
ರಿಯಾದ್ (ಮಾರ್ಚ್ 28, 2023): ಸೌದಿ ಅರೇಬಿಯಾದ ಪವಿತ್ರ ನಗರವಾದ ಮೆಕ್ಕಾಗೆ ಯಾತ್ರಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಬಸ್ ಸೋಮವಾರ ಸೇತುವೆಯ ಮೇಲೆ ಡಿಕ್ಕಿ ಹೊಡೆದ ನಂತರ ಬೆಂಕಿ ಹೊತ್ತಿಕೊಂಡಿದೆ. ಈ ಅವಘಡದಲ್ಲಿ ಕನಿಷ್ಠ 20 ಜನರು ಮೃತಪಟ್ಟಿದ್ದಾರೆ ಮತ್ತು ಎರಡು ಡಜನ್ಗೂ ಹೆಚ್ಚು ಜನರು ಅಂದರೆ ಸುಮಾರು 29 ಜನರು ಗಾಯಗೊಂಡಿದ್ದಾರೆ ಎಂದು ಸೌದಿ ಸರ್ಕಾರಿ ಮಾಧ್ಯಮ ವರದಿ ಮಾಡಿದೆ.
ದಕ್ಷಿಣ ಪ್ರಾಂತ್ಯದ ಅಸಿರ್ನಲ್ಲಿ ನಡೆದ ಈ ಘಟನೆಯು ಇಸ್ಲಾಂನ ಪವಿತ್ರ ನಗರಗಳಾದ ಮೆಕ್ಕಾ ಮತ್ತು ಮದೀನಾಕ್ಕೆ ಆರಾಧಕರನ್ನು ಸುರಕ್ಷಿತವಾಗಿ ಸಾಗಿಸಲು ನಿರಂತರ ಸವಾಲುಗಳನ್ನು ಎತ್ತಿ ತೋರಿಸುತ್ತದೆ. ಅಲ್ಲದೆ, ಮುಸಲ್ಮಾನರ ಪವಿತ್ರ ರಂಜಾನ್ ಮಾಸದ ಮೊದಲ ವಾರದಲ್ಲೇ ಈ ಅಪಘಾತ ನಡೆದಿದೆ. ಇದು ಉಮ್ರಾ ತೀರ್ಥಯಾತ್ರೆಗಳಿಗೆ ಕಾರ್ಯನಿರತ ಸಮಯವಾಗಿದೆ ಮತ್ತು ಲಕ್ಷಾಂತರ ಮುಸ್ಲಿಮರು ವಾರ್ಷಿಕ ಹಜ್ ತೀರ್ಥಯಾತ್ರೆಯನ್ನು ಮಾಡುವ ನಿರೀಕ್ಷೆಇರುವ ಕೆಲವೇ ತಿಂಗಳುಗಳ ಮುನ್ನ ಈ ಘಟನೆ ನಡೆದಿದೆ.
ಇದನ್ನು ಓದಿ: Bengaluru: ಕಾರಿನ ಜಿಪಿಎಸ್ನಿಂದ ಬಯಲಾಯ್ತು ಪತ್ನಿಯ ಅನೈತಿಕ ಸಂಬಂಧ..!
"ನಾವು ಈಗ ಪಡೆದಿರುವ ಪ್ರಾಥಮಿಕ ಮಾಹಿತಿಯ ಪ್ರಕಾರ, ಈ ಅಪಘಾತದಲ್ಲಿ ಸಾವಿನ ಸಂಖ್ಯೆ 20 ಕ್ಕೆ ತಲುಪಿದೆ ಮತ್ತು ಒಟ್ಟು ಗಾಯಗಳ ಸಂಖ್ಯೆ ಸರಿಸುಮಾರು 29 ಆಗಿದೆ" ಎಂದು ರಾಜ್ಯ-ಸಂಯೋಜಿತ ಅಲ್-ಎಖ್ಬರಿಯಾ ಚಾನೆಲ್ ವರದಿ ಮಾಡಿದೆ. ಮೃತರು ವಿಭಿನ್ನ ರಾಷ್ಟ್ರೀಯತೆಗಳನ್ನು" ಹೊಂದಿದ್ದಾರೆ ಎಂದು ಹೇಳಿದ್ದು, ಆದರೆ ಯಾವ ದೇಶದವರು ಎಂಬುದನ್ನು ಅವರು ಉಲ್ಲೇಖಿಸಲಿಲ್ಲ.
ಬಸ್ನಲ್ಲಿ ಬ್ರೇಕ್ ಸಮಸ್ಯೆಯಿಂದ ಈ ಅಪಘಾತ ಸಂಭವಿಸಿದೆ ಎಂದು ಸೌದಿ ಅರೇಬಿಯಾದ ಖಾಸಗಿ ಪತ್ರಿಕೆ ಓಕಾಜ್ ವರದಿ ಮಾಡಿದೆ. ಹಾಗೆ, ನಂತರ ಬಸ್ ಸೇತುವೆಗೆ ಡಿಕ್ಕಿ ಹೊಡೆದು, ಉರುಳಿಬಿದ್ದು ಬೆಂಕಿ ಹೊತ್ತಿಕೊಂಡಿತು ಎಂದೂ ತಿಳಿದುಬಂದಿದೆ. ಅಲ್-ಎಖ್ಬರಿಯಾದಲ್ಲಿ ಪ್ರಸಾರವಾದ ದೃಶ್ಯಾವಳಿಯು ವರದಿಗಾರನೊಬ್ಬ ಬಸ್ಸಿನ ಸುಟ್ಟ ಶೆಲ್ನ ಮುಂದೆ ನಿಂತಿರುವುದನ್ನು ತೋರಿಸುತ್ತದೆ.
ಇದನ್ನೂ ಓದಿ: ಹೋಂ ವರ್ಕ್ ಮಾಡದಿದ್ದಕ್ಕೆ 7 ವರ್ಷದ ವಿದ್ಯಾರ್ಥಿಗೆ ಹೊಡೆದು ಸಾಯಿಸಿದ ವಸತಿಶಾಲೆ ಮಾಲೀಕ..!
ಸೌದಿ ಅರೇಬಿಯಾದ ಪವಿತ್ರ ಸ್ಥಳಗಳ ಸುತ್ತ ಭಕ್ತರನ್ನು ಸಾಗಿಸುವುದು ಅಪಾಯಕಾರಿ ಕಾರ್ಯವಾಗಿದೆ. ವಿಶೇಷವಾಗಿ ಹಜ್ ಸಮಯದಲ್ಲಿ, ಬಸ್ಸುಗಳು ಅಸ್ತವ್ಯಸ್ತವಾಗಿರುವಾಗ, ಹೆಚ್ಚು ಟ್ರಾಫಿಕ್ ಜಾಮ್ಗಳು ಉಂಟಾಗುತ್ತವೆ.
ಅಕ್ಟೋಬರ್ 2019 ರಲ್ಲಿ, ಮದೀನಾ ಬಳಿ ಮತ್ತೊಂದು ಭಾರಿ ವಾಹನಕ್ಕೆ ಬಸ್ ಡಿಕ್ಕಿ ಹೊಡೆದು ಸುಮಾರು 35 ವಿದೇಶಿಯರು ಮೃತಪಟ್ಟಿದ್ದರು ಮತ್ತು ನಾಲ್ವರು ಗಾಯಗೊಂಡಿದ್ದರು. ಆದರೂ ತೀರ್ಥಯಾತ್ರೆಗಳು ಬೆಳೆಯುತ್ತಿರುವ ಪ್ರವಾಸೋದ್ಯಮ ಕ್ಷೇತ್ರದ ಅತ್ಯಗತ್ಯ ಅಂಶವಾಗಿದೆ. ಇದರಿಂದ ಪಳೆಯುಳಿಕೆ ಇಂಧನಗಳಿಂದ ದೂರವಿರುವ ಸಾಮ್ರಾಜ್ಯದ ಆರ್ಥಿಕತೆಯನ್ನು ವೈವಿಧ್ಯಗೊಳಿಸಲು ಸಹಾಯ ಮಾಡುತ್ತದೆ ಎಂದು ಸೌದಿ ಅಧಿಕಾರಿಗಳು ಭಾವಿಸುತ್ತಾರೆ.
ಇದನ್ನೂ ಓದಿ: ಕೋರ್ಟ್ ಹಾಲ್ನಲ್ಲೇ ಪತ್ನಿ ಮೇಲೆ ಆ್ಯಸಿಡ್ ಎರಚಿದ ಪಾಪಿ ಪತಿ..!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ