ಭಾರತ ಮಹತ್ವದ ದೇಶ, ಆದರೆ ಚೀನಾ ರೀತಿ ಪ್ರತಿಸ್ಪರ್ಧಿ: ಪ್ರಧಾನಿ ಬೋರಿಸ್‌‌ಗೆ ಚಿಂತಕರ ಚಾವಡಿ ಎಚ್ಚರಿಕೆ!

Published : Jan 14, 2021, 08:02 AM IST
ಭಾರತ ಮಹತ್ವದ ದೇಶ, ಆದರೆ ಚೀನಾ ರೀತಿ ಪ್ರತಿಸ್ಪರ್ಧಿ: ಪ್ರಧಾನಿ ಬೋರಿಸ್‌‌ಗೆ ಚಿಂತಕರ ಚಾವಡಿ ಎಚ್ಚರಿಕೆ!

ಸಾರಾಂಶ

ಭಾರತ ಮಹತ್ವದ ದೇಶ, ಆದರೆ ಚೀನಾ ರೀತಿ ಪ್ರತಿಸ್ಪರ್ಧಿ| ಪ್ರಧಾನಿ ಬೋರಿಸ್‌ ಜಾನ್ಸನ್‌ಗೆ ಬ್ರಿಟನ್‌ ಚಿಂತಕರ ಚಾವಡಿ ಎಚ್ಚರಿಕೆ

ಲಂಡನ್(ಜ.14)‌: ಭಾರತ ಮತ್ತು ಬ್ರಿಟನ್‌ ದೇಶಗಳು ಪರಸ್ಪರ ವ್ಯಾಪಾರ, ರಾಜತಾಂತ್ರಿಕ ಸಂಬಂಧ ವೃದ್ಧಿಗೆ ನಾನಾ ಕ್ರಮಗಳನ್ನು ಕೈಗೊಳ್ಳುತ್ತಿರುವ ಹೊತ್ತಿನಲ್ಲೇ, ಭಾರತದ ಬಗ್ಗೆ ಎಚ್ಚರದಿಂದಿರುವಂತೆ ಬ್ರಿಟನ್‌ನ ಚಿಂತಕರ ಚಾವಡಿಯೊಂದು ಪ್ರಧಾನಿ ಬೋರಿಸ್‌ ಜಾನ್ಸನ್‌ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.

ರಾಯಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಇಂಟರ್‌ನ್ಯಾಷನಲ್‌ ಅಫೇ​ರ್‍ಸ್ನ ಛಾಥಮ್‌ ಹೌಸ್‌ ಎಂಬ ಚಿಂತಕರ ಚಾವಡಿ ‘ಗ್ಲೋಬಲ್‌ ಬ್ರಿಟನ್‌, ಗ್ಲೋಬಲ್‌ ಬ್ರೋಕರ್‌’ ಎಂಬ ವರದಿಯೊಂದನ್ನು ಬಿಡುಗಡೆ ಮಾಡಿದೆ. ಅದರಲ್ಲಿ ‘ಜನಸಂಖ್ಯೆಯಲ್ಲಿ ಶೀಘ್ರವೇ ವಿಶ್ವದ ನಂ.1 ಹಾದಿಯಲ್ಲಿರುವ, ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗುತ್ತಿರುವ, ರಕ್ಷಣಾ ಬಜೆಟ್‌ನಲ್ಲಿ ಮೊದಲಿಗನಾಗಿ ಹೊರಹೊಮ್ಮತ್ತಿರುವ ಭಾರತ, ಬ್ರಿಟನ್‌ ಪಾಲಿಗೆ ಅತ್ಯಂತ ಮಹತ್ವದ ದೇಶದ ಎಂಬುದನ್ನು ಒಪ್ಪಿಕೊಳ್ಳಲೇ ಇರಲಾಗದು. ಆದರೆ ಭಾರತದೊಂದಿಗಿನ ನೇರ ಸಂಬಂಧದಿಂದ ದೇಶಕ್ಕೆ ಆರ್ಥಿಕವಾಗಲೀ, ರಾಜತಾಂತ್ರಿಕವಾಗಲೀ ಬ್ರಿಟನ್‌ಗೆ ಲಾಭದ ಸಾಧ್ಯತೆ ಕಡಿಮೆ’ ಎಂದು ವರದಿ ಹೇಳಿದೆ. ಅಲ್ಲದೆ ಇಂಥದ್ದೇ ಹಿನ್ನೆಲೆ ಹೊಂದಿರುವ ಚೀನಾ, ಸೌದಿ ಅರೇಬಿಯಾ ಮತ್ತು ಟರ್ಕಿ ದೇಶಗಳ ಸಾಲಿಗೆ ಭಾರತವನ್ನೂ ಸೇರಿಸಲಾಗಿದೆ.

ಜಾನ್ಸನ್‌ ಸರ್ಕಾರ, ಭಾರತದೊಂದಿಗೆ ಹೆಚ್ಚಿನ ಆಳವಾದ ಸಂಬಂಧ ಹೊಂದುವ ಬಗ್ಗೆ ಹೆಚ್ಚು ವಾಸ್ತವಿಕವಾಗಿ ಚಿಂತಿಸಬೇಕು. ವಾಣಿಜ್ಯ ಉದ್ದೇಶದಲ್ಲಿ ಭಾರತ, ಬ್ರಿಟನ್‌ಗೆ ಮಹತ್ವದ್ದಿರಬಹುದು. ಆದರೆ ಆ ದೇಶ ನಮಗೆ ಪ್ರತಿಸ್ಪರ್ಧಿ ಕೂಡಾ ಹೌದು. ಹಲವು ಜಾಗತಿಕ ಗುರಿಗಳನ್ನು ಸಾಧಿಸುವ ಹಾದಿಯಲ್ಲಿ ಬ್ರಿಟನ್‌ ಪಾಲಿಗೆ ಭಾರತ ತೊಡಕಿನ ಪ್ರತಿಸ್ಪರ್ಧಿ ಕೂಡಾ ಹೌದು ಎಂದು ವರದಿ ಎಚ್ಚರಿಸಿದೆ.

ಭಾರತದ ಆಂತರಿಕ ರಾಜಕೀಯ ಅತ್ಯಂತ ಕ್ಲಿಷ್ಟವಾಗಿದ್ದು, ಮುಕ್ತ ಮಾರುಕಟ್ಟೆಮತ್ತು ವಿದೇಶಿ ಹೂಡಿಕೆಗೆ ತಡೆ ಒಡ್ಡುವ ಇತಿಹಾಸ ಹೊಂದಿದೆ. ಅಲ್ಲದೆ ಭಾರತದಲ್ಲಿ ಮಾನವ ಹಕ್ಕು ಮತ್ತು ನಾಗರಿಕ ಹಕ್ಕು ಸಂಘಟನೆಗಳ ದಮನ ನಡೆಯುತ್ತಿದೆ ಎಂದೆಲ್ಲಾ ವರದಿ ಹೇಳಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಭೂಕಂಪದ ಬೆನ್ನಲ್ಲೇ ಜಪಾನ್‌ನಲ್ಲಿ ಸುನಾಮಿ ಎಚ್ಚರಿಕೆ, ಭಾರತದ ಕರಾವಳಿ ಪ್ರದೇಶಕ್ಕಿದೆಯಾ ಆತಂಕ?
ಪ್ರದರ್ಶನದ ವೇಳೆ ಝೂನಲ್ಲಿ ಆರೈಕೆ ಮಾಡ್ತಿದ್ದವರ ಮೇಲೆಯೇ ಕರಡಿ ಅಟ್ಯಾಕ್: ವೀಡಿಯೋ