
ಸಿಂಗಾಪುರ[ಅ.11]: ವಿಶ್ವಾದ್ಯಂತ ಮಧುಮೇಹಿ ಕಾಯಿಲೆಗೆ ತುತ್ತಾಗಿರುವವರ ಸಂಖ್ಯೆ ಏರುಗತಿಯಲ್ಲೇ ಸಾಗುತ್ತಿರುವ ನಡುವೆಯೇ, ಇದನ್ನು ಗಂಭೀರವಾಗಿ ಪರಿಗಣಿಸಿದ ಸಿಂಗಾಪುರ ಸರ್ಕಾರ ಹೆಚ್ಚಿನ ಸಕ್ಕರೆ ಅಂಶವನ್ನೊಳಗೊಂಡ ತಂಪು ಪಾನೀಯಗಳ ಜಾಹೀರಾತು ಪ್ರದರ್ಶನಕ್ಕೆ ಗುರುವಾರ ನಿಷೇಧ ಹೇರಿದೆ. ಈ ಮೂಲಕ ಸಿಂಗಾಪುರ ಆರೋಗ್ಯಕರವಲ್ಲದ ತಂಪು ಪಾನೀಯಗಳ ಜಾಹೀರಾತುಗಳ ಮೇಲೆ ನಿಷೇಧ ಹೇರಿದ ವಿಶ್ವದ ಮೊದಲ ರಾಷ್ಟ್ರವಾಗಿದೆ.
ಎಲ್ಲ ತಂಪು ಪಾನೀಯ ಕಂಪನಿಗಳು ತಮ್ಮ ಉತ್ಪನ್ನಗಳ ಬಾಟಲ್ಗಳ ಮೇಲೆ ತಂಪು ಪಾನೀಯದಲ್ಲಿರುವ ಪ್ರೋಟಿನ್ ಹಾಗೂ ಸಕ್ಕರೆ ಅಂಶಗಳನ್ನು ನಮೂದಿಸಬೇಕು. ಪು ಪಾನೀಯಗಳ ಜಾಹೀರಾತುಗಳನ್ನು ಆನ್ಲೈನ್, ಮುದ್ರಣ, ವಿದ್ಯುನ್ಮಾನ ಸೇರಿದಂತೆ ಯಾವುದೇ ಮಾಧ್ಯಮಗಳಲ್ಲಿ ಪ್ರಕಟಿಸುವಂತಿಲ್ಲ. ತಂಪು ಪಾನೀಯಗಳ ಜಾಹೀರಾತು ಫಲಕಗಳನ್ನೂ ಪ್ರದರ್ಶಿಸುವಂತಿಲ್ಲ ಎಂದು ಸಿಂಗಾಪುರ ಆರೋಗ್ಯ ಸಚಿವಾಲಯ ಹೇಳಿದೆ.
ತಂಪು ಪಾನೀಯ ಗ್ರಾಹಕರ ಮೇಲಿನ ಜಾಹೀರಾತಿನ ಪ್ರಭಾವವನ್ನು ಕಡಿಮೆ ಮಾಡುವುದು ಈ ಕ್ರಮದ ಮುಖ್ಯ ಉದ್ದೇಶವಾಗಿದೆ. ಅಲ್ಲದೆ, ಇದು ಆರಂಭವಷ್ಟೇ ಮುಂದಿನ ದಿನಗಳಲ್ಲಿ ಸಕ್ಕರೆ ತೆರಿಗೆ ಅಥವಾ ಅದರ ಸಂಪೂರ್ಣ ನಿಷೇಧ ಸೇರಿದಂತೆ ಇನ್ನಿತರ ಕ್ರಮಗಳ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದು ಆರೋಗ್ಯ ಇಲಾಖೆ ಹೇಳಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ