ಅಯ್ಯೋ ಎಂಥಾ ಆಧ್ವಾನ! ಗೊಂದಲದಿಂದ ಬೇರೆ ಗರ್ಭಿಣಿಗೆ ಗರ್ಭಪಾತ ಮಾಡಿಸಿದ ವೈದ್ಯರು!

Published : Apr 03, 2024, 02:31 PM ISTUpdated : Apr 03, 2024, 02:32 PM IST
ಅಯ್ಯೋ ಎಂಥಾ ಆಧ್ವಾನ! ಗೊಂದಲದಿಂದ ಬೇರೆ ಗರ್ಭಿಣಿಗೆ ಗರ್ಭಪಾತ ಮಾಡಿಸಿದ ವೈದ್ಯರು!

ಸಾರಾಂಶ

ಈ ವೈದ್ಯರು ಗೊಂದಲದಲ್ಲಿ ಮಾಡಬೇಕಾದ ಮಹಿಳೆಗೆ ಬಿಟ್ಟು ಬೇರೆ ಗರ್ಭಿಣಿ ಮಹಿಳೆಗೆ ಗರ್ಭಪಾತ ಮಾಡಿಸಿ ಎಡವಟ್ಟು ಮಾಡಿದ್ದಾರೆ. 

ಇದೆಂಥಾ ಆಧ್ವಾನ ಸ್ವಾಮಿ, ಯಾರಿಗೋ ಮಾಡಬೇಕಾದ ಗರ್ಭಪಾತವನ್ನು ಮತ್ಯಾರಿಗೋ ಮಾಡಿ ವೈದ್ಯರು ಎಡವಟ್ಟು ಮಾಡಿದ್ದಾರೆ. 

ಜೆಕ್ ರಿಪಬ್ಲಿಕ್ ವೈದ್ಯರು ಪ್ರೇಗ್‌ನ ಆಸ್ಪತ್ರೆಯೊಂದರಲ್ಲಿ ತಪ್ಪಾದ ಗರ್ಭಿಣಿಗೆ ಗರ್ಭಪಾತ ಮಾಡಿದರು. ಪ್ರೇಗ್‌ನ ಬುಲೋವ್ಕಾ ವಿಶ್ವವಿದ್ಯಾಲಯದ ಆಸ್ಪತ್ರೆಯ ವೈದ್ಯರು ಮಾರ್ಚ್ 25 ರಂದು ನಾಲ್ಕು ತಿಂಗಳ ಗರ್ಭಿಣಿ ನಿರೀಕ್ಷಿತ ತಾಯಿಯ ಭ್ರೂಣವನ್ನು ತಪ್ಪಾಗಿ ಅಂತ್ಯಗೊಳಿಸಿದ್ದಾರೆ.

ಸಾಮಾನ್ಯ ತಪಾಸಣೆಗಾಗಿ ಆಸ್ಪತ್ರೆಗೆ ಆಗಮಿಸಿದ ಮಹಿಳೆಯನ್ನು ಆಸ್ಪತ್ರೆಯು ಗರ್ಭಪಾತಕ್ಕೆ ಒಳಗಾಗುವ ರೋಗಿ ಎಂದು ತಪ್ಪಾಗಿ ಪರಿಗಣಿಸಿದೆ. ವಿದೇಶಿ ಮಹಿಳೆ ಮತ್ತು ಆಸ್ಪತ್ರೆಯ ಸಿಬ್ಬಂದಿ ನಡುವಿನ ಭಾಷೆಯ ತಡೆಯಿಂದಾಗಿ ಈ ಪ್ರಮಾದ ಸಂಭವಿಸಿದೆ ಎಂದು ವರದಿಯಾಗಿದೆ. ರೋಗಿಯೊಂದಿಗೆ ಸಂವಹನ ನಡೆಸಲು ಆಸ್ಪತ್ರೆಯ ಸಿಬ್ಬಂದಿಗೆ ಕಾಮನ್ ಭಾಷೆ ತಿಳಿದಿರಲಿಲ್ಲ. ಆದ್ದರಿಂದ ಇವರೇ ಅವರು ಎಂದುಕೊಂಡು ಇಂಥದೊಂದು ಎಡವಟ್ಟು ಮಾಡಿದ್ದಾರೆ ವೈದ್ಯರು. 


 

ಅನೇಕ ವೈದ್ಯರು ಮತ್ತು ದಾದಿಯರು ಭಾಗಿಯಾಗಿದ್ದರೂ, ತಪ್ಪು ಗಮನಕ್ಕೆ ಬಂದಿಲ್ಲ ಮತ್ತು ಈಗ ಅಮಾನತುಗೊಂಡಿರುವ ಆಸ್ಪತ್ರೆಯ ಸಿಬ್ಬಂದಿಯು ಕಾನೂನು ಸಮಸ್ಯೆ ಎದುರಿಸುತ್ತಿದ್ದಾರೆ. ವೈದ್ಯರು  ಗರ್ಭಪಾತದ ವಿಧಾನದ ಮೂಲಕ ಆರೋಗ್ಯವಂತ ಗರ್ಭಿಣಿಯ ಕನಸನ್ನು ನುಚ್ಚು ನೂರು ಮಾಡಿದ್ದಾರೆ.

ಘಟನೆ ಸಂಬಂಧ ಆಸ್ಪತ್ರೆ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದ್ದು, ನಿರ್ಲಕ್ಷ್ಯದ ಕಾರಣಕ್ಕಾಗಿ ಆಸ್ಪತ್ರೆ ತನಿಖೆ ನಡೆಸುತ್ತಿದೆ.

ಪೋಲೀಸ್ ಇಷ್ಟು ಚೆನಾಗಿದ್ರೆ ಅರೆಸ್ಟ್ ಆದ್ರೂ ಅಡ್ಡಿಲ್ಲ ಅಂತಾರೆ ಪಡ್ಡೆಗಳು! ಸೋಷ್ಯಲ್ ಮೀಡಿಯಾ ಸ್ಟಾರ್ ಈ ಐಪಿಎಸ್ ಅನ್ಶಿಕಾ

ಜೆಕ್ ಆರೋಗ್ಯ ಸಚಿವಾಲಯವು ಘಟನೆಯನ್ನು 'ಕ್ಷಮಿಸಲಾಗದ ಮಾನವ ದೋಷ' ಎಂದು ಉಲ್ಲೇಖಿಸಿದೆ ಮತ್ತು ಘಟನೆಯ ಬಗ್ಗೆ ಸಂತ್ರಸ್ತೆ ಮತ್ತು ಅವರ ಕುಟುಂಬಕ್ಕೆ ವಿಷಾದ ವ್ಯಕ್ತಪಡಿಸಿದೆ.
ಮಾಧ್ಯಮ ವರದಿಯ ಪ್ರಕಾರ, ಇಬ್ಬರೂ ರೋಗಿಗಳು ವಿದೇಶಿ ಪ್ರಜೆಗಳು, ಆದರೆ ದೇಶದ ಖಾಯಂ ನಿವಾಸಿಗಳು ಎಂದು ವರದಿಯಾಗಿದೆ.

ಜೆಕ್ ರಿಪಬ್ಲಿಕ್ ನಲ್ಲಿ ಗರ್ಭಪಾತವನ್ನು ಯಾವುದೇ ಕಾರಣಕ್ಕಾಗಿ 12 ವಾರಗಳವರೆಗೆ ಮತ್ತು ವೈದ್ಯಕೀಯ ಕಾರಣಗಳಿಗಾಗಿ 24 ವಾರಗಳವರೆಗೆ ನಡೆಸಬಹುದು. ಜೆಕ್ ರಿಪಬ್ಲಿಕ್‌ನಲ್ಲಿ  ಗರ್ಭಪಾತವನ್ನು ಪಡೆಯುವ ಅವಕಾಶವು ಕೆಲವು ಜನರು ಗರ್ಭಧಾರಣೆಯನ್ನು ಅಂತ್ಯಗೊಳಿಸಲು ವಿದೇಶದಿಂದ ಪ್ರೇಗ್‌ಗೆ ಪ್ರಯಾಣಿಸಲು ಒಂದು ಕಾರಣವಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವಿಯೆಟ್ನಾಂ ಇಂಡಿಯಾ ಇಂಟರ್​ನ್ಯಾಷನಲ್ ಬ್ಯುಸಿನೆಸ್​ ಕಾನ್​ಕ್ಲೇವ್: ಕರುನಾಡಿನ 29 ಗಣ್ಯರಿಗೆ ಪ್ರಶಸ್ತಿ ಪ್ರದಾನ
ವಿದೇಶಗಳಿಗೆ ಭಾರತೀಯ ಪ್ರತಿಭೆ : ನಷ್ಟವೋ ? ಪ್ರಭಾವವೋ?