News Hour: ರೈತರ ಜಮೀನಿನ ಪಹಣಿಯಲ್ಲಿ ವಕ್ಫ್‌ ಬೋರ್ಡ್‌ ಆಸ್ತಿ ನಮೂದು!

Oct 26, 2024, 11:24 PM IST

ಬೆಂಗಳೂರು (ಅ.26): ವಕ್ಫ್‌ ಬೋರ್ಡ್‌ನಿಂದ ರೈತರ ಭೂಮಿಯನ್ನು ಕಬಳಿಸುವ ಸಂಚು ನಡೆದಿದೆ. ವಿಜಯಪುರದ 13 ತಾಲೂಕಿನ ರೈತರಿಗೆ ಈ ಬಗ್ಗೆ ನೋಟಿಸ್‌ ನೀಡಿದೆ. ರೈತರ ಪಹಣಿ ಪತ್ರಗಳಲ್ಲಿ ವಕ್ಫ್‌ ಬೋರ್ಡ್‌ ಆಸ್ತಿ ಎಂದು ನಮೂದು ಬರುತ್ತಿದೆ.

ರಾಜ್ಯದಲ್ಲಿ ರೈತರ ಭೂಮಿಯನ್ನು ಕಸಿಯುವ ವಕ್ಫ್‌ ಕಬಳಿಕೆ ಕುತಂತ್ರ ಜೋರಾಗಿದೆ. ವಕ್ಫ್‌ ಆಸ್ತಿ ಸರ್ವೇ ಹೆಸರನಲ್ಲಿ ರೈತರ ಜಮೀನಿಗೆ ಕನ್ನ ಹಾಕುವ ಪ್ರಯತ್ನ ನಡೆಸಲಾಗುತ್ತಿದೆ.

ವಿಜಯಪುರದಲ್ಲಿ ರೈತರ ಭೂಮಿ ಕಬಳಿಸಲು ವಕ್ಫ್ ಬೋರ್ಡ್​ ಸಂಚು ರೂಪಿಸಿದೆ. ಜಮೀನು ನಮ್ಮದು ಎಂದು ಸಾವಿರಾರು ರೈತರಿಗೆ ನೋಟಿಸ್ ನೀಡಿದೆ. ಜಮೀರ್​ ಸೂಚನೆ ಮೇರೆಗೆ ಪಹಣಿಯಲ್ಲೂ ವಕ್ಫ್​ ಹೆಸರು ಬಂದಿದೆ.