥ ಪ್ರತಿಭಟನೆಗಳನ್ನು ಸಹಿಸುವುದಿಲ್ಲ. ಪ್ರತಿಭಟನೆ ವೇಳೆ ನರೆದಿದ್ದ 5 ಸಾವಿರಕ್ಕೂ ಅಧಿಕ ಭಾರತ ಮೂಲದ ಕೆನಡಿಯನ್ನರ ಕೈಯಲ್ಲಿ ಆಯುಧಗಳು ಪತ್ತೆಯಾಗಿವೆ ಎಂದಿದ್ದಾರೆ.

ತಾರತಮ್ಯ ನಿಲುವು: ವಿಕಿಪೀಡಿಯಾಗೆ ಕೇಂದ್ರ ತೀವ್ರ ತರಾಟೆ

ನವದೆಹಲಿ: ಉಚಿತ ಆನ್‌ಲೈನ್ ವಿಶ್ವಕೋಶ ಎಂದು ಗುರುತಿಸಿಕೊಂಡಿರುವ 'ಏಕಿಪೀಡಿಯಾ' ತಾರತಮ್ಯ ನೀತಿ ಅನುಸರಿಸುತ್ತಿದೆ ಎಂದು ಪ್ರಶ್ನೆ ಮಾಡಿರುವ ಕೇಂದ್ರ ಸರ್ಕಾರ, 'ನಿಮ್ಮನ್ನು ಮಾಹಿತಿ ಹಂಚಿಕೊಳ್ಳಲು ಇರುವ ವೇದಿಕೆ ಎಂಬುದರ ಬದಲಾಗಿ ಮುದ್ರಕ ಎಂದೇಕೆ ಪರಿಗಣಿಸಬಾರದು ಎಂಬುದಕ್ಕೆ ಉತ್ತರಿಸಿ' ಎಂದು ಸೂಚಿಸಿದೆ. ಈ ಕುರಿತು 'ವಿಕಿಪೀಡಿಯಾ'ಕ್ಕೆ ಪತ್ರ ಬರೆದಿರುವ ಕೇಂದ್ರ ವಾರ್ತಾ ಸಚಿವಾಲಯ, 'ವಿಕಿಪೀಡಿಯಾ ತಾರತಮ್ಯ ನಿಲುವು ಮತ್ತು ತಪ್ಪು ಮಾಹಿತಿಗಳನ್ನು ಪ್ರಸಾರ ಮಾಡುತ್ತಿದೆ ಎಂದು ಸಾಕಷ್ಟು ದೂರು ಬರುತ್ತಿದೆ. ಈ ಬಗ್ಗೆ ನೀವು ಉತ್ತರಿಸಬೇಕು' ಎಂದು ನೋಟಿಸ್‌ ಜಾರಿ ಮಾಡಿದೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವೃತ್ತಿಪರತೆ ಅಂತ್ಯಸಂಸ್ಕಾರ, ಪ್ರಶ್ನೆ ಕೇಳಿದ ಪತ್ರಕರ್ತೆಗೆ ಕಣ್ಣು ಹೊಡೆದ ಪಾಕಿಸ್ತಾನ ಸೇನಾ ಲೆ.ಜನರಲ್
ಜಪಾನ್‌ನಲ್ಲಿ 7.5 ತೀವ್ರತೆಯ ಭೂಕಂಪ: ಧರಣಿ ಗರ ಗರನೇ ತಿರುಗಿದ ಕ್ಷಣದ ವೀಡಿಯೋಗಳು ವೈರಲ್