Mar 16, 2021, 9:01 AM IST
ಬೆಂಗಳೂರು (ಮಾ. 16): 2 ಎ ಮೀಸಲಾತಿಗಾಗಿ ಆಗ್ರಹಿಸಿ ನಡೆಸುತ್ತಿದ್ದ ಪಂಚಮಸಾಲಿ ಹೋರಾಟ ಮುಕ್ತಾಯಗೊಂಡಿದೆ. ಸಿಎಂ ನಿರ್ಧಾರವನ್ನು ಪಂಚಮಸಾಲಿ ಶ್ರೀಗಳು ಸ್ವಾಗತಿಸಿದ್ದಾರೆ. 'ನಮ್ಮ ಹೋರಾಟದಲ್ಲಿ ಬದ್ಧತೆ ಇತ್ತು. ನಮ್ಮ ಸಮುದಾಯ, ಸಚಿವರು ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ವ್ಯಕ್ತಿಗಳ ಭಿನ್ನಾಭಿಪ್ರಾಯಕ್ಕೆ ಮನ್ನಣೆ ಬೇಡ' ಎಂದು ವಚನಾನಂದ ಸ್ವಾಮಿಜಿ ಹೇಳಿದ್ದಾರೆ.