Lion Attack: ಮನೆ ಮುಂದೆ ನಿಂತಿದ್ದವನ ಮೇಲೆ ಎರಗಿದ ಸಿಂಹ! ಕಲ್ಲು ಹೊಡೆದು ವ್ಯಕ್ತಿಯನ್ನು ಕಾಪಾಡಿದ ಜನ

Published : Jul 06, 2026, 08:06 PM IST
Lion attack Man

ಸಾರಾಂಶ

ಗುಜರಾತ್‌ನ ಭಾವನಗರ್ ಜಿಲ್ಲೆಯ ಗಾರ್ಜಿಯಾ ಗ್ರಾಮದಲ್ಲಿ, ಮನೆಯ ಮುಂದೆ ನಿಂತಿದ್ದ ಕಲುಭಾಯಿ ಎಂಬುವವರ ಮೇಲೆ ಸಿಂಹವೊಂದು ದಾಳಿ ಮಾಡಿದೆ. ಈ ಭಯಾನಕ ಘಟನೆಯ ವಿಡಿಯೋ ವೈರಲ್ ಆಗಿದ್ದು, ಗಂಭೀರವಾಗಿ ಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಗ್ರಾಮಸ್ಥರು ಸಿಂಹವನ್ನು ಓಡಿಸಿದ್ದಾರೆ.

ಗಾಂಧಿನಗರ್: ಗುಜರಾತ್‌ನ ಭಾವನಗರ್ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬರ ಮೇಲೆ ಸಿಂಹವೊಂದು ದಾಳಿ ಮಾಡಿರುವ ಆಘಾತಕಾರಿ ವಿಡಿಯೋ ಇಂಟರ್‌ನೆಟ್‌ನಲ್ಲಿ ವೈರಲ್ ಆಗಿದೆ. ಪಾಲಿತಾನ ತಾಲೂಕಿನ ಗಾರ್ಜಿಯಾ ಗ್ರಾಮದಲ್ಲಿ ಜುಲೈ 6ರ ಶನಿವಾರ ಬೆಳಗ್ಗೆ ಈ ಘಟನೆ ನಡೆದಿದೆ.

ಸ್ಥಳೀಯ ವರದಿಗಳ ಪ್ರಕಾರ, ಗಾರ್ಜಿಯಾ ಗ್ರಾಮದ ಮಾಲ್ಧಾರಿ ಸಮುದಾಯದ ನಿವಾಸಿ ಕಲುಭಾಯಿ ಬೋಘಭಾಯಿ ಗಮಾರ ಎಂಬುವವರ ಮೇಲೆ ಸಿಂಹ ಅಟ್ಯಾಕ್ ಮಾಡಿದೆ. ಕಲುಭಾಯಿ ತಮ್ಮ ಮನೆಯ ಮುಂದೆ ನಿಂತಿದ್ದಾಗ, ಸಿಂಹವು ಅವರ ಮೇಲೆ ಎರಗಿದೆ. ಇದರಿಂದ ಕೆಳಗೆ ಬಿದ್ದ ಕಲುಭಾಯಿ ಅವರ ಕಾಲುಗಳನ್ನು ಸಿಂಹ ಹಿಡಿದುಕೊಂಡು ಕಚ್ಚಿದೆ. ಈ ದಾಳಿಯಿಂದ ಕಲುಭಾಯಿ ಅವರಿಗೆ ಗಂಭೀರ ಗಾಯಗಳಾಗಿವೆ ಎಂದು ತಿಳಿದುಬಂದಿದೆ.

ವ್ಯಕ್ತಿಯ ಮೇಲೆ ಸಿಂಹದ ದಾಳಿ

ಈ ದಾಳಿಯ ಭಯಾನಕ ದೃಶ್ಯಗಳು ವಿಡಿಯೋದಲ್ಲಿ ಸೆರೆಯಾಗಿವೆ. 46 ಸೆಕೆಂಡ್‌ಗಳ ಈ ಕ್ಲಿಪ್‌ನಲ್ಲಿ, ಸಿಂಹದ ಹಿಡಿತದಿಂದ ತಪ್ಪಿಸಿಕೊಳ್ಳಲು ಕಲುಭಾಯಿ ಒದ್ದಾಡುತ್ತಿರುವುದನ್ನು ನೋಡಬಹುದು. ಅವರ ಕಾಲುಗಳನ್ನು ಸಿಂಹ ಬಿಗಿಯಾಗಿ ಹಿಡಿದುಕೊಂಡಿತ್ತು. ಹಿನ್ನೆಲೆಯಲ್ಲಿ, ಗ್ರಾಮಸ್ಥರು ಸಿಂಹವನ್ನು ಓಡಿಸಲು ಜೋರಾಗಿ ಕಿರುಚಾಡುತ್ತಿರುವುದು ಕೇಳಿಸುತ್ತದೆ. ಕೆಲವರು ಸಿಂಹದ ಮೇಲೆ ಕಲ್ಲುಗಳನ್ನು ಎಸೆದಿದ್ದಾರೆ.

ಕೆಲ ಕಾಲ ಗ್ರಾಮಸ್ಥರನ್ನು ಆತಂಕದಲ್ಲಿಟ್ಟ ಸಿಂಹ, ಕೊನೆಗೆ ಕಲುಭಾಯಿ ಅವರನ್ನು ಬಿಟ್ಟು ಕಾಡಿನೊಳಗೆ ಓಡಿಹೋಗಿದೆ. ತಕ್ಷಣವೇ, ಗಾಯಗೊಂಡ ಕಲುಭಾಯಿ ಅವರನ್ನು ಪಾಲಿತಾನದಲ್ಲಿರುವ ಮಾನ್‌ಸಿಂಜಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರು ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ. ದಾಳಿಯಿಂದ ಅವರಿಗೆ ಗಂಭೀರ ಗಾಯಗಳಾಗಿವೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಅರಣ್ಯ ಇಲಾಖೆ ಬಗ್ಗೆ ಆಕ್ರೋಶ

ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ, ಅನೇಕರು ಕಲುಭಾಯಿ ಅವರ ಆರೋಗ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಇಂತಹ ಘಟನೆಗಳು ಮರುಕಳಿಸದಂತೆ ತಡೆಯಲು ಅರಣ್ಯ ಇಲಾಖೆ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಹಲವರು ಆಗ್ರಹಿಸಿದ್ದಾರೆ.

ಒಬ್ಬ ಬಳಕೆದಾರರು ಹೀಗೆ ಬರೆದಿದ್ದಾರೆ, 'ಭಾರತದಲ್ಲಿ 4,000ಕ್ಕೂ ಹೆಚ್ಚು ಹುಲಿಗಳಿವೆ ಮತ್ತು ಅವುಗಳಿಗೆ ವಾಸಿಸಲು ವಿಶಾಲವಾದ ಅರಣ್ಯ ಪ್ರದೇಶವಿದೆ. ಆದರೆ, ಗುಜರಾತ್‌ನ ಸೌರಾಷ್ಟ್ರದಲ್ಲಿ ಕೇವಲ 1,000 ಏಷಿಯಾಟಿಕ್ ಸಿಂಹಗಳು ಸೀಮಿತ ಪ್ರದೇಶದಲ್ಲಿ ವಾಸಿಸುತ್ತಿವೆ. ಸ್ಥಳದ ಅಭಾವದಿಂದಾಗಿ ಮನುಷ್ಯ-ಸಿಂಹ ಸಂಘರ್ಷ ಹೆಚ್ಚುತ್ತಿದೆ. ಗುಜರಾತ್ ಸರ್ಕಾರ ಈ ಬಗ್ಗೆ ಯೋಚಿಸಬೇಕು.

 

 

PREV
Read more Articles on
click me!

Recommended Stories

'ಮುಂದೆ ಏನಾಗ್ತಿಯಾ ಪುಟ್ಟಾ' ಎಂದಾಗ ಈ ವೇಷದಲ್ಲಿ ಬಂದ ಬಾಲಕ ರಾತ್ರೋರಾತ್ರಿ ಫೇಮಸ್​- ಪುಟಾಣಿ ಹೇಳಿದ್ದೇನು
116ರ ಕನ್ನಡದ ಅಜ್ಜಿಗೆ ರಾಷ್ಟ್ರಪತಿಗೆ ಕೊಡೋ ದರ್ಶನ ಕೊಡಿಸಿದ್ಯಾಕೆ ಟಿಟಿಡಿ? ಅತೀ ಸಮೀಪದಿಂದ ತಿಮ್ಮಪ್ಪನ ದರ್ಶನ!