9/11 Terror Attack: ಅತ್ಯಂತ ದುರ್ಬಲ ಸ್ಥಿತಿಯಲ್ಲೂ ನಮ್ಮ ಒಗ್ಗಟ್ಟೇ ನಮ್ಮ ಶಕ್ತಿ: ಬೈಡೆನ್

Published : Sep 11, 2021, 09:26 AM ISTUpdated : Sep 11, 2021, 09:45 AM IST
9/11 Terror Attack: ಅತ್ಯಂತ ದುರ್ಬಲ ಸ್ಥಿತಿಯಲ್ಲೂ ನಮ್ಮ ಒಗ್ಗಟ್ಟೇ ನಮ್ಮ ಶಕ್ತಿ: ಬೈಡೆನ್

ಸಾರಾಂಶ

* 9/11, ಭೀಕರ ಭಯೋತ್ಪಾದಕ ದಾಳಿಗೆ 20 ವರ್ಷ * ಭಯೋತ್ಪಾದಕ ದಾಳಿ ನೆನಪಿಸಿಕೊಂಡು ಅಧ್ಯಕ್ಷ ಬೈಡೆನ್ ಮಾತು * ದುರ್ಬಲ ಪರಿಸ್ಥಿತಿಯಲ್ಲೂ ನಮ್ಮ ಒಗ್ಗಟ್ಟೇ ನಮ್ಮ ಬಲ ಎಂದ ಬೈಡೆನ್

ವಾಷಿಂಗ್ಟನ್(ಸೆ.11): 9/11, ಭೀಕರ ದಾಳಿ ನಡೆದು ಇಂದಿಗೆ 20 ವರ್ಷ. ಹೀಗಿರುವಾಗ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಇಪ್ಪತ್ತು ವರ್ಷಗಳ ಹಿಂದೆ ದಾಳಿಯಿಂದ ಪ್ರಾಣ ಕಳೆದುಕೊಂಡ 2,977 ಮಂದಿಯನ್ನು ನೆನಪಿಸಿಕೊಂಡರು. ಇದೇ ವೇಳೆ ವೀಡಿಯೋ ಮೂಲಕ ಸಂದೇಶ ಕೊಟ್ಟಿರುವ ಅಮೆರಿಕ ಅಧ್ಯಕ್ಷ ಬೈಡೆನ್, "ಸೆಪ್ಟೆಂಬರ್ 11, 2009 ರಿಂದ 20 ವರ್ಷಗಳ ನಂತರ, ದಾಳಿಯಲ್ಲಿ ಕಳೆದುಕೊಂಡ 2,977 ಜನರನ್ನು ನಾವು ನೆನಪಿಸಿಕೊಳ್ಳುತ್ತೇವೆ. ಅಲ್ಲದೇ ತಮ್ಮ ಜೀವವನ್ನು ಪಣಕ್ಕಿಟ್ಟವರನ್ನೂ ಗೌರವಿಸುತ್ತೇವೆ. ದಾಳಿ ಬಳಿಕದ ದಿನಗಳಲ್ಲಿ ಏಕತೆಯೇ ನಮ್ಮ ದೊಡ್ಡ ಶಕ್ತಿ ಎಂದು ನೋಡಿದ್ದೇವೆ. ನಾವು ಯಾರೆಂದು ಇದೇ ತೋರಿಸಿಕೊಡುತ್ತದೆ. ಹಾಗೂ ನಮ್ಮ ಈ ಶಕ್ತಿಯನ್ನು ನಾವೆಂದಿಗೂ ಮರೆಯಬಾರದು ಎಂದಿದ್ದಾರೆ.

ಶ್ವೇತಭವನದಿಂದ ಜಾರಿಗೊಳಿಸಲಾದ ಈ ಆರು ನಿಮಿಷಗಳ ಸಂದೇಶದಲ್ಲಿ "ನಮ್ಮ ಅತ್ಯಂತ ದುರ್ಬಲ ಪರಿಸ್ಥಿತಿಯಲ್ಲೂ ನಮ್ಮ ಏಕತೆಯೇ ನಮ್ಮನ್ನು ಮಾನವರನ್ನಾಗಿ ಮಾಡುತ್ತದೆ, ಅಮೆರಿಕದ ಹೋರಾಟದಲ್ಲೂ ಇದೇ ಒಗ್ಗಟ್ಟು ನ್ಮ ಬಲ ಎಂಬುವುದು ಸೆಪ್ಟೆಂಬರ್ 11 ನಮಗೆ ಕಲಿಸಿದೆ ಎಂದು ಬೈಡೆನ್ ತಿಳಿಸಿದ್ದಾರೆ. ಇದೇ ವೇಳೆ ದಾಳಿ ವೇಳೆ ತಮ್ಮ ಪ್ರಾಣ ಪಣಕ್ಕಿಟ್ಟವರನ್ನೂ ಬೈಡೆನ್ ನೆನಪಿಸಿಕೊಂಡಿದ್ದಾರೆ.

ನಾವು ಅಗ್ನಿಶಾಮಕ ಸಿಬ್ಬಂದಿ, ಪೊಲೀಸ್ ಅಧಿಕಾರಿಗಳು, ಇಎಂಟಿಗಳು ಮತ್ತು ನಿರ್ಮಾಣ ಕಾರ್ಮಿಕರು, ವೈದ್ಯರು ಮತ್ತು ದಾದಿಯರು, ಸೇವಾ ಸದಸ್ಯರು ಮತ್ತು ರಕ್ಷಣೆ, ಚೇತರಿಕೆ ಮತ್ತು ಪುನರ್ನಿರ್ಮಾಣಕ್ಕಾಗಿ ತಮ್ಮ ಸರ್ವಸ್ವವನ್ನು ನೀಡಿದ ಎಲ್ಲರನ್ನು ಗೌರವಿಸುತ್ತೇವೆ" ಎಂದೂ ಅಮೆರಿಕ ಅಧ್ಯಕ್ಷ ತಿಳಿಸಿದ್ದಾರೆ.

ಸೆಪ್ಟೆಂಬರ್ 11, 2001 ರಂದು, ಅಮೆರಿಕ ತನ್ನ ಇತಿಹಾಸದಲ್ಲಿ ಅತ್ಯಂತ ಭೀಕರ ಭಯೋತ್ಪಾದಕ ದಾಳಿಯನ್ನು ಎದುರಿಸಿತು. ಭಯೋತ್ಪಾದಕರ ದಾಳಿಯಲ್ಲಿ 3,000 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಅಲ್ ಖೈದಾ ಭಯೋತ್ಪಾದಕರು ವಿಮಾನಗಳನ್ನು ಅಪಹರಿಸಿದ 102 ನಿಮಿಷಗಳಲ್ಲಿ, ನ್ಯೂಯಾರ್ಕ್‌ನ ವಿಶ್ವ ವ್ಯಾಪಾರ ಕೇಂದ್ರದ ಎರಡೂ ಗೋಪುರಗಳನ್ನು ಧ್ವಂಸಗೊಳಿಸಿದ್ದರು. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಪಾರ್ಕ್‌ನಲ್ಲಿ ವಾಕಿಂಗ್ ಹೋದಾಗ ತುಪುಕ್ ಎಂದು ಉಗುಳಿದ ವೃದ್ಧನಿಗೆ 26 ಸಾವಿರ ರೂ ದಂಡ
ಭಾರತೀಯರ ಎಚ್‌-1ಬಿ ವೀಸಾ ಸಂದರ್ಶನ ದಿಢೀರ್‌ ರದ್ದು : ಕಿಡಿ