ಈ ಪ್ರದೇಶದಲ್ಲಿ ಮಾರಣಾಂತಿಕ ಜನಾಂಗೀಯ ಹಿಂಸಾಚಾರವು ಸಾಮಾನ್ಯವಾಗಿದ್ದು, ಅಲ್ಲಿ ನೆರೆಯ ವಾರ್ರಾಪ್ ರಾಜ್ಯದ ಟ್ವಿಕ್ ಡಿಂಕಾ ಬುಡಕಟ್ಟು ಸದಸ್ಯರು ಗಡಿಯಲ್ಲಿ ನೆಲೆಗೊಂಡಿರುವ ಅನೀತ್ ಪ್ರದೇಶಕ್ಕಾಗಿ ಅಬಿಯ ಎನ್ಗೊಕ್ ಡಿಂಕಾ ಜನಾಂಗೀಯ ಗುಂಪಿನೊಂದಿಗೆ ಭೂ ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ.
ನವದೆಹಲಿ (ಜನವರಿ 29, 2024): ಸುಡಾನ್ ಮತ್ತು ದಕ್ಷಿಣ ಸುಡಾನ್ ಎರಡರಿಂದಲೂ ಹಕ್ಕು ಸಾಧಿಸಿದ ತೈಲ-ಸಮೃದ್ಧ ಪ್ರದೇಶವಾದ ಅಬೈಯಲ್ಲಿ ಬಂದೂಕುಧಾರಿಗಳು ಗ್ರಾಮಸ್ಥರ ಮೇಲೆ ದಾಳಿ ನಡೆಸಿದ್ದಾರೆ. ಈ ಪೈಕಿ ವಿಶ್ವಸಂಸ್ಥೆಯ ಶಾಂತಿಪಾಲಕ ಸೇರಿ ಕನಿಷ್ಠ 52 ಜನ ಮೃತಪಟ್ಟಿದ್ದಾರೆ ಮತ್ತು 64 ಮಂದಿ ಗಾಯಗೊಂಡಿದ್ದಾರೆ ಎಂದು ಪ್ರಾದೇಶಿಕ ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.
ಇನ್ನು, ಶನಿವಾರ ಸಂಜೆ ನಡೆದ ದಾಳಿಯ ಉದ್ದೇಶ ತಕ್ಷಣವೇ ಸ್ಪಷ್ಟವಾಗಿಲ್ಲ, ಆದರೆ ಇದು ಭೂ ವಿವಾದದ ಸುತ್ತ ಸುತ್ತುತ್ತದೆ ಎಂದು ಶಂಕಿಸಲಾಗಿದೆ ಎಂದು ಅಬೈ ಮಾಹಿತಿ ಸಚಿವ ಬುಲಿಸ್ ಕೋಚ್ ದೂರವಾಣಿ ಸಂದರ್ಶನದಲ್ಲಿ ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆ ಅಸೋಸಿಯೇಟೆಡ್ ಪ್ರೆಸ್ಗೆ ತಿಳಿಸಿದ್ದಾರೆ. ಹಾಗೂ, ಈ ಪ್ರದೇಶದಲ್ಲಿ ಮಾರಣಾಂತಿಕ ಜನಾಂಗೀಯ ಹಿಂಸಾಚಾರವು ಸಾಮಾನ್ಯವಾಗಿದ್ದು, ಅಲ್ಲಿ ನೆರೆಯ ವಾರ್ರಾಪ್ ರಾಜ್ಯದ ಟ್ವಿಕ್ ಡಿಂಕಾ ಬುಡಕಟ್ಟು ಸದಸ್ಯರು ಗಡಿಯಲ್ಲಿ ನೆಲೆಗೊಂಡಿರುವ ಅನೀತ್ ಪ್ರದೇಶಕ್ಕಾಗಿ ಅಬಿಯ ಎನ್ಗೊಕ್ ಡಿಂಕಾ ಜನಾಂಗೀಯ ಗುಂಪಿನೊಂದಿಗೆ ಭೂ ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ.
ವಿಮಾನದ ತುರ್ತು ನಿರ್ಗಮನ ದ್ವಾರ ತೆಗೆದು ರೆಕ್ಕೆಯ ಮೇಲೆ ನಡೆದ ಭೂಪ: ಇತರ ಪ್ರಯಾಣಿಕರಿಂದ್ಲೂ ಬೆಂಬಲ!
ಶನಿವಾರದ ಹಿಂಸಾಚಾರದಲ್ಲಿ ದಾಳಿಕೋರರು ನುಯರ್ ಬುಡಕಟ್ಟಿನ ಶಸ್ತ್ರಸಜ್ಜಿತ ಯುವಕರಾಗಿದ್ದು, ಕಳೆದ ವರ್ಷ ತಮ್ಮ ಪ್ರದೇಶಗಳಲ್ಲಿ ಪ್ರವಾಹದಿಂದಾಗಿ ವಾರಾಪ್ ರಾಜ್ಯಕ್ಕೆ ವಲಸೆ ಬಂದರು ಎಂದು ಬುಲಿಸ್ ಕೋಚ್ ಹೇಳಿದರು.
ಈ ಮಧ್ಯೆ, ಅಬೈನ ವಿಶ್ವಸಂಸ್ಥೆಯ ಮಧ್ಯಂತರ ಭದ್ರತಾ ಪಡೆ (UNISFA) ಈ ಬಗ್ಗೆ ಹೇಳಿಕೆ ನೀಡಿದ್ದು, ಶಾಂತಿಪಾಲಕರನ್ನು ಕೊಂದ ಹಿಂಸಾಚಾರವನ್ನು ಖಂಡಿಸಿದೆ. Nyinkuac, Majbong ಮತ್ತು Khadian ಪ್ರದೇಶಗಳಲ್ಲಿ ಅಂತರ್ ಕೋಮು ಘರ್ಷಣೆಗಳು ನಡೆದಿವೆ ಎಂದು UNIFSA ದೃಢಪಡಿಸಿದ್ದು, ಇದು ಸಾವುನೋವುಗಳಿಗೆ ಮತ್ತು UNISFA ನೆಲೆಗಳಿಗೆ ನಾಗರಿಕರನ್ನು ಸ್ಥಳಾಂತರಿಸಲು ಕಾರಣವಾಯಿತು. ಅಗೋಕ್ನಲ್ಲಿರುವ UNISFA ಬೇಸ್ ಸಶಸ್ತ್ರ ಗುಂಪಿನ ದಾಳಿಗೆ ಒಳಗಾಯಿತು. ಮಿಷನ್ ದಾಳಿಯನ್ನು ಹಿಮ್ಮೆಟ್ಟಿಸಿದ್ದು, ಆದರೂ ಘಾನಾದ ಶಾಂತಿಪಾಲಕನನ್ನು ಕೊಲ್ಲಲಾಯಿತು ಎಂದು ಹೇಳಿಕೆ ತಿಳಿಸಿದೆ.
ಪಾಕಿಸ್ತಾನವನ್ನು ಜಗತ್ತಿನಿಂದ್ಲೇ ನಿರ್ನಾಮ ಮಾಡಲಾಗುವುದು: ತಾಲಿಬಾನ್ ಪ್ರತಿಜ್ಞೆ!
2005 ರ ಶಾಂತಿ ಒಪ್ಪಂದವು ಸುಡಾನ್ನ ಉತ್ತರ ಮತ್ತು ದಕ್ಷಿಣದ ನಡುವಿನ ದಶಕಗಳ ಅಂತರ್ಯುದ್ಧವನ್ನು ಕೊನೆಗೊಳಿಸಿದ ನಂತರ ಸುಡಾನ್ ಮತ್ತು ದಕ್ಷಿಣ ಸುಡಾನ್ ಅಬೈ ಪ್ರದೇಶವನ್ನು ಯಾರು ನಿಯಂತ್ರಿಸಬೇಕೆಂಬ ವಿಚಾರದಲ್ಲಿ ವಿವಾದವಿದೆ. ಸುಡಾನ್ ಮತ್ತು ದಕ್ಷಿಣ ಸುಡಾನ್ ಎರಡೂ ಅಬಿಯ ಮಾಲೀಕತ್ವ ಬೇಕೆಂದು ಪಟ್ಟು ಹಿಡಿದಿದೆ.
2011 ರಲ್ಲಿ ದಕ್ಷಿಣ ಸುಡಾನ್, ಸುಡಾನ್ನಿಂದ ಸ್ವತಂತ್ರವಾದ ನಂತರ ಅಬೆ ಯಾರಿಗೆ ಸೇರಬೇಕೆಂಬ ವಿಚಾರದಲ್ಲಿ ವಿವಾದ ಬಗೆಹರಿದಿಲ್ಲ. ಈ ಪ್ರದೇಶದ ಬಹುಪಾಲು ಎನ್ಗೊಕ್ ಡಿಂಕಾ ಜನರು ದಕ್ಷಿಣ ಸುಡಾನ್ಗೆ ಒಲವು ತೋರುತ್ತಾರೆ, ಆದರೆ ತಮ್ಮ ಜಾನುವಾರುಗಳಿಗೆ ಹುಲ್ಲುಗಾವಲು ಹುಡುಕಲು ಅಬೈಗೆ ಬರುವ ಮಿಸೆರಿಯಾ ಅಲೆಮಾರಿಗಳು ಸುಡಾನ್ಗೆ ಒಲವು ತೋರುತ್ತಾರೆ. ಪ್ರಸ್ತುತ, ಈ ಪ್ರದೇಶವು ದಕ್ಷಿಣ ಸುಡಾನ್ನ ನಿಯಂತ್ರಣದಲ್ಲಿದೆ.
ಆಫ್ರಿಕನ್ ಒಕ್ಕೂಟ ಸಮಿತಿಯು ಅಬೈಗೆ ಜನಾಭಿಪ್ರಾಯ ಸಂಗ್ರಹವನ್ನು ಪ್ರಸ್ತಾಪಿಸಿತು. ಆದರೆ ಯಾರು ಮತ ಚಲಾಯಿಸಬಹುದು ಎಂಬುದರ ಕುರಿತು ಭಿನ್ನಾಭಿಪ್ರಾಯವಿತ್ತು. ಮಾರ್ಚ್ನಲ್ಲಿ ದಕ್ಷಿಣ ಸುಡಾನ್ ತನ್ನ ಸೈನ್ಯವನ್ನು ಅಬೈಗೆ ನಿಯೋಜಿಸಿದಾಗಿನಿಂದ ಅಂತರ ಕೋಮು ಮತ್ತು ಗಡಿಯಾಚೆಗಿನ ಘರ್ಷಣೆಗಳು ಉಲ್ಬಣಗೊಂಡಿವೆ.