ಡೈಮಂಡ್ ಬಿಸಿನೆಸ್ ನಲ್ಲಿ ಭಾರೀ ನಷ್ಟ! ಎಂಜಿನಿಯರ್ ಮಾಡಿದ ಮಾಸ್ಟರ್ ಪ್ಲಾನ್‌ಗೆ ಈಗ ₹100 ಕೋಟಿ ಕಂಪನಿಯ ಒಡೆಯ!

Published : Aug 02, 2026, 05:00 PM IST
Lab-Grown Diamond Loss Couldnt Stop Btech Graduate Now He Runs a ₹100 Crore Company

ಸಾರಾಂಶ

ವಜ್ರ ಉದ್ಯಮದಲ್ಲಿ ಭಾರೀ ನಷ್ಟ ಅನುಭವಿಸಿದ ಬಿಟೆಕ್ ಪದವೀಧರ ಹತಾಶರಾಗದೆ ಜವಳಿ ಕ್ಷೇತ್ರಕ್ಕೆ ಕಾಲಿಟ್ಟು ಹೊಸ ಆರಂಭ ಮಾಡಿದರು. ಕೋವಿಡ್ ಸವಾಲನ್ನೂ ಮೀರಿ ಇಂದು ಸುಮಾರು ₹100 ಕೋಟಿ ವಾರ್ಷಿಕ ವಹಿವಾಟಿನ ಸಂಸ್ಥೆಯನ್ನು ಕಟ್ಟಿದ್ದಾರೆ. ಲಿಂಕ್ಡ್‌ಇನ್‌ನಲ್ಲಿ ವೈರಲ್ ಆದ ಈ ಕಥೆ ಪರಿಶ್ರಮ, ಸ್ಥೈರ್ಯ ಮತ್ತು ವೈಫಲ್ಯವನ್ನು ಯಶಸ್ಸಿನ ಮೆಟ್ಟಿಲಾಗಿಸಿಕೊಳ್ಳುವ ಪಾಠವನ್ನು ಸಾರುತ್ತಿದೆ.

ವಜ್ರ ವ್ಯವಹಾರದಲ್ಲಿ ನಷ್ಟ... ಜವಳಿ ಕ್ಷೇತ್ರದಲ್ಲಿ ಗೆಲುವಿನ ಹೊಸ ಅಧ್ಯಾಯ!

ಎಂಜಿನಿಯರಿಂಗ್ ಪದವಿ ಮುಗಿದ ಬಳಿಕ ಅನೇಕರು ಉದ್ಯೋಗದತ್ತ ಮುಖ ಮಾಡುತ್ತಾರೆ. ಆದರೆ ಕೆಲವರು ಬಿಸಿನೆಸ್ ಮಾಡುವ ಕನಸನ್ನು ಬೆನ್ನಟ್ಟುತ್ತಾರೆ. ಅಂಥದ್ದೇ ಯುವ ಉದ್ಯಮಿಯೊಬ್ಬರ ಕಥೆ ಇದೀಗ X (Twitter) ವೈರಲ್ ಆಗಿದ್ದು, ವೈಫಲ್ಯಗಳ ನಡುವೆಯೂ ಹಠ ಬಿಡದ ಮನೋಭಾವಕ್ಕೆ ಸಾವಿರಾರು ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮೊದಲ ಹೆಜ್ಜೆ ವಜ್ರ ಉದ್ಯಮದಲ್ಲಿ..!

ಬಿಟೆಕ್ ಪೂರ್ಣಗೊಳಿಸಿದ ಬಳಿಕ ಯುವಕ ತನ್ನ ತಂದೆಯ ಸಣ್ಣ ವಜ್ರ ಉದ್ಯಮಕ್ಕೆ ಸೇರಿದರು. 2016-17ರ ವೇಳೆಗೆ ಲ್ಯಾಬ್‌ನಲ್ಲಿ ತಯಾರಾಗುವ ವಜ್ರಗಳಿಗೆ ಬೇಡಿಕೆ ಹೆಚ್ಚುತ್ತಿರುವುದನ್ನು ಗಮನಿಸಿ, ಈ ಕ್ಷೇತ್ರದಲ್ಲಿ ಹೂಡಿಕೆ ಮಾಡಲು ಕುಟುಂಬವನ್ನು ಮನವೊಲಿಸಿದರು. ಹೊಸ ಯಂತ್ರೋಪಕರಣಗಳು, ಸಿಬ್ಬಂದಿ ತರಬೇತಿ ಹಾಗೂ ಉತ್ಪಾದನೆಗಾಗಿ ಸಾಕಷ್ಟು ಹಣ ಮತ್ತು ಸಮಯ ಹೂಡಿಕೆ ಮಾಡಲಾಯಿತು.

ಮಾರುಕಟ್ಟೆ ಕುಸಿತದಿಂದ ಭಾರೀ ನಷ್ಟ..!

ಉತ್ಪಾದನೆ ಆರಂಭವಾಗುವಷ್ಟರಲ್ಲಿ ಮಾರುಕಟ್ಟೆಯ ಪರಿಸ್ಥಿತಿ ಸಂಪೂರ್ಣ ಬದಲಾಗಿತ್ತು. ಲ್ಯಾಬ್-ಗ್ರೋನ್ ವಜ್ರಗಳ ಬೆಲೆ ತೀವ್ರವಾಗಿ ಕುಸಿದ ಪರಿಣಾಮ ಉತ್ಪಾದನಾ ವೆಚ್ಚವೇ ಮರಳದ ಪರಿಸ್ಥಿತಿ ಎದುರಾಯಿತು. ಹೂಡಿಕೆ ಮಾಡಿದ ಹಣ ಮರುಪಡೆಯಲಾಗದೆ, ಕೊನೆಗೆ ಯಂತ್ರೋಪಕರಣಗಳನ್ನು ನಷ್ಟದಲ್ಲೇ ಮಾರಾಟ ಮಾಡಿ ಆ ಉದ್ಯಮಕ್ಕೆ ತೆರೆ ಎಳೆಯಬೇಕಾಯಿತು.

ಜವಳಿ ಕ್ಷೇತ್ರದಲ್ಲಿ ಹೊಸ ಆರಂಭ..!

ವೈಫಲ್ಯದಿಂದ ಹಿಂದೆ ಸರಿಯದೆ, ಯುವ ಉದ್ಯಮಿ ಜವಳಿ ಉದ್ಯಮಕ್ಕೆ ಕಾಲಿಟ್ಟರು. ಆರಂಭದಲ್ಲಿ ನಿಧಾನಗತಿಯಲ್ಲಿ ಸಾಗುತ್ತಿದ್ದ ವ್ಯವಹಾರಕ್ಕೆ ಕೋವಿಡ್ ಸಾಂಕ್ರಾಮಿಕ ಮತ್ತೊಂದು ಹೊಡೆತ ನೀಡಿತು. ಆದರೂ ಅವರು ದೃತಿಗೆಡಲಿಲ್ಲ. ಪರಿಸ್ಥಿತಿಗೆ ಹೊಂದಿಕೊಂಡು ಉತ್ಪಾದನೆ ವಿಸ್ತರಿಸಿದರು, ಹೊಸ ಕಾರ್ಖಾನೆಗಳನ್ನು ನಿರ್ಮಿಸಿದರು ಮತ್ತು ವ್ಯಾಪಾರವನ್ನು ಕ್ರಮೇಣ ಬೆಳೆಸಿದರು.

₹100 ಕೋಟಿ ವಹಿವಾಟು; ಮುಂದಿನ ಯೋಜನೆಯನ್ನೂ ಈಗಲೇ ಸಿದ್ಧಪಡಿಸಿದ್ದಾರೆ!

ನಿರಂತರ ಪರಿಶ್ರಮದ ಫಲವಾಗಿ ಇಂದು ಅವರ ಜವಳಿ ಸಂಸ್ಥೆ ವಾರ್ಷಿಕ ಸುಮಾರು ₹100 ಕೋಟಿ ವಹಿವಾಟು ನಡೆಸುತ್ತಿದೆ. ಅಷ್ಟೇ ಅಲ್ಲ, ಮುಂದಿನ ಉದ್ಯಮದ ಯೋಜನೆಯನ್ನೂ ಅವರು ಈಗಾಗಲೇ ರೂಪಿಸಿಕೊಂಡಿದ್ದಾರೆ. ಯಶಸ್ಸು ಒಂದೇ ಪ್ರಯತ್ನದಿಂದ ಸಿಗುವುದಿಲ್ಲ; ಪ್ರತಿಯೊಂದು ವೈಫಲ್ಯವೂ ಹೊಸ ಅವಕಾಶದ ಬಾಗಿಲು ಎಂಬುದನ್ನು ಈ ಕಥೆ ಸಾಬೀತುಪಡಿಸಿದೆ.

ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾದ ಉದ್ಯಮಿಯ ಹಠ..!

ಈ ಕಥೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಮೆಚ್ಚುಗೆ ಗಳಿಸಿದೆ. ಅನೇಕರು ಉದ್ಯಮಿಯ ದೃಢಸಂಕಲ್ಪವನ್ನು ಶ್ಲಾಘಿಸಿದ್ದು, "ವೈಫಲ್ಯ ಅಂತ್ಯವಲ್ಲ, ಅದು ಮತ್ತೊಂದು ಆರಂಭ" ಎಂದು ಪ್ರತಿಕ್ರಿಯಿಸಿದ್ದಾರೆ. ಕೆಲವರು ಸೂರತ್‌ನ ಉದ್ಯಮಶೀಲ ಸಂಸ್ಕೃತಿಯನ್ನು ಹೊಗಳಿದರೆ, ಇನ್ನೂ ಕೆಲವರು ಈ ಕಥೆ ಯುವ ಉದ್ಯಮಿಗಳಿಗೆ ದೊಡ್ಡ ಸ್ಫೂರ್ತಿಯಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಉದ್ಯಮದಲ್ಲಿ ಏರಿಳಿತಗಳು ಸಹಜವಾದರೂ, ಹಠ, ನಿರಂತರ ಪ್ರಯತ್ನ ಮತ್ತು ಬದಲಾವಣೆಗೆ ಹೊಂದಿಕೊಳ್ಳುವ ಮನೋಭಾವವೇ ಅಂತಿಮವಾಗಿ ಯಶಸ್ಸಿನತ್ತ ಕೊಂಡೊಯ್ಯುತ್ತದೆ ಎಂಬ ಸಂದೇಶವನ್ನು ಈ ಘಟನೆ ಸಾರುತ್ತಿದೆ.

 

PREV
Read more Articles on
click me!

Recommended Stories

ಕಹಾನಿ ಮೆ ಟ್ವಿಸ್ಟ್.. ರಾಮಾಯಣದ 'ರಾವಣರಾಜ್ಯ'ದಲ್ಲೀಗ ದುರ್ಯೋಧನ ಫ್ಯಾನ್ಸ್ ತುಂಟಾಟ; ಟೇಕ್ ಇಟ್ ಈಸಿ!
40 ಲಕ್ಷ ಸಾಲ ತೀರಿಸಲು ಕಾಲೇಜು ಬಿಟ್ಟ ರೈತನ ಮಗ; ಇಂದು ವರ್ಷಕ್ಕೆ 80 ಲಕ್ಷ ಸಂಪಾದನೆ