ಮನೆಯಲ್ಲಿ ಮಲಗಿದ್ದ ಕುಟುಂಬದವರಿಗೆಲ್ಲಾ ಕಚ್ಚಿದ ಹಾವು; ಮಲಗಿದ್ದಲ್ಲೇ ಪ್ರಾಣ ಬಿಟ್ಟ ಮಕ್ಕಳು!

Published : Jun 18, 2025, 04:07 PM IST
Common krait Snake Bite

ಸಾರಾಂಶ

ರಾತ್ರಿ ಊಟ ಮಾಡಿ, ಸಾಲಾಗಿ ಮಲಗಿದ್ದ ಕುಟುಂಬದ ಎಲ್ಲ ಸದಸ್ಯರಿಗೆ ವಿಷಪೂರಿತ ಹಾವು ಕಚ್ಚಿದೆ. ಇದರಿಂದ ಇಬ್ಬರು ಮಕ್ಕಳು ಸಾವನ್ನಪ್ಪಿದ ಘಟನೆ ನಡೆದಿದ್ದು, ತಾಯಿಯ ಸ್ಥಿತಿ ಗಂಭೀರವಾಗಿದೆ., ಚಿಕಿತ್ಸೆ ಮುಂದುವರೆದಿದೆ. 

ಮನೆಯಲ್ಲಿ ರಾತ್ರಿ ಊಟ ಮಾಡಿ ಎಂದಿನಂತೆ ಕುಟುಂಬದ ಎಲ್ಲ ಸದಸ್ಯರು ಸಾಲಾಗಿ ಮಲಗಿದ್ದಾಗ, ಮನೆಯೊಳಗೆ ಹೊಕ್ಕ ವಿಷಪೂರಿತ ಹಾವೊಂದು ಕುಟುಂಬದ ಎಲ್ಲ ಸದಸ್ಯರಿಗೂ ಕಚ್ಚಿದೆ. ಬೆಳಗಾಗುವಷ್ಟರಲ್ಲಿ ಇಬ್ಬರು ಮಕ್ಕಳ ಮೈಗೆಲ್ಲಾ ವಿಷ ಆವರಿಸಿಕೊಂಡು ಜೀವ ಬಿಟ್ಟಿದ್ದಾರೆ. ಉಳಿದಂತೆ ಅವರ ತಾಯಿಯನ್ನು ರಾತ್ರಿಯೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆಯ ಸ್ಥಿತಿಯೂ ಗಂಭೀರವಾಗಿದೆ.

ಈ ಘಟನೆ ರಾಜಸ್ಥಾನ ರಾಜ್ಯದ ದೌಲ್ಫುರ ಗ್ರಾಮದಲ್ಲಿ ನಡೆದಿದೆ. ಈ ಘಟನೆಯಲ್ಲಿ ಹಾವು ಕಡಿತದಿಂದ ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ ಮತ್ತು ಅವರ ತಾಯಿಯ ಸ್ಥಿತಿ ಗಂಭೀರವಾಗಿದೆ. ರಾಜಸ್ಥಾನ ಮತ್ತು ಉತ್ತರ ಪ್ರದೇಶದ ಗಡಿಯಲ್ಲಿರುವ ಹಳ್ಳಿಯಲ್ಲಿ ಒಬ್ಬ ಮಹಿಳೆ ಮತ್ತು ಆಕೆಯ ಇಬ್ಬರು ಮಕ್ಕಳು ಮನೆಯ ಛಾವಣಿಯ ಮೇಲೆ ಮಲಗಿದ್ದಾಗ ವಿಷಸರ್ಪ ಕಚ್ಚಿದೆ. ಈ ದುರ್ಘಟನೆಯಲ್ಲಿ ಇಬ್ಬರು ಮಕ್ಕಳು ಸಾವನ್ನಪ್ಪಿದ್ದರೆ, ಮಹಿಳೆ ಚಿಕಿತ್ಸೆ ಪಡೆದು ಚೇತರಿಸಿಕೊಳ್ಳುತ್ತಿದ್ದಾರೆ. ಈ ಘಟನೆ ಉತ್ತರ ಪ್ರದೇಶದ ಆಗ್ರಾ ಜಿಲ್ಲೆಯ ಜಗ್ನೇರ್ ಪೊಲೀಸ್ ಠಾಣಾ ವ್ಯಾಪ್ತಿಯ ಮಠ ಭವಾನಿ ಗ್ರಾಮದಲ್ಲಿ ಸೋಮವಾರ ತಡರಾತ್ರಿ ನಡೆದಿದೆ.

ಹಾವು ಕಡಿತದಿಂದ ಮಕ್ಕಳ ಸಾವು

ವಿಮಲೇಶ್ ದೇವಿ ತನ್ನ ಇಬ್ಬರು ಮಕ್ಕಳಾದ ಕಾನ್ಹಾ (10) ಮತ್ತು ರಾಮು (8) ಜೊತೆ ಬೇಸಿಗೆಯ ರಾತ್ರಿ ಛಾವಣಿಯ ಮೇಲೆ ಮಲಗಿದ್ದರು. ರಾತ್ರಿಯ ಕತ್ತಲಲ್ಲಿ ವಿಷಸರ್ಪವೊಂದು ಮೂವರನ್ನೂ ಕಚ್ಚಿದೆ. ತಾಯಿಗೆ ತಿಳಿದ ತಕ್ಷಣ, ಅವರು ಕೂಗಿ ಸಂಬಂಧಿಕರನ್ನು ಕರೆದರು. ಸಂಬಂಧಿಕರು ತಕ್ಷಣ ಮಹಿಳೆಯನ್ನು ಹತ್ತಿರದ ಹಳ್ಳಿಯಲ್ಲಿರುವ ನೀಮ್ ಹಕೀಮ್‌ಗಳ ಬಳಿಗೆ ಕರೆದೊಯ್ದರು.

ಇನ್ನು ಮಕ್ಕಳಿಗೆ ಹಾವು ಕಚ್ಚಿದೆ ಎಂಬುದರ ಬಗ್ಗೆ ಯಾರಿಗೂ ಗಮನವಿರಲಿಲ್ಲ. ಏಕೆಂದರೆ ಅವರು ಪ್ರತಿದಿನ ತಡವಾಗಿ ಮಲಗುತ್ತಿದ್ದರು ಮತ್ತು ಹಾವು ಕಚ್ಚಿದ ವಿಷಯ ಯಾರಿಗೂ ತಿಳಿದಿರಲಿಲ್ಲ. ಬೆಳಿಗ್ಗೆ ತಡವಾಗಿ ಮಕ್ಕಳು ಎದ್ದಾಗ, ಸಂಬಂಧಿಕರು ಛಾವಣಿಯ ಮೇಲೆ ಹೋಗಿ ಅವರನ್ನು ಪ್ರಜ್ಞಾಹೀನ ಸ್ಥಿತಿಯಲ್ಲಿ ಕಂಡುಕೊಂಡರು. ತಕ್ಷಣ ಇಬ್ಬರನ್ನೂ ಗ್ವಾಲಿಯರ್‌ಗೆ ಕರೆದೊಯ್ಯಲಾಯಿತು. ಆದರೆ ಅಲ್ಲಿ ವೈದ್ಯರು ಅವರನ್ನು ಮೃತಪಟ್ಟಿದಗ್ದಾರೆ ಎಂದು ಘೋಷಿಸಿದರು.

ಕಾಮನ್ ಕ್ರೇಟ್ ಹಾವು ಕಚ್ಚಿದೆ:

ಇನ್ನು ಮಕ್ಕಳಿಗೆ ಹಾವು ಕಚ್ಚಿರುವ ಸುದ್ದಿ ತಿಳಿಯುತ್ತಿದ್ದಂತೆಯೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ಬದಲು, ಮೂಢನಂಬಿಕೆ ಮತ್ತು ದೇಸಿ ಚಿಕಿತ್ಸೆಯಲ್ಲಿ ಅಮೂಲ್ಯ ಸಮಯವನ್ನು ವ್ಯರ್ಥ ಮಾಡಲಾಯಿತು. ಒಂದು ವೇಳೆ ಪ್ರಥಮ ಚಿಕಿತ್ಸೆ ನೀಡಿ ಆಸ್ಪತ್ರೆಗೆ ಮಕ್ಕಳನ್ನು ಕರೆದೊಯ್ದಿದ್ದರೆ ಬಹುಶಃ ಅವರ ಜೀವವನ್ನು ಉಳಿಸಬಹುದಿತ್ತು. ನಂತರ ಹಾವು ಹಿಡಿಯುವವರ ಸಹಾಯದಿಂದ ಹಾವನ್ನು ಹಿಡಿಯಲಾಯಿತು. ತಜ್ಞರು ಇದು ಕಾಮನ್ ಕ್ರೇಟ್ ಹಾವು ಎಂದು ಹೇಳಿದರು. ಇದು ಭಾರತದ 'ಬಿಗ್ ಫೋರ್' ವಿಷಕಾರಿ ಹಾವುಗಳಲ್ಲಿ ಒಂದಾಗಿದೆ. ನ್ಯೂರೋಟಾಕ್ಸಿನ್ ವಿಷದಿಂದಾಗಿ ನಿದ್ರೆಯಲ್ಲಿಯೇ ಸಾವಿಗೆ ಕಾರಣವಾಗಬಹುದು ಎಂದು ತಜ್ಞರು ತಿಳಿಸಿದ್ದಾರೆ.

ಮಕ್ಕಳ ಜೀವ ಉಳಿಯಬಹುದಿತ್ತೇ?

ಸಕಾಲದಲ್ಲಿ ಆಸ್ಪತ್ರೆಗೆ ಕರೆದೊಯ್ದಿದ್ದರೆ ಮಕ್ಕಳ ಜೀವ ಉಳಿಯಬಹುದಿತ್ತು ಎಂದು ಸ್ಥಳೀಯರು ಹೇಳುತ್ತಾರೆ. ಈ ಘಟನೆ ಕೇವಲ ಕೌಟುಂಬಿಕ ದುರಂತವಲ್ಲ, ಆದರೆ ಗ್ರಾಮೀಣ ಮೂಢನಂಬಿಕೆ ಮತ್ತು ವೈದ್ಯಕೀಯ ಅರಿವಿನ ಕೊರತೆಯನ್ನು ಬಹಿರಂಗಪಡಿಸುತ್ತದೆ.

PREV
Read more Articles on
click me!

Recommended Stories

ಬಿಸಿ ನೀರಿಗೆ ಒಂದು ಟಾಬ್ಲೆಟ್​ ಹಾಕಿದ್ರೆ ಸಾಕು, ಎರಡೇ ನಿಮಿಷದಲ್ಲಿ ನೂಡಲ್ಸ್​ ರೆಡಿ- ಏನಿದು AI Tablet?
Coriander Leaves Farming: ಇಷ್ಟು ಎಲೆಗೆ ಅಷ್ಟು ಯಾಕೆ ಕೊಡ್ತೀರಿ? ಸಣ್ಣ ಪಾಟ್‌ನಲ್ಲೇ ಕೊತ್ತುಂಬರಿ ಬೆಳೆಯಲು Tips