ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡಿದ ರಾಜನಾಥ್ ಸಿಂಗ್| ಮೈತ್ರಿ ದಿನದ ಅಂಗವಾಗಿ ತವಾಂಗ್ಗೆ ಭೇಟಿ ನೀಡಿದ ರಾಜನಾಥ್| ರಾಜನಾಥ್ ಅರುಣಾಚಲ ಭೇಟಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಚೀನಾ| ಭಾರತದ ನಡವಳಿಕೆಯನ್ನು ಒಪ್ಪಿಕೊಳ್ಳಲು ಸಿದ್ಧವಿಲ್ಲ ಎಂದ ಚೀನಾ| ರಾಜನಾಥ್ ಭೇಟಿ ಖಂಡನೀಯ ಎಂದ ಚೀನಾ ವಿದೇಶಾಂಗ ವಕ್ತಾರ ಗೆಂಗ್ ಶುವಾಂಗ್|
ಬಿಜಿಂಗ್(ನ.16): ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡಿದ್ದಕ್ಕೆ ಚೀನಾ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
Arunachal Pradesh: Defence Minister Rajnath Singh at Indian Army's forward post at BumLa along the Line of Actual Control. He says, "I got an opportunity to meet&interact with the soldiers posted here who have told me that there is no tension here along Line of Actual Control". pic.twitter.com/ZXXq8hT8II
— ANI (@ANI)ಮೈತ್ರಿ ದಿನದ ಅಂಗವಾಗಿ ರಾಜನಾಥ್ ಸಿಂಗ್, ಚೀನಾ ಗಡಿ ಸಮೀಪದ ತವಾಂಗ್ಗೆ ಭೇಟಿ ನೀಡಿದ್ದರು. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಚೀನಾ, ವಿವಾದಿತ ಪ್ರದೇಶದಲ್ಲಿ ಭಾರತದ ಚಟುವಟಿಕೆ ಖಂಡನಾರ್ಹ ಎಂದು ಕಿಡಿಕಾರಿದೆ.
ನಿಜಕ್ಕೂ ವಿಶೇಷ: ಪ್ರವಾಸಿಗರಿಗೆ ಮುಕ್ತಗೊಂಡ ಸಿಯಾಚಿನ್ ನಿರ್ಗಲ್ಲು ಪ್ರದೇಶ!
ಅರುಣಾಚಲ ಪ್ರದೇಶಕ್ಕೆ ಸಂಬಂಧಿಸಿದಂತೆ ಭಾರತದ ನಡವಳಿಕೆಯನ್ನು ಒಪ್ಪಿಕೊಳ್ಳಲು ಚೀನಾ ತಯಾರಿಲ್ಲ ಎಂದು ಚೀನಾ ವಿದೇಶಾಂಗ ವಕ್ತಾರ ಗೆಂಗ್ ಶುವಾಂಗ್ ಅಸಮಾಧಾನ ಹೊರಹಾಕಿದ್ದಾರೆ.
ಭಾರತದ ಈಶಾನ್ಯ ರಾಜ್ಯಗಳ ಭಾಗವಾದ ಅರುಣಾಚಲ ಪ್ರದೇಶ, ದಕ್ಷಿಣ ಭಾಗದ ಟಿಬೆಟ್ನ ಭಾಗವೂ ಹೌದು. ಈ ಸಂಬಂಧ ಉಂಟಾಗಿರುವ ಗಡಿ ವಿವಾದದ ಬಗ್ಗೆ ಈವರೆಗೆ ಉಭಯ ದೇಶಗಳ ನಡುವೆ 21 ಸುತ್ತು ಮಾತುಕತೆಗಳು ನಡೆದಿದೆ.
Visited the forward areas in Bumla near Tawang, Arunachal Pradesh. Also, had a wonderful interaction with the brave jawans and officers of the Indian Army.
The Army is securing India’s frontiers even in the most challenging environment.
भारत के इन वीर सपूतों पर हमें नाज़ है। pic.twitter.com/Fhqm5CoCpK
ಎರಡೂ ದೇಶಗಳ ನಡುವೆ ಸುಮಾರು 3488 ಕಿಮೀ ಉದ್ದದ ಗಡಿ ಭಾಗ ವಿವಾದದಲ್ಲಿದ್ದು, ಪ್ರಧಾನಿಯೂ ಸೇರಿದಂತೆ ಭಾರತದ ಯಾವುದೇ ನಾಯಕ ಅಥವಾ ಅಧಿಕಾರಿಗಳು ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡಿದಾಗ ಚೀನಾ ಕ್ಯಾತೆ ತೆಗೆಯುವುದು ಸಾಮಾನ್ಯ.