ಮಂಗಳಮುಖಿಯರಿಗೆ ನೆರವಾದ ಫೋಟೋ ಜರ್ನಲಿಸ್ಟ್

Jun 6, 2020, 12:27 PM IST

ಬೆಂಗಳೂರು(ಜೂ.06): ಸಮಾಜದ ಮುಖ್ಯವಾಹಿನಿಯಿಂದ ದೂರ ಉಳಿದಿರುವ ಮಂಗಳಮುಖಿಯರಿಗೆ ಫೋಟೋ ಜರ್ನಲಿಸ್ಟ್‌ಗಳು ನೆರವಿನ ಹಸ್ತ ಚಾಚಿದ್ದಾರೆ. ಈ ಮೂಲಕ ಕೊರೋನಾ ಸಂಕಷ್ಟದ ಸಂದರ್ಭದಲ್ಲಿ ಮಾನವೀಯತೆ ಮೆರೆದಿದ್ದಾರೆ.

ಹೌದು, ನಾಗರೀಕ ಸಮಾಜದಿಂದ ಮೂಲೆಗುಂಪಾಗಿರುವ ಮಂಗಳಮುಖಿಯರಿಗೆ ಫೋಟೋ ಜರ್ನಲಿಸ್ಟ್ ಅಸೋಸಿಯೇಷನ್ ನೆರವಾಗಿದ್ದಾರೆ. ಬೆಂಗಳೂರು ಪ್ರೆಸ್ ಕ್ಲಬ್ ಆಶ್ರಯದಲ್ಲಿ ನಗರದ ಸುತ್ತಮುತ್ತಲೂ ಇರುವ 50ಕ್ಕೂ ಹೆಚ್ಚು ಮಂಗಳಮುಖಿಯರಿಗೆ ರೇಷನ್ ಹಾಗೂ ಆಹಾರ ಸಾಮಾಗ್ರಿಗಳ ಕಿಟ್ ವಿತರಣೆ ಮಾಡಿದ್ದಾರೆ.

ಕೊರೋನಾ ಲಕ್ಷಣ ಇಲ್ಲದವರ ಪರೀಕ್ಷೆ ನಡೆಸದಿರಲು ಸರ್ಕಾರ ನಿರ್ಧಾರ..!

ಇದೇ ವೇಳೆ ತಿರಸ್ಕೃತ ಸಮುದಾಯಕ್ಕೆ ನೆರವಾಗುವಂತೆ ಜನರಿಗೆ ಮನವಿ ಮಾಡಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.