ಶ್ರೀಗಳ ಬಳಿ ನೋವು ತೋಡಿಕೊಂಡಿಲ್ಲ, ಘಟನೆ ಬಗ್ಗೆ ವಿವರಿಸಿದ್ದೇನೆ ಅಷ್ಟೇ: ಸಿದ್ದು

Aug 20, 2022, 9:55 AM IST

ಹಾಸನ(ಆ.20):  ರಂಭಾಪುರಿ ಶ್ರೀಗಳ ಬಳಿ ಯಾವುದೇ ನೋವು ತೋಡಿಕೊಂಡಿಲ್ಲ, ಶ್ರೀಗಳ ಬಳಿ ಏನಾಯಿತು ಅಂತ ವಿವರಿಸಿದ್ದೇನೆ ಅಷ್ಟೇ ಅಂತ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.  ಲಿಂಗಾಯತ ಧರ್ಮ ಮಾಡುವಾಗ ಏನೇನು ಮಾಡಿದ್ದೇನೆ ಅಂತ ಹೇಳಿದ್ದೇನೆ, ಲಿಂಗಾಯತ ಧರ್ಮ ವಿಭಜನೆ ಕರಿತು ಅಪಪ್ರಚಾರ ಆಗಿದೆ. ಧರ್ಮದ ಬಗ್ಗೆ ನಾನೇನು ತಲೆ ಕೆಡಿಸಿಕೊಳ್ಳಲು ಹೋಗಿರಲಿಲ್ಲ, ಶಾಮನೂರು ಶಿವಶಂಕರಪ್ಪ ಒಂದು ಅರ್ಜಿ ಕೊಟ್ಟಿದ್ದರು, ಅರ್ಜಿ ಕೊಟ್ಟಾಗಿನಿಂದ ಇದು ಶುರುವಾಗಿದೆ ಅಷ್ಟೇ ಅಂತ ತಿಳಿಸಿದ್ದಾರೆ.

ಮಹಾತ್ಮ ಗಾಂಧಿಯವರನ್ನು ಕೊಂದವರು ನನ್ನನ್ನ ಬಿಡ್ತಾರಾ? ಸಿದ್ದರಾಮಯ್ಯ ಆತಂಕ!