ಕಣ್ಣೆದುರೇ ಹರಿದು ಹೋಗ್ತಿದೆ 240 ಟಿಎಂಸಿ ನೀರು! ಡ್ಯಾಂ ಗೇಟ್ ದುರಸ್ತಿ ಮಾಡದೆ ಅಧಿಕಾರಿಗಳ ನಿರ್ಲಕ್ಷ್ಯ!

ಕಣ್ಣೆದುರೇ ಹರಿದು ಹೋಗ್ತಿದೆ 240 ಟಿಎಂಸಿ ನೀರು! ಡ್ಯಾಂ ಗೇಟ್ ದುರಸ್ತಿ ಮಾಡದೆ ಅಧಿಕಾರಿಗಳ ನಿರ್ಲಕ್ಷ್ಯ!

Published : Jul 30, 2025, 05:32 PM IST
ತುಂಗಭದ್ರಾ ಜಲಾಶಯದಲ್ಲಿ ಹೂಳು ತುಂಬಿ, ಗೇಟ್ ದುರಸ್ತಿಯಾಗದೆ ಸಾಮರ್ಥ್ಯ ಕುಗ್ಗಿದೆ. 20 ಟಿಎಂಸಿ ನೀರು ವ್ಯರ್ಥವಾಗಿ ಹರಿದು ಹೋಗುತ್ತಿದ್ದು, ರೈತರಲ್ಲಿ ಆತಂಕ ಮೂಡಿದೆ. ಕಳೆದ ವರ್ಷ ಕಿತ್ತು ಹೋದ ಕ್ರಿಸ್ಟ್ ಗೇಟ್ ಇನ್ನೂ ಸರಿಪಡಿಸದಿರುವುದು ಸಮಸ್ಯೆಗೆ ಕಾರಣ.

ಮಧ್ಯ ಕರ್ನಾಟಕದ ಮೂರ್ನಾಲ್ಕು ಜಿಲ್ಲೆಗಳ ಜೀವನಾಡಿ ಆಗಿರುವ ತುಂಗಭದ್ರಾ ಜಲಾಶಯ, ರಾಜ್ಯದ 2ನೇ ಅತೀ ದೊಡ್ಡ ಜಲಾಶಯ ಆಗಿದೆ. ಆದರೆ, ಈ ಜಲಾಶಯಕ್ಕೆ ಗ್ರಹಣ ಬಡಿದಿದೆ. ಹೂಳು ತುಂಬಿಕೊಂಡು, ಗೇಟ್ ದುರಸ್ತೆ ಮಾಡಿಸದೆ ಆ ಡ್ಯಾಂನ ಶೇಖರಣೆ ಸಾಮರ್ಥ್ಯವೇ ಕಡಿಮೆಯಾಗಿದೆ. ಕಣ್ಣ ಮುಂದೆ 20 ಟಿಎಂಸಿ ನೀರು ಹರಿದು ಹೋಗುತ್ತಿದ್ದರೂ ಅದನ್ನು ಹಿಡಿದು ಸಂಗ್ರಹಣೆ ಮಾಡಿಟ್ಟುಕೊಳ್ಳಲು ಸಾಧ್ಯವೇ ಆಗುತ್ತಿಲ್ಲ ಎಂಬ ನೋವು ಕಾಡುತ್ತಿದೆ.

ಹೌದು, ಮಧ್ಯ ಕರ್ನಾಟಕದ ರೈತರ ಜೀವನಾಡಿ ಅಂದ್ರೆ ಅದು ತುಂಗಭದ್ರಾ ಜಲಾಶಯ. ಈ ಬಾರಿ ಜೂನ್‌ನಲ್ಲೇ ಜಲರಾಶಿ ಹರಿದು ಬಂದಿದೆ..ಆದ್ರೆ ಈ ಜಲಾಶಯದ ಗೇಟ್​ನಲ್ಲಿ ಉಂಟಾಗಿದ್ದ ಸಮಸ್ಯೆಯನ್ನು ಈವರೆಗೂ ಸರಿಪಡಿಸಿಲ್ಲ.. ಜಲಾಶಯದಲ್ಲಿ ನಿರೀಕ್ಷಿತ ಮಟ್ಟದಲ್ಲಿ ನೀರನ್ನು ತುಂಬಿಸಲಾಗ್ತಿಲ್ಲ.. ಕಾರಣ ಸಮನಾಂತರ ಜಲಾಶಯ ನಿರ್ಮಾಣ ಮಾಡಿಲ್ಲ. ಇಷ್ಟೇ ಅಲ್ಲಾ ಕ್ರಿಸ್ಟ್ ಗೇಟ್ ಕಿತ್ತು ಹೋಗಿ ವರ್ಷಗಳೇ ಕಳೆದರೂ ಇನ್ನೂ ಸರಿಪಡಿಸಿಲ್ಲ. ಇದು ಪ್ರಮುಖ ಕಾರಣವಾಗಿದೆ.. ಡ್ಯಾಂಗೆ 105 ಟಿಎಂಸಿ ನೀರನ್ನು ಸಂಗ್ರಹ ಮಾಡುವ ಸಾಮಾರ್ಥ್ಯವಿದ್ದರೂ, ಕೇವಲ 80 ಟಿಎಂಸಿ ಸಂಗ್ರಹ ಮಾಡಿ ಉಳಿದ ನೀರನ್ನು ಹೊರಬಿಡಲಾಗ್ತಿದೆ. ಅಂದರೆ ಒಂದು ತಿಂಗಳಿಂದ ಬರೋಬ್ಬರಿ 240 ಟಿಎಂಸಿ ನೀರನ್ನು ನದಿಗೆ ವ್ಯರ್ಥವಾಗಿ ಹರಿದುಬಿಡಲಾಗುತ್ತಿದೆ.

ಕಳೆದ ವರ್ಷ ಇದೇ ತಿಂಗಳು ತುಂಗಭದ್ರಾ ಜಲಾಶಯದ 33 ಕ್ರಿಸ್ಟ್​ ಗೇಟ್​ ಪೈಕಿ 19ನೇ ಗೇಟ್​ ನೀರಿನ ರಭಸಕ್ಕೆ ಕಿತ್ತು ಹೋಗಿತ್ತು.  ಮೂವತ್ತು ಟಿಎಂಸಿ ನೀರನ್ನು ನದಿಗೆ ಬಿಟ್ಟು ತಾತ್ಕಾಲಿಕ ಸ್ಟಾಫ್​ಗೇಟ್​ ಅಳವಡಿಸೋ ಮೂಲಕ 70 ಟಿಎಂಸಿ ಉಳಿಸಲಾಗಿತ್ತು. ಆದ್ರೇ, ನೀರು ಖಾಲಿಯಾದ ಬಳಿಕ ಪರ್ಮನೆಂಟ್ ಗೇಟ್ ಕೂಡಿಸುವಲ್ಲಿ ವಿಳಂಬವಾಗಿದೆ.. ಹೀಗಾಗಿ ಈ ಬಾರಿ ಕೇವಲ 80 ಟಿಎಂಸಿ ನೀರನ್ನು ಮಾತ್ರ ಸಂಗ್ರಹ ಮಾಡಲಾಗಿದೆ. ಹೀಗಾಗಿ ಮಾಜಿ ಸಚಿವ ಶ್ರೀರಾಮುಲು ಸರ್ಕಾರದ ವಿರುದ್ಧ ಗುಡುಗಿದ್ದರು.

ಮುಂಗಾರು ಅವಧಿಗೂ ಮುನ್ನವೇ ಶುರುವಾಗಿದೆ. ಸುರಿದ ಮಳೆಗೆ  ಜಲಾಶಯವು ಅವಧಿಗೂ ಮುನ್ನ ಭರ್ತಿಯಾಗಿತ್ತು.. ಆದ್ರೆ, ನಿರೀಕ್ಷಿತ ಮಟ್ಟದಲ್ಲಿ ನೀರು ತುಂಬಿಸದಿದ್ದಕ್ಕೆ ರೈತರು ಅತಂತ್ರ ಸ್ಥಿತಿಯಲ್ಲಿದ್ದಾರೆ.

20:04ಕುರ್ಚಿ ಕಾಳಗದಲ್ಲಿ ಕನಕಪುರ ಬಂಡೆಗೆ ಸ್ನೇಹಿತರ ಶಕ್ತಿ! ಕನಕಾಧಿಪತಿ ಡಿಕೆಗೆ ಸಂ‘ಕ್ರಾಂತಿ’, ಯುಗಾದಿ ಸಿಹಿ!
24:55ಪೊಲೀಸರು ತೋರಿಸಿದ ಫೋಟೋ ನೋಡಿ ಪ್ರೇಮಿ ಕಟ್ಟಿದ ತಾಳಿ ಕಿತ್ತೆಸೆದು ಪೋಷಕರೊಂದಿಗೆ ಬಂದ ಯುವತಿ
23:22ಕೋಗಿಲು to ಕೇರಳ, ಸಿಂಹಾಸನ ಸೀಕ್ರೆಟ್! ದೇವರ ನಾಡಿನ ದಂಗಲ್​ ಗೆಲ್ಲೋಕೆ ಸಿದ್ದಾಸ್ತ್ರ ಪ್ರಯೋಗ..!
25:27ಕಳ್ಳರ ಗೋಲ್ಡ್ ಬ್ಯುಸಿನೆಸ್​​: ಕಳ್ಳರು ಸಿಗಲ್ಲ, ಸಿಕ್ಕಿದ್ರೂ ಮಾಲು ಇರೊಲ್ಲ! 5 ರಾಬರಿ ಕೇಸ್, ಪೊಲೀಸರು ತನಿಖೆ ಠುಸ್!
20:43ಸಿಎಂ ಪಟ್ಟದ ಪಗಡೆಯಾಟದಲ್ಲಿ ಡಿಕೆಶಿ ವೈರಾಗ್ಯದ ನುಡಿ: ಸಿದ್ದು ಅಹಿಂದ ಬ್ರಹ್ಮಾಸ್ತ್ರಕ್ಕೆ ಸಿಂಹಾಸನ ದಿಗ್ಬಂಧನ?
22:34ರಾಹುಕಾಲ ರಹಸ್ಯ..! ಸಿದ್ದು ಆಪ್ತನ ಪತ್ರವ್ಯೂಹ.. ರಾಹುಲ್ ಕೈಯಲ್ಲಿ ಡಿ.ಕೆ.ಶಿವಕುಮಾರ್ ಪಟ್ಟ ಭವಿಷ್ಯ!
21:17ಸಿದ್ದು ಸಮರವ್ಯೂಹ.. ಡಿಕೆ ಚತುರದಾಳ.. ಡಿನ್ನರ್ ದಂಗಲ್: ಒಂದು ಸಭೆ.. ಮೂರು ಸಂದೇಶ.. ಚಾಣಾಕ್ಷ ಬಂಡೆ!
03:40Udupi: ಸರ್ಕಾರಿ ಶಾಲೆಗಳ ಟಾಯ್ಲೆಟ್ ಸ್ವಚ್ಛತೆಗೆ ರಥ: ಗೋಪಾಡಿ ಶ್ರೀನಿವಾಸ ರಾವ್ ಕೊಡುಗೆ!
26:12ಫ್ಲೇವರ್​.. ಚಿನ್ನು.. ಬಂಗಾರಿ ಕೊನೆಗೂ ಬಂದುಬಿಟ್ಟಳು: ಮತ್ತೆ ಮಂಜನ ಮಡಿಲು ಸೇರಿದ್ಲು ಲೀಲಾ!
23:31ಎಣ್ಣೆ ಪಾರ್ಟಿ ಮಾಡುವಾಗ್ಲೇ ಅವನ ಸ್ಕೆಚ್​ ರೆಡಿಯಾಯ್ತು: ಸ್ನೇಹಿತನನ್ನ ಕೊಂದು ಅಕ್ಕನಿಗೆ ವಿಡಿಯೋ ಕಾಲ್​ ಮಾಡಿದ್ದ!
Read more