ಜ.26 ರಂದು ಬೆಂಗಳೂರಿಗೆ 10 ಸಾವಿರ ರೈತರ ಲಗ್ಗೆ : ಕೋಡಿಹಳ್ಳಿ ಚಂದ್ರಶೇಖರ್

Jan 24, 2021, 3:59 PM IST

ಬೆಂಗಳೂರು (ಜ. 24): ಜ.26 ರಂದು ಬೆಂಗಳೂರಿನಲ್ಲಿ ರೈತರ ಪ್ರತಿಭಟನೆ ನಡೆಯುವುದು ಖಚಿತ, ಪ್ರತಿಭಟನೆಗೆ ಅವಕಾಶ ಕೊಡಲಿ, ಬಿಡಲಿ ರ್ಯಾಲಿ ಮಾಡುತ್ತೇವೆ' ಎಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ. 

ಗಣರಾಜ್ಯೋತ್ಸದ ದಿನ ದೊಡ್ಡ ಮಟ್ಟದಲ್ಲಿ ರೈತರು ರಾಜಧಾನಿಗೆ ಬಂದು ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದಾರೆ. ಸುಮಾರು 10 ಸಾವಿರ ರೈತರು ಬರುವ ನಿರೀಕ್ಷೆ ಇದೆ' ಎಂದು ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಕೋಡಿಹಳ್ಳಿ ಮಾತನಾಡಿದ್ದಾರೆ.