ಸುವರ್ಣ ಸ್ಪೆಷಲ್: ಬಂದಾ ನೋಡು ಡಿಕೆ ಸಾಹೇಬ..!

Jul 2, 2020, 12:54 PM IST

ಬೆಂಗಳೂರು(ಜು.02): ಕನಕಪುರದ ಬಂಡೆ, ಸೋಲಿಲ್ಲದ ಸರದಾರ, ಕಾಂಗ್ರೆಸ್ ಪಕ್ಷದ ಪಾಲಿನ ಟ್ರಬಲ್‌ಶೂಟರ್ ಡಿ.ಕೆ. ಶಿವಕುಮಾರ್ 116 ದಿನಗಳಿಂದ ಕಾಯುತ್ತಾ ಇದ್ದ ಕ್ಷಣ ಕೊನೆಗೂ ಬಂದೊದಗಿದೆ. 

ಕಾಂಗ್ರೆಸ್ ಕದನ ಕಲಿ ಡಿ.ಕೆ. ಶಿವಕುಮಾರ್ ಪಟ್ಟಾಭಿಷೇಕಕ್ಕೆ ಕ್ಷಣಗಣನೆ ಆರಂಭವಾಗಿದೆ. ಪ್ರತಿಜ್ಞೆ ಸ್ವೀಕರಿಸುವ ವಿಚಾರದಲ್ಲೂ ಡಿಕೆ ಸಾಹೇಬ ಚರಿತ್ರೆ ಸೃಷ್ಟಿಸಿದ್ದಾರೆ. ಡಿಕೆಶಿ ದರ್ಬಾರ್‌ಗೆ ಈಗ ಕೌಂಟ್‌ಡೌನ್ ಶುರುವಾಗಿದೆ.

ದೇಶದ ಐಕ್ಯತೆಗೆ ಒಂದೇ ಆಯ್ಕೆ, ಅದು ಕಾಂಗ್ರೆಸ್: ಡಿಕೆಶಿ

ತಿಹಾರ್ ಜೈಲಿನಲ್ಲಿ ಕುಳಿತು ಡಿಕೆಶಿ ಮಾಡಿದ್ದ ಪ್ರತಿಜ್ಞೆ, ಬರೋಬ್ಬರಿ 116 ದಿನಗಳ ಬಳಿಕ ಡಿಕೆಶಿ ಕೆಪಿಸಿಸಿ ಪಟ್ಟಾಭಿಷೇಕಕ್ಕೆ ಮುಹೊರ್ತ ಕೂಡಿ ಬಂದಿದೆ. ಕನಕಪುರ ಧೂಳಿನಿಂದ ಕೆಪಿಸಿಸಿ ಅಧ್ಯಕ್ಷ ಪಟ್ಟದವರೆಗೆ ಡಿಕೆಶಿ ಎನ್ನುವ ಛಲದಂಕಮಲ್ಲನ ಸಾಧನೆಯ ಅನಾವರಣ ಇಂದಿನ ಸುವರ್ಣ ಸ್ಪೆಷಲ್‌ನಲ್ಲಿ..