ವಾರ ಭವಿಷ್ಯ: ಈ ರಾಶಿಯವರಿಗೆ ಹಣಕಾಸಿನ ವ್ಯವಹಾರದಲ್ಲಿ ಲಾಭ!

By Kannadaprabha NewsFirst Published May 10, 2020, 7:57 AM IST
Highlights

ಈ ವಾರದ ಭವಿಷ್ಯ| ಯಾರಿಗೆ ಶುಭ? ಯಾರಿಗೆ ಶುಭ ವಾರ? ಇಲ್ಲಿದೆ ಈ ವಾರದ ರಾಶಿ ಫಲ

ಮೇಷ - ವಿದ್ಯಾರ್ಥಿಗಳು ಬಿಂದಾಸ್ ಆಗಿರಬಹುದು. ವಿವಾಹಿತರಿಗೆ ಸಣ್ಣಪುಟ್ಟ ಸಮಸ್ಯೆ ಎದುರಾಗಬಹುದು. ಹಣಕಾಸು ಸ್ಥಿತಿ ಉತ್ತಮ. ಹೆಚ್ಚೆಚ್ಚು ಅಧ್ಯಯನದಲ್ಲಿ ತೊಡಗಿಸಿ. ಜಗತ್ತನ್ನು ನಿಮ್ಮ ಮೂಗಿನ ನೇರದಿಂದ ನೋಡುವುದನ್ನು ತುಸು ಬದಲಿಸಿಕೊಳ್ಳಿ. ವಾಸ್ತವ ಅರಿತರೆ ಬದುಕು ಚೆನ್ನಾಗಿರುತ್ತೆ.

ವೃಷಭ -ತಾಯಿಗಾಗಿ ಹಣ ಖರ್ಚು ಮಾಡಬೇಕಾಗಬಹುದು. ಬರಬೇಕಾದ ಹಣ ಕೈ ಸೇರುವಾಗ ವಿಳಂಬವಾಗುತ್ತದೆ. ಖುಷಿಗಿಂತ ಬೇಸರ ಹೆಚ್ಚಿರಬಹುದು. ಸಂಗಾತಿಯ ಬಗ್ಗೆ ಪಾಸಿಟಿವ್ ಯೋಚನೆ ಬೆಳೆಸಿಕೊಳ್ಳಿ. ಆರೋಗ್ಯದ ಕಡೆ ಹೆಚ್ಚಿನ ಗಮನ ಅಗತ್ಯ. ಧ್ಯಾನ ಮಾಡಿ, ಮನಃಶಾಂತಿ ಸಿಗುತ್ತೆ. 

ಮಿಥುನ - ಸ್ನೇಹಿತರಿಗೆ ಸಹಾಯ ಮಾಡುವಿರಿ. ಕೂದಲು ಉದುರುವಿಕೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಿರಿ. ನಿಮ್ಮ ಚಿಂತನಾ ಕ್ರಮಗಳು ಬದಲಾಗಲಿವೆ. ಮಾಡುವ ಕೆಲಸದಲ್ಲಿ ಪ್ರಾಮಾಣಿಕತೆ ಹೆಚ್ಚಾಗಿ ಅದರ ಫಲವಾಗಿ ಸ್ವಾಭಿಮಾನ ಹೆಚ್ಚಲಿದೆ. ಯಾರಿಗೂ ಹೆದರುವುದು ಬೇಡ. ಆತ್ಮವಿಶ್ವಾಸ ಮೂಡಲಿದೆ.

ಕಟಕ: ಮಾಡುವ ಕೆಲಸದಲ್ಲಿ ಆಸಕ್ತಿ ಹೆಚ್ಚಾಗಲಿದೆ. ನಟ-ನಟಿಯರಿಗೆ ಒತ್ತಡದಿಂದ ಮುಕ್ತಿ ಸಿಕ್ಕಲಿದೆ. ಮೊಣಕೈ ನೋವಿಗೆ ತಾತ್ಕಾಲಿಕ ಪರಿಹಾರ. ಹಿರಿಯ ವ್ಯಕ್ತಿಗಳ ಸಲಹೆಯಿಂದ ಕಾರ್ಯ ಸಿದ್ಧಿ. ಅತಿಯಾದ ಆತ್ಮವಿಶ್ವಾಸ ಬೇಡ. ಪ್ರೀತಿ-ಪ್ರೇಮದಿಂದ ಅಂತರ ಕಾಯ್ದುಕೊಳ್ಳುವುದು ಒಳ್ಳೆಯದು. 

ರಾಶಿ ಪ್ರಕಾರ, ಪ್ರೀತಿಯಿಂದ ನಿಮ್ಮನ್ನು ದೂರವಿಡುವುದು ಏನು?

ಸಿಂಹ: ನಿಮಗೀಗ ಶುಭವಿದೆ. ಹಿಂಜರಿಕೆ ಬೇಡ, ನಾಳೆ ಮಾಡಬೇಕೆನ್ನುವ ಕೆಲಸವನ್ನು ಇಂದೇ ಮಾಡಿ. ಭವಿಷ್ಯದ ಬಗ್ಗೆ ಹೆಚ್ಚು ಯೋಚನೆ ಬೇಡ. ಸದಾ ಇತರರ ಬಗ್ಗೆಯೇ ಯೋಚಿಸುತ್ತಿರಬೇಡಿ. ಅವರ ಸ್ವಂತ ನಡೆಗೆ ಅಡ್ಡಿ ಬರಬೇಡಿ. ನಿಮಗಾಗಿ ಸ್ವಲ್ಪ ಟೈಮ್ ಕೊಡಿ. ಹ್ಯಾಪಿಯಾಗಿರಿ. ಇತರರನ್ನೂ ಖುಷಿಯಿಂದಿರಲು ಬಿಡಿ. 

ಕನ್ಯಾ: ನಿಮ್ಮ ಸೃಜನಶೀಲತೆ ಹೊರ ಜಗತ್ತಿಗೆ ತೆರೆದುಕೊಳ್ಳುವ ಸಮಯ. ಅದನ್ನು ಬಳಸಿಕೊಳ್ಳಿ. ಸೋಮಾರಿತನ ಬಿಟ್ಟು ಹೊಸ ಚಿಂತನೆಗಳನ್ನು ಕಾರ್ಯರೂಪಕ್ಕೆ ತನ್ನಿ. ಖುಷಿ ಹೆಚ್ಚಲಿದೆ. ಆರೋಗ್ಯದ ಬಗೆಗೂ ಚಿಂತೆ ಬೇಡ. ಖರ್ಚು ಮಾಡುವುದರಲ್ಲಿ ಹಿಡಿತವಿರಲಿ. 

ತುಲಾ: ಆತ್ಮೀಯರ ಭೇಟಿ ಮಾಡಲಿದ್ದೀರಿ. ಇದರಿಂದ ಮನಸ್ಸಿಗೆ ಸಂತೋಷ ಸಿಗುವುದರ ಜೊತೆಗೆ ಹೊಸದೊಂದು ವಿಚಾರವನ್ನು ತಿಳಿದುಕೊಳ್ಳುವಿರಿ. ವ್ಯಾಪಾರದಲ್ಲಿ ಲಾಭ ಕಾಣಲಿದ್ದೀರಿ. ದೈನಂದಿನ ಕೆಲಸ ಕಾರ್ಯಗಳಲ್ಲಿ ಆಸಕ್ತಿಯಿಂದ ತೊಡಗಿಕೊಂಡು ಯಶಸ್ಸು ಕಾಣಲಿದ್ದೀರಿ. 

ವೃಶ್ಚಿಕ: ಅಪರಿಚಿತ ವ್ಯಕ್ತಿಗಳು ಈ ವಾರ ಭೇಟಿ ಮಾಡಲಿದ್ದೀರಿ. ಇವರಿಂದ ಆಧ್ಯಾತ್ಮದ ವಿಚಾರಗಳಲ್ಲಿ ಸಲಹೆ ಪಡೆದು ಅದರಲ್ಲಿ ಹೆಚ್ಚು ತೊಡಗಿಸಿಕೊಳ್ಳಲಿದ್ದೀರಿ. ಮಕ್ಕಳ ವಿಷಯದಲ್ಲಿ ಎಚ್ಚರಿಕೆ ಇರಲಿ. ಕೆಲಸದಲ್ಲಿನ ಕಠಿಣ ಪರಿಶ್ರಮ ಈ ವಾರ ನಿಮ್ಮ ಕೈಹಿಡಿಯಲಿದೆ. ವಾರಾಂತ್ಯದಲ್ಲಿ ಬಂಧುಗಳ ಆಗಮನ.

ದೇವರ ಪ್ರದಕ್ಷಿಣೆ ಹೀಗೆ ಮಾಡಿ, ದೌರ್ಭಾಗ್ಯ ದೂರ ಮಾಡಿಕೊಳ್ಳಿ!

ಧನುಸ್ಸು: ಸಂಬಂಧಗಳಲ್ಲಿ ಹಣಕಾಸಿನ ವ್ಯವಹಾರ ಹೆಚ್ಚಾದರೆ ಒಡಕು ಮೂಡಲು ಕಾರಣವಾಗ ಬಹುದು. ಸಹಾಯವೂ ಎಷ್ಟು ಬೇಕೋ ಅಷ್ಟಿದ್ದರೆ ಒಳ್ಳೆಯದು. ಸಹೋದರರೆಲ್ಲರೂ ಮನೆಯಲ್ಲಿ ಒಟ್ಟಿಗೆ ಸೇರಿವುದರಿಂದ ಸಂಭ್ರಮ ನೆಲೆಸಲಿದೆ.

ಮಕರ: ಅಗತ್ಯ ಎನಿಸಿದ ವಿಚಾರದ ಕಡೆ ಮಾತ್ರ ಗಮನ ಕೊಡಿ. ಅನಾವಶ್ಯಕವಾಗಿ ಯಾರ ವಿಷಯದಲ್ಲೂ ತಲೆಹಾಕಬೇಡಿ. ಇಬ್ಬರ ನಡುವೆ ಮೂರನೇಯವರು ಸಮಸ್ಯೆ ಸರಿ ಮಾಡಲು ಹೋದರೆ ನಿಷ್ಟೂರವಾಗುವುದು ಮೂರನೇಯವರೆಂದು ನೆನಪಿರಲಿ.

ಕುಂಭ: ಪುಸ್ತಕ ಓದುವ ಹವ್ಯಾಸ ಇನ್ನೂ ಹೆಚ್ಚಾಗಲಿದೆ. ಪುಸ್ತಕಕ್ಕಿಂತ ಒಳ್ಳೆಯ ಸ್ನೇಹಿತ ಇನ್ನೊಬ್ಬನಿಲ್ಲ. ದುಃಖ ಹೆಚ್ಚಾದಾಗ, ಬೇಸರವಾದಾಗ ಪುಸ್ತಕ ಓದಿ. ಯಾಂತ್ರೀಕೃತ ಬದುಕಿನಿಂದ ಹೊರ ಬಂದು ವಾರಾಂತ್ಯದಲ್ಲಾದರೂ ಹಸಿರಿನ ಮಧ್ಯೆ ಸ್ವಲ್ಪ ಕಾಲಕಳೆಯಿರಿ. ಇದರಿಂದ ಶಾಂತತೆ, ಸಂತೋಷ ಸಿಗಲಿದೆ.

ಮೀನ: ದೇವರ ಮೇಲೆ ನಂಬಿಕೆ ಹೆಚ್ಚಾಗಲಿದೆ. ಮನೆಯಲ್ಲಿನ ಅಶಾಂತತೆಯ ವಾತಾವರಣಕ್ಕೆ ತಾತ್ಕಾಲಿಕ ಮುಕ್ತಿ ಸಿಗಲಿದೆ. ಹಣಕಾಸಿನ ವ್ಯವಹಾರದಲ್ಲಿ ಲಾಭ ಹೊಂದಿದರೂ ಅಷ್ಟೇ ಪ್ರಮಾಣದಲ್ಲಿ ಖರ್ಚೂ ಈ ವಾರ ಆಗಲಿದೆ.

click me!