
ಕಾಠ್ಮಂಡು (ಮಾರ್ಚ್ 28, 2023): ಪಂಜಾಬ್ ಪೊಲೀಸರ ನಿಗಾದಿಂದ ತಪ್ಪಿಸಿಕೊಳ್ಳಲು ಯಶಸ್ವಿಯಾಗಿರುವ ಖಲಿಸ್ತಾನಿ ಪ್ರತ್ಯೇಕ ದೇಶದ ಪರ ಹೋರಾಟಗಾರ ಅಮೃತ್ಪಾಲ್ ಸಿಂಗ್ ಈಗಾಗಲೇ ಭಾರತದಿಂದ ಪರಾರಿಯಾಗಿ ನೇಪಾಳದಲ್ಲಿ ಅಡಗಿದ್ದಾನೆ ಎಂಬ ವಿಷಯ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಆತನನ್ನು ಯಾವುದೇ ಕಾರಣಕ್ಕೂ ದೇಶ ಬಿಡಲು ಅವಕಾಶ ನೀಡದಂತೆ ನೇಪಾಳ ಸರ್ಕಾರಕ್ಕೆ ಭಾರತ ಮನವಿ ಮಾಡಿದೆ.
‘ಮಾರ್ಚ್ 18ರಂದು ಪೊಲೀಸ್ ದಾಳಿ ವೇಳೆ ತಪ್ಪಿಸಿಕೊಂಡ ಅಮೃತ್ಪಾಲ್ ಸಿಂಗ್ (Amritpal Singh) ಸದ್ಯ ನೇಪಾಳದಲ್ಲಿ (Nepal) ತಲೆಮರೆಸಿಕೊಂಡಿರುವ ಶಂಕೆ ಇದೆ. ಈತನ ಬಳಿ ಭಾರತ (India) ಮತ್ತು ಇತರೆ ನಕಲಿ ಪಾಸ್ಪೋರ್ಟ್ ಇದೆ. ಇದನ್ನು ಬಳಸಿಕೊಂಡು ಆತ ಯಾವುದೇ ದೇಶಕ್ಕೆ ಪರಾರಿಯಾಗಲು ಯತ್ನಿಸುವ ಸಾಧ್ಯತೆ ಇದೆ. ಹೀಗಾಗಿ ಆತ ಎಲ್ಲೇ ಪತ್ತೆಯಾದರೂ ಆತನನ್ನು ಬಂಧಿಸಬೇಕು. ಮತ್ತೊಂದು ವಿದೇಶಕ್ಕೆ ತೆರಳಲು ಅವಕಾಶ ನೀಡಬಾರದು’ ಎಂದು ನೇಪಾಳದಲ್ಲಿನ ಭಾರತೀಯ ರಾಯಭಾರ ಕಚೇರಿ (Indian Embassy Office) ನೇಪಾಳ ಸರ್ಕಾರಕ್ಕೆ (Nepal Government) ಮನವಿ ಮಾಡಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಕಾಠ್ಮಂಡು ಪೋಸ್ಟ್ ಪತ್ರಿಕೆ ವರದಿ ಮಾಡಿದೆ.
ಇದನ್ನು ಓದಿ: ಇವಳೇ ನೋಡಿ ಖಲಿಸ್ತಾನಿ ಉಗ್ರನ ಎನ್ಆರ್ಐ ಪತ್ನಿ: ವಿದೇಶಿ ಹಣದ ಮೂಲದ ಬಗ್ಗೆಯೂ ಪಂಜಾಬ್ ಪೊಲೀಸರ ವಿಚಾರಣೆ
ಈ ಮಾಹಿತಿ ಮತ್ತು ಅಮೃತ್ಪಾಲ್ ಸಿಂಗ್ನ ವೈಯಕ್ತಿಕ ದಾಖಲೆಗಳನ್ನು ಸಂಬಂಧಿತ ಸಂಸ್ಥೆಗಳು, ಹೋಟೆಲ್ಗಳು, ವಿಮಾನಯಾನ ಸಂಸ್ಥೆಗಳಿಗೆ ರವಾನಿಸಲಾಗಿದೆ.
ಇದನ್ನೂ ಓದಿ: ಅಫೇರ್, ಬ್ಲ್ಯಾಕ್ಮೇಲ್: ಹನಿಮೂನ್ಗೆ ಹೋಗೋಣ ಎಂದು ಚಾಟ್ ಮಾಡಿದ್ದ ವಿವಾಹಿತ ಅಮೃತ್ಪಾಲ್ ಸಿಂಗ್..!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ